Advertisement
MIRROR FOCUS

ಸುಳ್ಯದ ಸಮಸ್ಯೆಗಳೇ ಸವಾಲುಗಳು | ಚರ್ಚೆಗೆ ಕಾರಣವಾದ “ಕೀಬೋರ್ಡ್‌ ವಾರಿಯರ್” ಪದ ಬಳಕೆ | ಸುಳ್ಯದ ಸಮಸ್ಯೆಗಳ ಪಟ್ಟಿ ಜೊತೆ ಬರ್ತೇನೆ | ಆರ್‌ ಜೆ ತ್ರಿಶೂಲ್‌ ಸವಾಲು |

Share
ಸುಳ್ಯದಲ್ಲಿ ಮಾಧ್ಯಮಗಳ ಮೇಲೆ ಕೆಂಡಕಾರುವುದು, ಮೂಲಭೂತ ಸಮಸ್ಯೆಗಳನ್ನು ಬೊಟ್ಟು ಮಾಡಿ ಮಾಧ್ಯಮಗಳು ತೋರಿಸುವುದು , ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಮೀಣ ಭಾಗದ ಹಲವಾರು ವರ್ಷಗಳ ಮೂಲಭೂತ ಸಮಸ್ಯೆಗಳನ್ನು ಗಮನಕ್ಕೆ ತರುವುದು ಮಹಾಅಪರಾಧ ಮಾದರಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಹಲವು ಸಮಯಗಳಿಂದ ಇಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.  ಸುಳ್ಯದ ಮಾಧ್ಯಮಗಳು, ಮಾಧ್ಯಮ ವರದಿಗಾರರು, ಸಾಮಾಜಿಕ ಕಾರ್ಯಕರ್ತರು ಅಷ್ಟೊಂದು ಲೇವಡಿಯಾ ? ಜನರ ಮೂಲಭೂತ ಸಮಸ್ಯೆಗಳ ಕಡೆಗೆ ಬೆಳಕು ಹರಿಸಬಾರದೇ ? ಮೌನವಾಗಿ ಎಲ್ಲವನ್ನೂ ಕೇಳಬೇಕಾ ? ಇದೀಗ ಅಂತಹದ್ದೇ ಇನ್ನೊಂದು ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ವಿಶ್ಲೇಷಣಾ ವರದಿ ಇಲ್ಲಿದೆ…

ಸುಳ್ಯದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಇವೆ. ಅನೇಕ ಸಮಯಗಳಿಂದಲೂ ಸಾಕಷ್ಟು ಸಮಸ್ಯೆಗಳು ಇದೆ. ಇದೀಗ ಅಂತಹ ಸಮಸ್ಯೆಯೊಂದನ್ನು  ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ ಅವರು  ಬೊಟ್ಟು ಮಾಡಿ  ತೋರಿಸಿದ್ದಕ್ಕೆ ಸುಳ್ಯ ನಗರಪಂಚಾಯತ್‌ ಅಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ “ಕೀಬೋರ್ಡ್‌ ವಾರಿಯರ್”‌ ಎಂಬ ಪದ ಬಳಕೆ ಮಾಡಿರುವುದು  ಈಗ ಚರ್ಚೆಗೆ ಕಾರಣವಾಗಿದೆ. ಆರ್ ಜೆ ತ್ರಿಶೂಲ್‌ ಗೌಡ ಅವರು ಸುಳ್ಯದ ಸಮಸ್ಯೆ ಜೊತೆ ಬರುತ್ತೇನೆ ಅಲ್ಲೇ ಉತ್ತರಿಸಿ ಎಂದು ನಗರಪಂಚಾಯತ್‌ ಅಧ್ಯಕ್ಷರಿಗೆ ಪೇಸ್‌ ಬುಕ್‌ ಮೂಲಕ ಸವಾಲು ಹಾಕಿದ್ದಾರೆ.

