ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ ಹದಿನೈದೋ ವರ್ಷದ ನಂತರ ಹಾಕಿದ ಬಂಡವಾಳಕ್ಕೆ ಲಕ್ಷ ಲಕ್ಷ ಹಣ ವಾಪಸು ಕೊಡುವ ಬರವಸೆ ನೀಡಿತ್ತು. ಆದರೆ ಹತ್ತು ಹದಿನೈದು ವರ್ಷಗಳಿಗೆ ಅದೆಂಥದೇ ಸ್ವರ್ಗ ಸದೃಶ ಭೂಮಿಯಲ್ಲಿ ಅದೆಷ್ಟೇ ಗೊಬ್ಬರ ನೀರು ಆರೈಕೆ ಮಾಡಿದರೂ ನೆಟ್ಟ ಸಾಗವಾನಿ ಮೂರಿಂಚಿಗಿಂತ ಹೆಚ್ಚಿನ ವ್ಯಾಸ ಕ್ಕೆ ಬೆಳೆಯೋಲ್ಲ.
ಮಹಾಗನಿ, ಶ್ರೀಗಂಧ ಮುಂತಾದ ಮರ ಆಗುವ ಜಾತಿಯ ಸಸ್ಯಗಳು ತಮ್ಮ ಒಳಗಿನ ಕೆಂಪು ತೆರಳು ಬೆಳೆಯದೇ ಗಟ್ಟಿ ಯಾಗಿ ಸುಗಂಧ ಭರಿತವೋ, ನಾಟದ ಉಪಯೋಗಕ್ಕೋ ಬರದು. ಕೆಲವೊಮ್ಮೆ ಹೊರಗಿನಿಂದ ಮರ ಬೆಳೆದರೂ ಒಳಗಿನ ತಿರಳು ಬೆಳೆದಿರದು. ಸುಗಂಧ ಉಪಯೋಗಕ್ಕೆ ಬಳಸುವ ಶ್ರೀಗಂಧ, ಚಂದನ, ನಾಟದ ಉಪಯೋಗಕ್ಕೆ ಬಳಸುವ ತೇಗ ಮಹಾಗನಿ ಹೆಬ್ಬೇವು ಕನಿಷ್ಠ ನಲವತ್ತು ಐವತ್ತು ವರ್ಷಗಳ ಕಾಲ ನೈಸರ್ಗಿಕವಾಗಿ ಬೆಳೆಯಲೇ ಬೇಕು.ಸಸಿ ಮರ ನೈಸರ್ಗಿಕವಾಗಿ ಹಂತ ಹಂತವಾಗಿ ಬೆಳೆಯಲೇ ಬೇಕು…. ದಿಡೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣವಾಗುತ್ತವೆ.
ಮಲೆನಾಡಿನಲ್ಲಿ ಕೃಷಿಕರೊಬ್ಬರು ಅತ್ಯಂತ ವ್ಯವಸ್ಥಿತವಾಗಿ ಬೆಳೆದ ಸಾಗುವಾನಿ ತೋಟದ ದೃಶ್ಯಾವಳಿಯಿದೆ. ಎಷ್ಟೇ ಆರೈಕೆ ಮಾಡಿದರೆ ನಮ್ಮ ಮಲೆನಾಡಿನಲ್ಲಿ “ಹತ್ತು ” ವರ್ಷಗಳಿಗೆ ಇಷ್ಟೇ ಬೆಳೆಯಲು ಸಾಧ್ಯ. ಕೆಲವರು ಎರಡು ಮೂರು ವರ್ಷಗಳಿಗೇ ಅಡಿಕೆ ಸಸಿ ಫಸಲು ಬಿಡುತ್ತದೆ ಎನ್ನುತ್ತಾರೆ. ಹೀಗೆ ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ.
ನಮ್ಮ ಮಲೆನಾಡಿನಲ್ಲಿ ಅಡಿಕೆ ನಿಜ ಫಸಲು ಪಡೆಯಲು ಕನಿಷ್ಠ ಹನ್ನೆರಡು ವರ್ಷ ಬೇಕೇ ಬೇಕು. ತಡವಾಗಿ ಮಲೆನಾಡಿನಲ್ಲಿ ಅಡಿಕೆ ಫಸಲು ನೀಡು ವುದರಿಂದ ಮಲೆನಾಡಿನಲ್ಲಿ ಅಡಿಕೆ ಮರದ ಜೀವಿತಾವಧಿ ಹೆಚ್ಚು.ನಮ್ಮ ಹಿರಿಯರ ಪ್ರಕಾರ ಮಲೆನಾಡಿನಲ್ಲಿ ಒಂದು ಅಡಿಕೆ ಮರ ಕನಿಷ್ಠ ಅರವತ್ತು ವರ್ಷ ಫಸಲು ನೀಡುತ್ತದೆ. ಬಯಲು ಸೀಮೆಯಲ್ಲಿ ಬೇಗ ಫಸಲು ನೀಡಿ ಬೇಗ ಫಸಲು ಕುಂಠಿತವಾಗುತ್ತದೆ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…