ನಾನೊಬ್ಬಳು ದ್ವಿತೀಯ ಪಿಯುಸಿ ಹುಡುಗಿ ಪರೀಕ್ಷೆಯ ದಿನದ ಸಮಯದಲ್ಲಿ ನಾನೊಬ್ಬಳೇ ಮನೆಯಲ್ಲಿ ಓದುವ ಕ್ಷಣ. ಸಂಬಂಧಿಕರ ಮನೆಯಲ್ಲಿ ವಿಜ್ರಂಭಣೆಯಿಂದ ನಡೆಯುವ ಮದುವೆ ಸಮಾರಂಭಕ್ಕೆ ಮನೆಯವರೆಲ್ಲಾ ನೀನು ಬರಬೇಡ ನಿನಗೆ ಪರೀಕ್ಷೆರಲ್ಲವೇ ಓದಿ ಎಲ್ಲಾ ಮುಗಿಸು ಯಾರು ಇರಲ್ಲ ಮನೆಯಲ್ಲಿ ಯಾರದ್ದೂ ಸಹ ಕಿರಿಕಿರಿ ಗಲಭೆಗಳಿಲ್ಲವಲ್ಲ ಎಂದು ಹೊರಟು ಹೋದರು.
ನಾನು ಕೋಪ ಬೇಜಾರವನ್ನು ಮುಂದಿಟ್ಟುಕೊಂಡು ಮನಸಿಲ್ಲದಿದ್ದರು ಓದಿ ಮುಗಿಸುವೆ ಎಂದು ಕುಳಿತುಕೊಂಡೆ. ಓದಲು ಕೂತ ಕ್ಷಣ ಒಂದು ಮಾತ್ರ ನೆನಪು ಇದೆ…. ಮತ್ತೇನಾಯಿತು ಎಂದು ಅರಿವಿಲ್ಲ. ಹೊಟ್ಟೆಗೆ ಊಟ, ನೀರು ಇಲ್ಲದೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡು ಓದಿರೋದರಲ್ಲಿ ಕಣ್ಣು ಮುಚ್ಚಿ ನಿದ್ದೆ ಹೋಗಿರುವುದು ಗೊತ್ತೇ ಇಲ್ಲ.
ಎಚ್ಚರವಾದಾಗ ಎದ್ದು ನೋಡಿದರೇ ಏನೂ ಗೊತ್ತಾಗುತ್ತಿಲ್ಲ ಓದಲು ಹಿಡಿದಿದ್ದ ಪುಸ್ತಕಗಳು ಎಲ್ಲಾ ಹರಿದು ನೆಲದಲ್ಲಿ ಉರುಳಿ ಬಿದ್ದಿದೆ. ಬಾಗಿಲು ಕಿಟಕಿಗಳೆಲ್ಲ ತೆರೆದು ಗಾಳಿಗೆ ಬಡಿಯುತ್ತಾ ಶಬ್ದ ಬರುತ್ತಿತ್ತು. ಗಡಿಯಾರದ ಕಡೆ ಕಣ್ಣು ಹಾಯಿಸಿದರೆ ಒಂದು ಕ್ಷಣ ಎದೆಗೆ ಬಡಿದಂತಿತ್ತು. ಹೊತ್ತು ದಾಟಿ ರಾತ್ರಿ 8 ಗಂಟೆ ಆಗಿ ಬಿಟ್ಟಿತ್ತು.
ಮನೆಯಲ್ಲಾ ಹುಡುಕಾಡಿದರೂ ಅಮ್ಮ ಸಿಗಲೇ ಇಲ್ಲ. ಅಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಮರೆತುಬಿಟ್ಟು ಹುಡುಕಾಡಿರುವೆ ಎಂದು ತಡವಾಗಿ ಅರಿವಾಯಿತು. ಕಣ್ಣೀರು ಹಾಕುತ್ತಲೇ ತಿನ್ನಲು ಏನಾರು ಮಾಡಬೇಕೆಂದು ಅಡುಗೆ ಮನೆ ಕಡೆಗೆ ಹೋಗುವೆ. ಮಾಡಲು ಏನೂ ಗೊತ್ತಿಲ್ಲದಿದ್ದರೂ, ಮಾಡಿಕೊಂಡು ತಿನ್ನುವುದು ಅನಿವಾರ್ಯವಾಗಿದ್ದರಿಂದ ಅನ್ನ ಬೇಯಿಸಿ ಹೆಂಗೋ ಒಂದು ಸಪ್ಪೆ ಸಪ್ಪೆಯಾದ ಸಾಂಬಾರು ಮಾಡಿ ಊಟ ಮಾಡಿದೆ ಅದು 10 ಗಂಟೆ ಕಳೆದ ನಂತರ.
ಇನ್ನೂ ಮಲಗುವುದಾ… ಅಲ್ಲಾ… ಓದುವುದಾ ಎಂದು ಅರಿತಿಲ್ಲ… ಈಚೆ ನೋಡಿದರೆ ನಾಳೆಯ ಪರೀಕ್ಷೆಗೆ ಬೇಕಾದ ಪಾಠಗಳೇ ಓದಿ ಆಗಿಲ್ಲ. ಮಲಗುದು ಎಂದರೇ ಮನೆಯಲ್ಲಿ ಯಾರಿಲ್ಲ ಎಂಬ ಭಯ. ಈ ಕರಾಳ ದಿನ ಎಂದೂ ನನಗೆ ಬರುವುದು ಬೇಡ ಎಂದೂ ದೇವರ ಮೊರೆ ಹೋದೆ.
ದೇವರನ್ನು ಪ್ರಾರ್ಥಿಸುವಾಗಲೇ ಹೊರಗಡೆಯಿಂದ ಏನೋ ವಿಚಿತ್ರ ಧ್ವನಿಯಲ್ಲಿ ನಾಯಿಗಳ ಕೂಗು. ಹೊರಗಡೆಯೂ ಹೋಗದೇ ಕುಳಿತಲ್ಲೇ ಕಣ್ಣು ಮುಚ್ಚಿ ಜೋರಾಗಿ ಅಳುತ್ತಾ ಅಲ್ಲೇ ಕುಳಿತೇ. ಭಯದಲ್ಲಿ ಅದೊಂದು ರಾತ್ರಿಯನ್ನು ಕಳೆದುಕೊಂಡಿರುವೆ.
ಮರುದಿನ ಕಾಲೇಜಿಗೆ ಹೋಗಿ ಗೆಳತಿಯರೊಂದಿಗೆ ನಡೆದ ಘಟನೆಯನ್ನು ಹೇಳುತ್ತಾ ದುಃಖ ಪಟ್ಟಿರುವೆ. ನಾನು ಎಷ್ಟು ದೊಡ್ಡವಳಾದರೂ, ಎಲ್ಲೇ ಹೋದರೂ ಇದೊಂದು ಕರಾಳ ಕ್ಷಣವನ್ನು ಎಂದೂ ಮರೆಯಲ್ಲ ಅಂದು ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಗೆಳತಿಯನ್ನು ಅಪ್ಪಿಕೊಂಡು ಮೌನವಾದೆ.ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…