Advertisement

ಮಲೆನಾಡು ಮತ್ತೆ ಮಳೆಯಲ್ಲಿ ಮಿಂದೆದ್ದಿದೆ…! ಮಳೆ ಬಂದರೆ ಶಿರಾಡಿ ಹೀಗಿರುತ್ತೆ…?

Share

ಮಳೆಗಾಲ ಎಂದರೆ ಕೇವಲ ಮಳೆ ಹನಿಗಳ ಸುರಿಮಳೆ ಅಲ್ಲ. ಮಲೆನಾಡಿನಲ್ಲಿ ಅದು ಪ್ರಕೃತಿಯ ವಾರ್ಷಿಕ ಉತ್ಸವ. ಪಶ್ಚಿಮ ಘಟ್ಟದ ಬೆಟ್ಟಗಳು ಮೋಡಗಳನ್ನು ತಬ್ಬಿಕೊಂಡು ನಿಂತಾಗ, ಕಾಡಿನ ಪ್ರತಿಯೊಂದು ಎಲೆ ಹೊಸ ಜೀವ ಪಡೆಯುತ್ತದೆ. ಕಲ್ಲುಬಂಡೆಗಳ ನಡುವೆ ಹುಟ್ಟುವ ಪುಟ್ಟ ಜಲಪಾತಗಳು, ಹಸಿರು ಹೊದಿಕೆಯ ತಗ್ಗುಗಳು, ಮಂಜಿನ ಪರದೆಗಳ ನಡುವೆ ಸಾಗುವ ರಸ್ತೆ.. ಇವೆಲ್ಲವೂ ಸೇರಿ ಮಲೆನಾಡನ್ನು ಮಳೆಗಾಲದಲ್ಲಿ ಭೂಮಿಯ ಮೇಲಿನ ಸ್ವರ್ಗವನ್ನಾಗಿ ರೂಪಿಸುತ್ತವೆ.

Advertisement

ಈ ಬಾರಿ ತಿಂಗಳು ತಡವಾಗಿ ಈ ಸೊಬಗು ಆರಂಭವಾಗಿದೆ. ಪ್ರತೀ ವರ್ಷವೂ ಶಿರಾಡಿ ಘಾಟಿಯ ರಸ್ತೆಯಲ್ಲಿ ಮಳೆಗಾಲದಲ್ಲಿ ಪ್ರಯಾಣಿಸಿದವರು ಆ ಅನುಭವವನ್ನು ಮರೆಯುವುದಿಲ್ಲ. ಒಂದು ತಿರುವಿನಲ್ಲಿ ದಟ್ಟ ಮಂಜು, ಮತ್ತೊಂದು ತಿರುವಿನಲ್ಲಿ ಬೆಟ್ಟದ ಎದೆಯಿಂದ ಧುಮ್ಮಿಕ್ಕುವ ಜಲಪಾತ, ಇನ್ನೊಂದು ಕ್ಷಣದಲ್ಲಿ ಮರಗಳ ತುದಿಗೆ ತಾಕಿ ಹರಿಯುವ ಮೋಡಗಳು, ಮಳೆಯ ಹನಿಗಳು ಸಣ್ಣಕೆ ಬೀಳುವ ಸೊಬಗು.  ಹೀಗಾಗಿ ಈ ಸೊಬಗು ಸವಿಯಬೇಕು. ಆದರೆ ಈ ವರ್ಷ ತಡವಾಗಿದೆ.ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ದಕ್ಷಿಣ ಕನ್ನಡವನ್ನು ಹಾಸನದೊಂದಿಗೆ ಸಂಪರ್ಕಿಸುವ ಶಿರಾಡಿ ಘಾಟಿ ಕೇವಲ ರಾಷ್ಟ್ರೀಯ ಹೆದ್ದಾರಿ ಅಲ್ಲ.  ಅದು ಪಶ್ಚಿಮ ಘಟ್ಟದ ಜೀವಂತ ಪರಿಸರ ವ್ಯವಸ್ಥೆಯ ನೋಟ. ಮಳೆಗಾಲ ಆರಂಭವಾಗುತ್ತಿದ್ದಂತೆ ಒಣಗಿದ್ದ ಬೆಟ್ಟಗಳು ಹಸಿರು ಹೊದಿಕೆ ತೊಟ್ಟು ನಿಂತುಕೊಳ್ಳುತ್ತವೆ. ಸಣ್ಣ ಹಳ್ಳಗಳು ಉಕ್ಕಿ ಹರಿಯುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ ಅನೇಕ ತಾತ್ಕಾಲಿಕ ಜಲಪಾತಗಳು ಕಾಣಿಸಿಕೊಳ್ಳುತ್ತವೆ.  ಬೆಳಗಿನ ಹೊತ್ತಿನಲ್ಲಿ ಬೆಟ್ಟಗಳ ನಡುವೆ ಹರಡಿಕೊಂಡಿರುವ ಮಂಜು, ಮಧ್ಯಾಹ್ನದ ತುಂತುರು ಮಳೆ, ಸಂಜೆ ವೇಳೆಗೆ ಕೇಳಿಬರುವ ಕಪ್ಪೆಗಳ ಕೂಗು ಹಾಗೂ ಪಕ್ಷಿಗಳ ಧ್ವನಿ , ಇವೆಲ್ಲವೂ ನಗರ ಜೀವನದ ಗದ್ದಲದಿಂದ ದೂರವಾದ ಅನುಭವವನ್ನು ನೀಡುತ್ತವೆ. ಈಗೀಗ ವಾಹನ ಸದ್ದಿನ ನಡುವೆ ಇದೂ ಮರೆಯಾಗುತ್ತಿದೆ.

