ಹಸು(Cow), ಎಮ್ಮೆ(Buffalo) ಸಾಕಣೆಗಿಂತ ಹಂದಿ ಸಾಕಣೆ(Pig Farming) ಅಗ್ಗವಾಗಿದ್ದು, ಅದರಿಂದ ಲಾಭ(Profit) ಹೆಚ್ಚು. ಇದರ ಮಾಂಸವು(Meat) ತುಂಬಾ ಪೌಷ್ಟಿಕವಾಗಿದೆ. ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಇದರ ಬೇಡಿಕೆ ಇದೆ. ಹಂದಿ ಸಾಕಾಣಿಕೆ ಕೂಡಾ ಲಾಭದಾಯಕವಾಗುವಂತೆ ಮಾಡಬಹುದಾಗಿದೆ.
ವಿಶ್ವದಲ್ಲಿ ಚೀನಾ, ರಷ್ಯಾ, ಅಮೆರಿಕ, ಬ್ರೆಜಿಲ್ ಮತ್ತು ಜರ್ಮನಿಯಲ್ಲಿ ಹಂದಿ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಭಾರತದಲ್ಲಿ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಆಂಧ್ರಪ್ರದೇಶ, ಛತ್ತೀಸ್ಗಢ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಒರಿಸ್ಸಾ ಇತ್ಯಾದಿ ರಾಜ್ಯಗಳಲ್ಲಿ ಹಂದಿ ಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಹಾಗಿದ್ದರೆ ವಾಣಿಜ್ಯ ಹಂದಿ ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಹಂದಿ ಸಾಕಣೆ ಹೇಗೆ..? : ವಾಣಿಜ್ಯ ಹಂದಿ ಸಾಕಣೆಗೆ ಸರಿಯಾದ ಭೂಮಿಯನ್ನು ಆಯ್ಕೆ ಮಾಡುವುದು ಅವಶ್ಯಕ. ಹಾಗಾದರೆ ಹಂದಿ ಸಾಕಣೆಗೆ ಭೂಮಿಯನ್ನು ಆಯ್ಕೆಮಾಡುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯೋಣ.
ಹಂದಿ ತಳಿಗಳು: ಡುರೊಕ್, ಯಾರ್ಕ್ ಶೈರ್, ಹಾಂಪ್ ಶೈರ್, ಲ್ಯಾಂಡ್ರೆಸ್, ಬರ್ಕ್ಶೈರ್, ಚೆಸ್ಟರ್ವೈಟ್ ಇತ್ಯಾದಿ. ರಫ್ತು ಮಾರುಕಟ್ಟೆಯಲ್ಲಿ ಹಂದಿಗೆ ಉತ್ತಮ ಬೇಡಿಕೆಯಿದೆ. ಹಂದಿ ಮಾಂಸ ಮಾತ್ರವಲ್ಲದೆ, ಹಂದಿ ಕೊಬ್ಬು, ಚರ್ಮ, ಕೂದಲು, ಮತ್ತು ಮೂಳೆಗಳಂತಹ ಉತ್ಪನ್ನಗಳಿಗೆ 1 ಬೇಡಿಕೆ ಇದೆ. ಇವುಗಳನ್ನು ಕೆಲವು ಐಷಾರಾಮಿ ವಸ್ತುಗಳ ತಯಾರಿಕೆಗೆ ಬಳಸಲಾಗ್ತಿದೆ. ಯಶಸ್ವಿ ಹಂದಿ ಸಾಕಣೆ ಕೃಷಿಕನಾಗಲು, ಸರಿಯಾದ ಬಿಸಿನೆಸ್ ಪ್ಲಾನ್ ಬೇಕು, ಹಂದಿಗಳ ತಳಿಗಳ ಆಯ್ಕೆ ಬಗ್ಗೆ ಗೊತ್ತಿರಬೇಕು, ಹಂದಿಗಳ ನಿರ್ವಹಣೆ ಬಗ್ಗೆ ತಿಳಿದಿರಬೇಕು, ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಹಡೆಯಲು ಏನು ಮಾಡಬೇಕು ಎಂಬ ಅಂದಾಜಿರಬೇಕು, ಹಂದಿ ಸಾಕಣೆಗೆ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಗೊತ್ತಿರಬೇಕು ಆದ್ರೆ ಇವೆಲ್ಲವನ್ನೂ ಕಲಿಯುವುದಾದ್ರು ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿದ್ರೆ, ಚಿಂತೆ ಮಾಡ್ಕೊಬೇಡಿ. ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿರುವ ಹಂದಿ ಸಾಕಣೆಯಲ್ಲಿ ಯಶಸ್ಸು ಕಾಣೋದು ಹೇಗೆ? ಎಂಬ ಕೋರ್ಸ್ನಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಹಕ್ಕಾ ಉತ್ತರ ಸಿಗುತ್ತದೆ. ಹಂದಿ ಸಾಕಣೆಯಲ್ಲಿ ಯಶಸ್ಸು ಗಳಿಸಿ ಲಕ್ಷದಿಂದ ಕೋಟಿಯವರೆಗೆ ಸಂಪಾದಿಸುತ್ತಿರುವವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ.
ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…
ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…
ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…
ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…