Advertisement
Advertisement

ಕೆಲವು ಸಮಯಗಳ ಹಿಂದೆ ಸುಳ್ಯದ ಕಸದ ಸಮಸ್ಯೆ ಬಗ್ಗೆ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನದ ಬಗ್ಗೆ ಕರೆ ನೀಡಿದ್ದರು. ಇದನ್ನೇ ಅಭಿಯಾನ ರೂಪದಲ್ಲಿ ಕಳೆದ ಕೆಲವು ಸಮಯಗಳಿಂದ ರಾಜ್ಯದ ಪ್ರಸಿದ್ಧ ನಟ ಅನಿರುದ್ಧ ಅವರು ವಿಡಿಯೋ ಮಾಡಿ ಸುಳ್ಯದ ಕಸದ ಬಗ್ಗೆ ಹಾಗೂ ಜನರಿಗೆ ಜಾಗೃತಿ ಮೂಡಿಸಿದ್ದರು. ಈ ಸಮಯದಲ್ಲಿ ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರು  ಉದ್ದಟತನದ ಉತ್ತರ ನೀಡಿದ್ದರು. ಇದಕ್ಕೆ ಖಾರವಾಗಿಯೇ ನಟ ಅನಿರುದ್ಧ ಅವರು ಪ್ರತಿಕ್ರಿಯೆ ನೀಡಿದ್ದರು. ಅದಾಗಿ ಮೊದಲೇ ಸಿದ್ಧತೆಯಾದಂತೆ ಕಸ ವಿಲೇವಾರಿಯೂ ನಡೆಯಿತು. ಆದರೆ ಸುಳ್ಯದ ಕಸದ ಸಮಸ್ಯೆ ಸಂಪೂರ್ಣ ನಿವಾರಣೆಗೆ ಇನ್ನೊಮ್ಮೆ ಜಾಗೃತಿ ಆಗಬೇಕಾಗುತ್ತದೆ.

Advertisement

ಇದೆಲ್ಲಾ ತಣ್ಣಗಾದ ಬಳಿಕ ಸುಳ್ಯ ರಸ್ತೆಯ ಬಗ್ಗೆ ಆರ್‌ ಜೆ ತ್ರಿಶೂಲ್‌ ಗೌಡ ಅವರು ಸುಳ್ಯದ ರಸ್ತೆ ಸಮಸ್ಯೆಯೊಂದನ್ನು 3 ದಿನಗಳ ಹಿಂದೆ ಪೇಸ್‌ ಬುಕ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ  ಬೊಟ್ಟು ಮಾಡಿ ಆಡಳಿತದ ಗಮನ ಸೆಳೆದಿದ್ದರು. ಇದನ್ನು ಪೇಸ್‌ ಬುಕ್‌ ನಲ್ಲಿ ಸುಮಾರು 71 ಜನರು ಶೇರ್‌ ಮಾಡಿದ್ದರು, 14 ಸಾವಿರ ಜನ ವೀಕ್ಷಣೆ ಮಾಡಿದ್ದರು. ರೇಡಿಯೋ ಜಾಕಿ, ಅನೇಕ ಸಾಮಾಜಿಕ ಕಾರ್ಯಗಳ ಮೂಲಕ, ರೇಡಿಯೋದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ, ಜನರ ಮೂಲಭೂತ ಸಮಸ್ಯೆಗಳನ್ನು  ಬೊಟ್ಟು ಮಾಡಿ ತೋರಿಸುತ್ತಿದ್ದ ಆರ್‌ ಜೆ ತ್ರಿಶೂಲ್‌ ಕಂಬಳ ಅವರು ರಾಜ್ಯದಲ್ಲಿ ತನ್ನದೇ ಆದ ಛಾಪು ಮಾಡಿಸಿದ್ದಾರೆ.

