ಸಾವಯವ ಬದುಕು(Organic farming) – ಕೃಷಿಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವ ಸಂಕಲ್ಪದೊಂದಿಗೆ ಜನವರಿ 12 ಮತ್ತು 13 ರಂದು ಮಹಾಸಮಾವೇಶವು ಕೊಲ್ಹಾಪುರ(Kolhapur) ಸಮೀಪವಿರುವ ಕನ್ನೇರಿಯ(Kanneri) ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ನಾಡಿನ ಎಲ್ಲಾ ಮಠಾಧೀಶರ, ಸಂತರ ಹಾಗೂ ಧರ್ಮದರ್ಶಿಗಳ ಮಹಾಸಮಾವೇಶ ನಡೆಯಲಿದೆ.
ಆಧುನಿಕ ಕೃಷಿಯು ಪ್ರಾಕೃತಿಕ ಮೌಲ್ಯಗಳನ್ನು ಪರಂಪರೆಗಳ ಅನುಭವಗಳನ್ನು ಗೌರವಿಸದಿರುವ ಪರಿಣಾಮದ ಗಂಭೀರತೆ ಈಗಾಗಲೇ ಹಲವು ರೀತಿಯಲ್ಲಿ ತಟ್ಟುತ್ತಿದೆ. ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ, ಕೀಟ-ರೋಗದ ನಿಯಂತ್ರಣಕ್ಕೆ ಬಳಸುತ್ತಿರುವ ವಿಷಗಳು ಜೀವಜಾಲಕ್ಕೇ ಮಾರಕವಾಗುತ್ತಿವೆ, ಜನರು – ಜಾನುವಾರುಗಳು ಹೊಸ ಹೊಸ ಖಾಯಿಲೆಗಳಿಂದ ನರಳುವಂತಾಗಿದೆ, ಪುಟ್ಟ ಮಕ್ಕಳಿಗೂ ಕ್ಯಾನ್ಸರ್, ಸಕ್ಕರೆ ಖಾಯಿಲೆಗಳು… ಸಾಮಾಜಿಕ ಕಾರಣಗಳು ಯುವ ಸಮುದಾಯವನ್ನು ಕೃಷಿ ಕ್ಷೇತ್ರದಿಂದ ಬಹುದೂರ ಸರಿಸುತ್ತಿವೆ ರೈತರನ್ನು ಹುಟ್ಟಿಸಲಾಗದೆ ಗ್ರಾಮಗಳು ಬಂಜೆಯಾಗುತ್ತಿವೆ.
‘ರೈತನ ತಾಯಿ’ ಯಾರಾದಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಕೃಷಿ ಪ್ರಧಾನ ಭಾರತ ನಲುಗಿದೆ. ಆಧುನಿಕ ಶಿಕ್ಷಣದ ಸುನಾಮಿ ಗ್ರಾಮೀಣ ಚೇತನಗಳನ್ನು ನಗರಕ್ಕೆ ಹೊತ್ತೊಯ್ಯುತ್ತಿದೆ. ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಹುಡುಕುವ ತವಕದಿಂದ ಆಯೋಜಿಸಿದ ಮಹಾಸಮಾವೇಶ ಇದಾಗಿದೆ. ಕಾರ್ಯಕ್ರಮದ ಉದ್ದೇಶ ನಾಡಿನ ಎಲ್ಲಾ ಪ್ರಮುಖರು, ಕೃಷಿಕರ ಆಗಮನದ ಮೂಲಕ – ಆಶೀರ್ವಾದ – ಪ್ರೇರಣೆ ಪಡೆದು ಗ್ರಾಮೀಣ ಬದುಕಿನ ಚಿತ್ರಣ ಸುಂದರಗೊಳಿಸಲು ಅತ್ಯಗತ್ಯ ಇದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…