ದ.ಕ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸ್ ಕ್ಯಾಬ್ ಅಸೋಸಿಯೇಷನ್ ಮಂಗಳೂರು ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಕುಕ್ಕೇಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ಪದಗ್ರಹಣ ಕಾರ್ಯಕ್ರಮದಲ್ಲಿ ಕುಸುಮಾಧರ ಸಭಾಧ್ಯಕ್ಷತೆ ವಹಿಸಿದ್ದರು. ಉಮೇಶ್ ಕೆ ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ದಿನೇಶ್ ಕುಂಪಲ, ಪೋಲಿಸ್ ಉಪನಿರೀಕ್ಷಕ ಮಂಜುನಾಥ ಇವರು ಟ್ಯಾಕ್ಸಿ ಚಾಲಕ ಪಾಲಿಸಬೇಕಾದ ನಿಯಮ ಮುನ್ನೆಚ್ಚರಿಕೆಯ ಕುರಿತು ಮಾತನಾಡಿದರು.ಪದಗ್ರಹಣದ ನಂತರ ಅಧ್ಯಕ್ಷತೆಯನ್ನು ಮೋಹನ್ ದಾಸ್ ರೈ ವಹಿಸಿಕೊಂಡರು.ಸಲಹೆಗಾರರಾಗಿ ಉಮೇಶ್. ಕೆ ಎನ್, ರಾಜೇಶ್ ಎನ್. ಎಸ್, ಹರೀಶ್ ಇಂಜಾಡಿ, ವೆಂಕಟೇಶ್ ಹೆಚ್. ಎಲ್. ಉಪಸ್ಥಿತರಿದ್ದು ಶುಭಕೋರಿದರು. ಈ ಸಂದರ್ಭದಲ್ಲಿ ಪಿಯುಸಿ ಯಲ್ಲಿ ಉತ್ತಮ ಅಂಕ ತೆಗೆದ ಕಾರ್ತಿಕ್ ನೆಕ್ರಾಜೆ ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ತೆಗೆದ ಶ್ರವಣ್ ಮತ್ತು ಶ್ರಾವ್ಯ ಇವರಿಗೆ ಸಮ್ಮಾನ ಮಾಡಿ ಗೌರವಿಸಲಾಯಿತು.
ಹೇಮಕರ ನೆಕ್ರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು , ಕಾರ್ಯಕ್ರಮವನ್ನು ನವೀನ್ ಶೆಟ್ಟಿ ನಿರೂಪಣೆ, ಅಶೋಕ್ ಏನೆಕಲ್ಲು ಸ್ವಾಗತ, ಎನಿತ್ ಪಡ್ರೆ ಧನ್ಯವಾದ ಮಾಡಿ ಕಾರ್ಯಕ್ರಮಕ್ಕೆ ಅಂತ್ಯ ನೀಡಿದರು.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…