Advertisement

ಈ ಮಳೆಯೇ ಕಾವೇರಿ, ನೇತ್ರಾವತಿ, ಕುಮಾರಧಾರಾ ಸೇರಿದಂತೆ ದಕ್ಷಿಣ ಭಾರತದ ಅನೇಕ ನದಿಗಳಿಗೆ ಜೀವ ತುಂಬುತ್ತದೆ. ಇದೇ ಮಳೆಯ ನೀರು ಕಾಫಿ, ಅಡಿಕೆ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಹೊಲಗಳಿಗೆ ಹೊಸ ಚೈತನ್ಯ ನೀಡುತ್ತದೆ. ಆದ್ದರಿಂದ ಮಲೆನಾಡಿನ ಮಳೆ ಕೇವಲ ಪ್ರವಾಸಿಗರ ಕ್ಯಾಮೆರಾದಲ್ಲಿನ ಸುಂದರ ಚಿತ್ರವಲ್ಲ, ಲಕ್ಷಾಂತರ ರೈತರ ಬದುಕಿನ ಆಶಾಕಿರಣವೂ ಹೌದು. ಇದಕ್ಕಾಗಿ ಮಳೆಗಾಗಿ ಎಲ್ಲರ ಚಿತ್ತ. ಈ ಮಳೆಯೇ ಈಗ ಬದುಕಿನ ಆಸರೆ. ಕೃಷಿಕರಿಗೆ ಭವಿಷ್ಯದ ಚಿಂತೆಯಾದರೆ, ಕ್ಯಾಮರಾ ಹೊತ್ತು ಕಾಡಿನ ಸೊಗಬು ಸವಿಯಲು ಬಂದವರಿಗೆ ಇದು ರೀಫ್ರೆಶ್‌ ಮೆಂಟ್.

Advertisement

Advertisement

ಮಳೆಗಾಲ-ಜವಾಬ್ದಾರಿಯೂ ಇರಲಿ‌
ಮಳೆಗಾಲದಲ್ಲಿ ಮಲೆನಾಡಿನ ಸೌಂದರ್ಯವನ್ನು ಸವಿಯಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು, ಜಲಪಾತಗಳ ಬಳಿ ಅಪಾಯಕಾರಿ ಸೆಲ್ಫಿ ತೆಗೆಯುವುದು, ಕಾಡು ಪ್ರದೇಶಗಳಲ್ಲಿ ಗದ್ದಲ ಮಾಡುವುದು ಪ್ರಕೃತಿಗೆ ಹಾನಿ ಉಂಟುಮಾಡುತ್ತದೆ. ಜವಾಬ್ದಾರಿಯುತ ಪ್ರವಾಸವೇ ಮಲೆನಾಡಿನ ಸೌಂದರ್ಯವನ್ನು ಮುಂದಿನ ಪೀಳಿಗೆಗೂ ಉಳಿಸಬಲ್ಲದು. ಮಳೆಗಾಲದಲ್ಲಿ ಗಮನಿಸಬೇಕಾದ ಸಂಗತಿಗಳು ಕೆಲವು ಪ್ರಮುಖ ಸಂಗತಿಗಳು ಇವೆ. ಹವಾಮಾನ ಮುನ್ಸೂಚನೆ ಪರಿಶೀಲಿಸಿಯೇ ಪ್ರಯಾಣಿಸಬೇಕು. ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸಲೇಬಾರದು.  ಜಲಪಾತಗಳ ಬಳಿ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಂದಿಗೂ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಅಲ್ಲೇ ಬಿಟ್ಟುಬರಲೇಬಾರದು. ಕಾಡುಪ್ರಾಣಿಗಳಿಗೆ ಆಹಾರ ನೀಡುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಲೇಬೇಕು.