ಇದೀಗ ಸುಳ್ಯದ ರಸ್ತೆಯ ಬಗ್ಗೆಯೂ ವಿಡಿಯೋ ಮಾಡಿ ಪೇಸ್‌ ಬುಕ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ  ಹಾಕಿದ್ದರು. ಇದರ ಹಿಂದೆ ಉತ್ತಮ ಉದ್ದೇಶವೂ ಇದೆ. ಸುಳ್ಯ ಮೂಲಕ ಹಾದು ಹೋಗುವ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಶ್ರೀರಾಮ ಪೇಟೆಯ ಜಂಕ್ಷನ್‌ ಬಳಿ ರಸ್ತೆ ಹದಗೆಟ್ಟಿತ್ತು. ಇದನ್ನು ಫೋಟೊ ಹಾಗೂ ವಿಡಿಯೋ ಮಾಡಿ ಆಡಳಿತದ ಗಮನಸೆಳೆದಿದ್ದರು. ಸಹಜವಾಗಿಯೇ ಜನಪರವಾದ ಕಾರ್ಯ ಇದು. ವಾರದ ಹಿಂದೆ ಮಂಗಳೂರಿನಲ್ಲಿ ರಸ್ತೆಯ ಹೊಂಡದ ಕಾರಣದಿಂದ ಬೈಕ್‌ ಸವಾರನೊಬ್ಬ ಅಪಘಾತವಾಗಿ ಅಸುನೀಗಿದ್ದ ಕೂಡಾ. ಇದಕ್ಕಾಗಿ ಜಾಗೃತಿ ಅನಿವಾರ್ಯವೂ ಆಗಿತ್ತು. ಆದರೆ ಈ ಜಾಗೃತಿಗೆ  ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರು “ಕೀಬೋರ್ಡ್‌ ವಾರಿಯರ್”‌ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಹಲವರು ವಾಸ್ತವ ಸತ್ಯ ಅಲ್ಲವೇ ಎಂದೂ ಪ್ರಶ್ನೆ ಮಾಡಿದ್ದರು. ಇದೀಗ ಆರ್‌ ಜೆ ತ್ರಿಶೂಲ್‌ ಅವರು ಪೇಸ್‌ ಬುಕ್‌ ಮೂಲಕ “ಸುಳ್ಯದ ನಗರ ಪಂಚಾಯತ್‌ ಅಧ್ಯಕ್ಷರಿಗೆ ಒಪನ್‌ ಚಾಲೆಂಜ್‌ ಹಾಕಿದ್ದಾರೆ. ನಾನು ಸುಳ್ಯದ ಸಮಸ್ಯೆಗಳ ಪಟ್ಟಿಗಳ ಜೊತೆ ಬರ್ತೇನೆ, ನೀವು ಅವುಗಳಿಗೆ LIVE  ಅಲ್ಲಿ ಉತ್ತರಿಸಿ..!. ಕೀಬೋರ್ಡ್‌ ನಿಂದ ಸೀದಾ ಸ್ಕ್ರೀನ್‌ ಗೇ ಬರೋಣ ಎಂದು ಸವಾಲು ಹಾಕಿದ್ದಾರೆ.

