ಇತ್ತೀಚೆಗೆ ಹೆಚ್ಚಿನ ಯುವಕರು(youths) ಕೃಷಿಯತ್ತ(Agriculture) ಒಲವು ತೋರಿಸುತ್ತಿದ್ದಾರೆ. ಹಾಗೆ ಈಗಾಗಲೇ ಕೃಷಿಯಲ್ಲಿ ತೊಡಗಿರುವ ರೈತರು(Farmer) ರಾಸಾಯನಿಕ ಕೃಷಿ(Chemical) ಬಿಟ್ಟು ನೈಸರ್ಗಿಕ ಕೃಷಿಯತ್ತ(Natural Farming) ಮರಳುತ್ತಿದ್ದಾರೆ. ಸಾಮಾನ್ಯವಾಗಿ ಕೆಲ ತರಬೇತಿ, ಮಾಹಿತಿಗಳು(Information) ಕೆಲವೊಮ್ಮೆ ಬೇಕಾಗುತ್ತದೆ. ಅಂತವರಿಗಾಗಿಯೇ ಅನೇಕ ಕೃಷಿ ಸಂಘಗಳು, ನಿಪುಣ ರೈತರು ಕೆಲವು ಕಾರ್ಯಕ್ರಮ, ತರವೇತಿ(Training), ಕಾರ್ಯಗಾರ(Workshop), ಶಿಬಿರ ಹಾಗೂ ಕೃಷಿ ಪ್ರವಾಸೋದ್ಯಮದಂತಹ(Agri tourism) ಅನುಕೂಲಗಳನ್ನು ಮಾಡುತ್ತಿದ್ದಾರೆ. ಇಲ್ಲಿ ನೋಡಿ ಅಂತದೇ ಒಂದು ಅವಕಾಶ ಕೃಷಿಕರಿಗಾಗಿ..
ಪರಿಸರ ಸ್ನೇಹಿ ಕೃಷಿ ,ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿಸಿಕೊಂಡು ಆದಾಯ ಪಡೆಯುವುದು, ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ಮಾಹಿತಿ , ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಸವಾಲುಗಳು ಮತ್ತು ಅವಕಾಶ, ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ , ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಮೈಸೂರಿನ ಪರಿಸರ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ” ವಿಚಾರವಾಗಿ ನಾಲ್ಕು ದಶಕಗಳ ಕಾಲ ಮಣ್ಣು ಮತ್ತು ಕೃಷಿಯೊಂದಿಗೆ ಅನುಭವವಿರುವ ಸಾಧಕರೊಂದಿಗೆ ಮಾತುಕತೆ ಏರ್ಪಡಿಸಲಾಗಿದೆ.ಡಿ.12 ರಂದು ಮೈಸೂರಿನ ಸರಸ್ವತಿಪುರಂ ಜೆ ಎಸ್ ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾತುಕತೆ ನಡೆಸುವ ಸಾಧಕರು:
* ಡಾ ರಾಮಕೃಷ್ಣಪ್ಪ, ಅಧ್ಯಕ್ಷರು,ಬೆಳವಲ ಪರಿಸರ ಕೇಂದ್ರ,ಮೈಸೂರು.
* ಡಾ ಚಂದ್ರಶೇಖರ, ಇಂದ್ರಪ್ರಸ್ಥ ಸಾವಯವ ಕೃಷಿ ತೋಟ,ಮೈಸೂರು.
* ಶಿವಾನಂಜಯ್ಯ ಬಾಳೇಕಾಯಿ,ಸಹಜ ಕೃಷಿಕರು, ತುಮಕೂರು.
ಹೆಚ್ಚಿನ ಮಾಹಿತಿಗೆ ಗಂಟಯ್ಯ : 9538732852, ಅವಿನಾಶ್:8197856132
-ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…