ಸುಳ್ಯದ ಎಲಿಮಲೆ ಇಕ್ರಾಮುಸ್ಸುನ್ನ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭವು ನಾಳೆ ಜನವರಿ 29 ಮತ್ತು 30 ರಂದು ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸೈಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್ ಮುದರ್ರಿಸ್ ಎಲಿಮಲೆ ಯವರ ನೇತೃತ್ವದಲ್ಲಿ ನಡೆಸುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಇದರ ಎರಡನೇ ಸನದುದಾನ ಮಹಾಸಮ್ಮೇಳನ ಹಾಗೂ ಎಲಿಮಲೆ ಯುವಕರ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮವು ಗುರುವಾರ ಮತ್ತು ಶುಕ್ರವಾರ ಇಕ್ರಾಮುಸ್ಸುನ್ನ ಕ್ಯಾಂಪಸ್ ಎಲಿಮಲೆಯಲ್ಲಿ ಜರುಗಲಿದೆ.
ಜನವರಿ 29 ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಮಹಿಳೆಯರಿಗಾಗಿ ವಿಶೇಷ ತರಬೇತಿ ಶಿಬಿರ, ಎಲಿಮಲೆ ತಂಗಳ್ ರವರ ಪಿತಾಮಹರ ಆಂಡ್ ನೇರ್ಚೆ, ಬೃಹತ್ ಬುರ್ಧಾ ಮಜ್ಲಿಸ್, ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ, ಜಿಸಿಸಿ ಎಲಿಮಲೆ ಗಲ್ಫ್ ಮೀಟ್, ಹಳೆ ವಿಧ್ಯಾರ್ಥಿಗಳ ಅಲುಮ್ನಿ ಮೀಟ್ ಧಾರ್ಮಿಕ ಉಪನ್ಯಾಸ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬಹು: ನೂರುಸ್ಸಾದಾತ್ ಬಾಯಾರ್ ತಂಙಳ್, ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್, ಮಾಣಿ ಉಸ್ತಾದ್, ಕರ್ನಾಟಕ ವಿಧಾನಸಬಾಧ್ಯಕ್ಷರಾದ ಜನಾಬ್ ಯುಟಿ ಖಾದರ್ ಫರೀದ್, ಟಿಎಂ ಶಹೀದ್, ಪ್ರಖ್ಯಾತ ಬುರ್ದಾ ಗಾಯಕರಾದ ಕಾಸಿಮ್ ಕಾಮಿಲ್ ಸಖಾಫಿ, ಸಮದ್ ಸಖಾಫಿ, ಅಝರ್ ಕಲ್ಲೂರು, ಆಸಿಫ್, ಮಿಕ್ದಾದ್ ಹಾಗೂ ಕರ್ನಾಟಕದ ಪ್ರಖ್ಯಾತ ನಅತ್ ಗಾಯಕರಾದ ನಬೀಲ್ ಬರಕಾತಿ ಬೆಂಗಳೂರು ಹಾಗೂ ಸಾಮಾಜಿಕ ರಾಜಕೀಯ ಧಾರ್ಮಿಕ ನೇತಾರರು ಭಾಗವಹಸದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…
E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…