Advertisement

ಸುಳ್ಯದಲ್ಲಿ ಇಂತಹದ್ದೊಂದು ಬೆಳವಣಿಗೆ ಕಳೆದ ಕೆಲವು ಸಮಯಗಳಿಂದ ಇದೆ. ಯಾವುದೇ ಮಾಧ್ಯಮಗಳು ಗ್ರಾಮೀಣ ಸಮಸ್ಯೆ, ಜನರ ಮೂಲಭೂತ ಸಮಸ್ಯೆ, ನಗರದ ಸಮಸ್ಯೆಯನ್ನು ಬೆಳಕಿಗೆ ತಂದರೆ ಮಾಧ್ಯಮಗಳ ಮೇಲೇಯೇ ಕಿಡಿಕಾರುವ , ಮಾಧ್ಯಮಗಳೇ ಮಾಡಲಿ ಎನ್ನುವ ಉತ್ತರ, ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಆಗುವುದಿಲ್ಲ ಎಂಬ ಉಡಾಫೆ,  ಪ್ರಧಾನಿಗೆ ಬರೆದರೆ ಆಗುವುದಿಲ್ಲ ಎಂಬ ಲೇವಡಿ, ನಾವೇ ಎಂಬ ಅಹಂಕಾರ, ನಿಮ್ಮೂರಿಗೆ ಸಾಕಷ್ಟು ಮಾಡಿದೆ ಎಂಬ ಉತ್ತರ.. ಹೀಗೇ ಎಲ್ಲವೂ ಇಲ್ಲಿ ನಡೆಯುತ್ತಿದೆ. ಇತ್ತೀಚೆಗೆ  ಉಪ್ಪುಕಳ ಸೇತುವೆ ಬಗ್ಗೆಯೂ ಅದೇ ರೀತಿಯಾಗಿ ಮಾಧ್ಯಮಗಳ ಮೇಲೆ ಕಿಡಿಕಾರಲಾಗಿತ್ತು, ಅರಂತೋಡು ರಸ್ತೆ ಅಗಲೀಕರಣ ಹೋರಾಟದ ಸಂದರ್ಭ, ದುಗಲಡ್ಕ-ಉಬರಡ್ಕ ರಸ್ತೆ ಸಮಸ್ಯೆ, ಮೊಗ್ರ ಸೇತುವೆ ಹೋರಾಟದ ಸಂದರ್ಭದಲ್ಲೂ ಇದೇ ಮಾದರಿಯ ಉಡಾಫೆ ವ್ಯಕ್ತವಾಗಿತ್ತು. ಸುಳ್ಯದಲ್ಲಿ ಸಾಕಷ್ಟು ಅಗತ್ಯ ಮೂಲಭೂತ  ವ್ಯವಸ್ಥೆಗಳ ಕೊರತೆ ಇದೆ. ಜನರು ಅನೇಕ ವರ್ಷಗಳಿಂದ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೇಡಿಕೆಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಈಗ ಮಾಧ್ಯಮಗಳೂ ಈಗ ಮೌನವಹಿಸಿದರೆ ಸ್ವಾತಂತ್ರ್ಯ ಅಮೃತಮಹೋತ್ಸವ ಕಳೆದರೂ ಅಭಿವೃದ್ಧಿ ಮರೀಚಿಕೆಯೇ ಆದೀತು ಎಂಬ ಮಾತುಗಳು ಇವೆ.

ಸುಳ್ಯದ ನಗರದಲ್ಲಿಯೂ ಸಾಕಷ್ಟು ಸಮಸ್ಯೆಗಳು ಇವೆ. ಇದೆಲ್ಲವನ್ನೂ ತಿಳಿಸುವ , ಎಚ್ಚರಿಸುವ ಕೆಲಸ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ನಡೆಸಬಾರದೇ ಎಂಬ ಪ್ರಶ್ನೆ ಈಗ ಇದೆ. ವಾಸ್ತವ ಸಂಗತಿಗಳನ್ನು ಬೊಟ್ಟು ಮಾಡಿ ತೋರಿಸುವ ಮಾಧ್ಯಮಗಳ ಮೇಲೆ, ಸಾಮಾಜಿಕ ಕಾರ್ಯಕರ್ತರ ಮೇಲೆ ಸಿಟ್ಟಾಗುವ, ಲೇವಡಿ ಮಾಡುವ ಬದಲಾಗಿ ಆ ಸಮಸ್ಯೆಗಳ ಪರಿಹಾರದ ಕಡೆಗೆ ಏಕೆ ಧ್ವನಿಗೂ ಕೇಳುತ್ತಿಲ್ಲ ? ಸುಳ್ಯದಲ್ಲಿಯೂ ಈಗ ಅಂತಹದ್ದೇ ಹಲವಾರು ಸಮಸ್ಯೆಗಳ ಪಟ್ಟಿ ಇದೆ. ಆರ್‌ ತ್ರಿಶೂಲ್‌ ಈ ಪಟ್ಟಿಗಳ ಜೊತೆ ಸವಾಲು ಹಾಕಿದ್ದಾರೆ, “ಕೀಬೋರ್ಡ್‌ ವಾರಿಯರ್”‌  ಮೂಲಕವಾದರೂ ಸಮಸ್ಯೆ ಬಗೆಹರಿಯಲಿ.

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

8 hours ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

9 hours ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

1 day ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

2 days ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago