Advertisement
Opinion

ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು ಏಕೆ…. ? | ರಿಫೈನ್ಡ್ ಆಯಿಲ್ ಗಳು ಅಪಾಯಕಾರಿ ಹೇಗೆ.. ?

Share

ನಾನು ಇಂಗ್ಲೆಂಡಿನಲ್ಲಿದ್ದಾಗ(England) ಭಾರತೀಯರೊಬ್ಬರು, ಭಾರತ(India) ಜಗತ್ತಿನಲ್ಲಿ ಅತಿ ಹೆಚ್ಚು ಪದವೀಧರರನ್ನು ಸೃಷ್ಟಿಸುತ್ತಿದೆ, ಆದರೆ ಅವರೆಲ್ಲ ಅವಿದ್ಯಾವಂತರು..! ಎಂದರು. ಅದು ಹೇಗೆ? ಎಂಬ ನನ್ನ ಪ್ರಶ್ನೆಗೆ ಅವರು, ಮೂರು ಕಿಲೋ ಕಡಲೆ ಕಾಯಿಯಿಂದ ಒಂದು ಕಿಲೋ ಕಡಲೆ ಕಾಯಿ ಎಣ್ಣೆ(Ground nut oil) ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕಡಲೆಕಾಯಿಯ ಮತ್ತು ಅದರ ಎಣ್ಣೆಯ ಬೆಲೆ ಒಂದೇ ಇರುತ್ತದೆ..!!ಇದು ಹೇಗೆ ಸಾಧ್ಯ? ಎಂಬ ಗಣಿತ ಗೊತ್ತಿಲ್ಲದವರಿಗೆ ಅವಿದ್ಯಾವಂತರು, ಎಂದು ಕರೆದರೆ ತಪ್ಪೇನಿದೆ? ಅಂದರು. ಅವರ ವಾದವನ್ನು ನಾನು ಒಪ್ಪಿಕೊಂಡೆ.

Advertisement
Advertisement

ಗಲ್ಫ್ ದೇಶಗಳಲ್ಲಿ ಕ್ರೂಡ್ ಆಯಿಲ್ ನಿಂದ ಪೆಟ್ರೋಲ್ – ಡೀಸೆಲ್(Petrol – Diesel) ಹೊರ ತೆಗೆದಾಗ ಬರುವ ಮಿನರಲ್ ಆಯಿಲ್(Mineral Oil), ಜಗತ್ತಿನಲ್ಲಿ ಅತಿ ಹೆಚ್ಚು ಉತ್ಪಾದನೆ ಆಗುವ ತ್ಯಾಜ್ಯ ವಸ್ತು. ಅದನ್ನು ಭೂಮಿಗೆ(Land) ಹಾಕಿದರೆ ಅಲ್ಲಿ ಬಂಜರುಭೂಮಿ, ಸಮುದ್ರಕ್ಕೆ(Ocean) ಹಾಕಿದರೆ ಪ್ರಾಣಿಗಳು ಸಾಯುತ್ತವೆ. ಹೇಗೋ ಸಾಯುತ್ತಾರೆ, ಸ್ವಲ್ಪ ಬೇಗ ಸಾಯಲಿ ಎಂದು ಭಾರತಕ್ಕೆ ಪುಕ್ಕಟೆಯಾಗಿ ಕಳುಹಿಸುತ್ತಾರೆ. ಆರೋಗ್ಯದ ಕಡೆ ಗಮನವಿರದ, ಪುಕ್ಕಟೆಯಾಗಿ ಸಿಕ್ಕರೆ ಯಾವುದನ್ನೂ ಕೊಟ್ಟರೂ ಸೇವಿಸುವ ಭಾರತೀಯರ, ಅಡಿಗೆ ಎಣ್ಣೆ ಎಂದು ಬಳಸುವ ಎಣ್ಣೆಯಲ್ಲಿ ಮಿನರಲ್ ಆಯಿಲ್ ಹೇರಳವಾಗಿದೆ! ಜೊತೆಗೆ ರಿಫೈನ್ಡ್ ಆಯಿಲ್ ಎಂಬುದು ಒಂದು ಸತ್ತ ಎಣ್ಣೆಯಾಗಿದ್ದು ಅದರಿಂದ ದೇಹಕ್ಕೆ ಉಪಯುಕ್ತವಾದದ್ದು ಏನೂ ದೊರೆಯುವುದಿಲ್ಲ!

Advertisement

ರಿಫೈನ್ಡ್ ಆಯಿಲ್ ಬಳಕೆಯಿಂದ ಕೀಲು ನೋವು, ಕ್ಯಾನ್ಸರ್, ಶ್ವಾಸಕೋಶದ ತೊಂದರೆ, ಮುಂತಾದ ರೋಗಗಳು ಬರುತ್ತವೆ ಎಂಬ ವರದಿಗಳು ಇವೆ. ರಕ್ತನಾಳಗಳಲ್ಲಿ ಕಟ್ಟಿಕೊಂಡು ಹೃದಯದ ಕಾಯಿಲೆಗಳು, ಹೃದಯಸ್ತಂಬನ, ಚಿಕ್ಕ ವಯಸ್ಸಿನಲ್ಲಿಯೇ ಸಾವು ಇವುಗಳನ್ನು ತರುತ್ತದೆ. ಮನುಷ್ಯನ ಆಯುಸ್ಸು ಕಡಿಮೆಗೊಳ್ಳುತ್ತದೆ. ನಮ್ಮ ಜೀವ ತಂತುಗಳಲ್ಲಿ ಬದಲಾವಣೆಯಾಗಿ ಅಶಕ್ತ ಮುಂದಿನ ಪೀಳಿಗೆ ಜನಿಸುತ್ತದೆ. ಗರ್ಭಕೋಶದಲ್ಲಿ ಕಟ್ಟಿಕೊಂಡು ಗರ್ಭ ನಿಲ್ಲದಂತೆ ಮಾಡುತ್ತದೆ!! ಇನ್ನೇನು ಬೇಕು? ಒಟ್ಟಿನಲ್ಲಿ ಭೂಮಿಗೆ ಹಾಕಿದರೆ ಬಂಜರಭೂಮಿ, ತಿಂದರೆ ಬಂಜೆ!

ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಿದ್ಯಾವಂತರು – ಶ್ರೀಮಂತರು ಕೂಡ ದೇಹಕ್ಕೆ ಅನುಪಯುಕ್ತವಾದ ರಿಫೈನ್ಡ್ ಆಯಿಲ್ ಬಳಸಿ ತಮ್ಮ ಸಂತಾನವನ್ನು ಇಲ್ಲವಾಗಿಸಿಕೊಳ್ಳಲು ಬಿಜಿಯಾಗಿದ್ದಾರೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಕೀಲು ನೋವಿನಿಂದ ಬಳಲದವರು ಸಿಗುವುದೇ ಅಸಾಧ್ಯ..! ಆಸ್ಪತ್ರೆಗಳು ಪ್ರತಿಯೊಂದು ಊರಿನಲ್ಲೂ ಕ್ಯಾನ್ಸರ್, ಹೃದಯದ ಕಾಯಿಲೆ, ಸಕ್ಕರೆ ಕಾಯಿಲೆ, ಮುಂತಾದ ರೋಗಿಗಳಿಂದ ತುಂಬಿ ತುಳುಕುತ್ತಿವೆ. ರಿಫೈನ್ಡ್ ಆಯಿಲ್ ಬಳಕೆ ನಿಲ್ಲಿಸಿ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಿದ ನಂತರ ಆರೋಗ್ಯ ಸುಧಾರಿಸಿದ ಸಾಕಷ್ಟು ಉದಾಹರಣೆಗಳು ನಮ್ಮೆದುರಿಗೆ ಇವೆ. ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಚಿಂತೆ ಇಲ್ಲದ ತಂದೆ- ತಾಯಿಗಳಿಂದ ಭಾರತವನ್ನು ಉಳಿಸುವುದು ಹೇಗೆ?

Advertisement

ಕಿರು ಪ್ರಯತ್ನವಾಗಿ ಧಾರವಾಡದಲ್ಲಿ ಗಾಣದ ಎಣ್ಣೆ ತರಬೇತಿ ಶಿಬಿರ ಗಳನ್ನು ರಾಜೀವ ದೀಕ್ಷಿತ ಬಳಗದ ವತಿಯಿಂದ ನಡೆಸಲಾಗುತ್ತಿದೆ. ಲಾಭ ಇಲ್ಲವೆಂದು 1970 ರಲ್ಲಿ ಭಾರತದಲ್ಲಿದ್ದ ಆರೂವರೆ ಲಕ್ಷ ಗಾಣಗಳು ಮುಚ್ಚಿ ಹೋದವು. ಆದರೆ ಎಣ್ಣೆ ದಂಧೆಯಲ್ಲಿ ತೊಡಗಿರುವ ದುರುಳರು ಇಂದು ಕ್ರಿಕೆಟ್ ಸ್ಪಾನ್ಸರ್ ಮಾಡುವಷ್ಟರ ಮಟ್ಟಿಗೆ ಶ್ರೀಮಂತರಾಗಿದ್ದಾರೆ! ಅದು ಹೇಗಾಯಿತು ಎಂದು ಚಿಂತೆ ಮಾಡುವ ಜ್ಞಾನಿಗಳು ಇಂದು ಇಲ್ಲ!! ದಯವಿಟ್ಟು ನಿಮ್ಮ ಪೀಳಿಗೆಯ ಉಳಿವಿಗಾಗಿ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಿ. ಸಾಧ್ಯವಿದ್ದರೆ ನಿಮ್ಮ ಊರಿನಲ್ಲಿ ಒಂದು ಗಾಣ ಹಾಕಿ, ಊರವರ ಆರೋಗ್ಯ ಸುಧಾರಿಸಿ.

ಬರಹ :
ಡಾ. ಶ್ರೀಶೈಲ ಬದಾಮಿ,
ಧಾರವಾಡ 9480640182
Advertisement

Use of refined oil can cause joint pain, cancer, lung problems, etc. It builds up in blood vessels and causes heart diseases, heart attacks, and early death. Man’s life span is reduced. A change in our life fiber will result in a disabled next generation. It binds in the uterus and prevents pregnancy!! What else do you need? In general, if you put it on the land, it is barren land, if you eat it, it is barren!

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

1 hour ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

2 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

2 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

2 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

5 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

7 hours ago