Advertisement

ಮಳೆಯನ್ನು ಪದಗಳಲ್ಲಿ ಸಂಪೂರ್ಣವಾಗಿ ವರ್ಣಿಸಲು ಸಾಧ್ಯವಿಲ್ಲ.ಅದನ್ನು ಅನುಭವಿಸಬೇಕು. ಮಳೆಗಾಲದಲ್ಲಿ ಶಿರಾಡಿ ಘಾಟಿಯ ಮೂಲಕ ಒಮ್ಮೆ ಪ್ರಯಾಣಿಸಿದರೆ, ಪಶ್ಚಿಮ ಘಟ್ಟವನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣವೆಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಉತ್ತರ ಪ್ರಕೃತಿಯೇ ನೀಡುತ್ತದೆ. ಈ ಮಳೆಗಾಲದ ಸಮಯದಲ್ಲಿ ಕಾರಿನ ಗಾಜಿನ ಮೇಲೆ ಜಾರುವ ಮಳೆಯ ಹನಿಗಳು, ಮಂಜಿನೊಳಗೆ ಮಾಯವಾಗುವ ರಸ್ತೆ, ಕಾಡಿನ ತಾಜಾ ಮಣ್ಣಿನ ಪರಿಮಳ, ಬೆಟ್ಟದ ತುದಿಯಿಂದ ಧುಮ್ಮಿಕ್ಕುವ ಜಲಪಾತಗಳು … ಇವೆಲ್ಲವೂ ಜೀವನದ ವೇಗವನ್ನು ಕ್ಷಣಮಾತ್ರ ನಿಧಾನಗೊಳಿಸಿ, ಪ್ರಕೃತಿಯೊಡನೆ ಮತ್ತೆ ಬೆಸೆದುಕೊಳ್ಳುವ ಅವಕಾಶ ನೀಡುತ್ತವೆ. ಇದಕ್ಕೆ ನೋಡಿ, ಮಳೆಯೂ ಕಾಲಕಾಲಕ್ಕೆ ಬರಬೇಕು. ಈ ಬಾರಿ ಈ ಅವಕಾಶಕ್ಕೆ ಒಂದು ತಿಂಗಳು ವಿಳಂಬವಾಯ್ತು.  ಅದಕ್ಕಾಗಿಯೇ ಪಶ್ವಿಮ ಘಟ್ಟ ಉಳಿಸಿ ಎನ್ನುವ ಕೂಗು ಕೂಡಾ ಹೆಚ್ಚಾಗುತ್ತಿರುವುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The monsoon transforms Karnataka’s Malnad region and Shiradi Ghat into one of India’s most breathtaking travel destinations. Mist-covered mountains, seasonal waterfalls, evergreen forests, and rain-fed rivers create a spectacular landscape while also sustaining agriculture and biodiversity. Responsible tourism is essential to preserve this fragile ecosystem.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೊರತೆ ಆತಂಕ – ಬೆಳೆ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿ – ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮಳೆ ಕೊರತೆಯ ಸಾಧ್ಯತೆಯಿರುವುದರಿಂದ ರೈತರು ಬೆಳೆ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವಂತೆ…

50 minutes ago

ಮಲೆನಾಡು ಸೇರಿದಂತೆ ಹಲವೆಡೆ ಮುಂಗಾರು ಮಳೆ ಚುರುಕು-ಕೃಷಿಗೆ ಹೊಸ ಚೈತನ್ಯ, ರೈತರಲ್ಲಿ ಖುಷಿ

ಒಂದು ತಿಂಗಳ ತಡದ ಬಳಿಕ ಮಲೆನಾಡು ಮತ್ತು ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರಲ್ಲಿ…

7 hours ago

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ

ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್‌ ಬಳಸಿ ವಿಜ್ಞಾನಿಗಳು ವಸಡು…

2 days ago

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…

3 days ago

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…

3 days ago

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ

ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

3 days ago