Advertisement
ಸುದ್ದಿಗಳು

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

Share

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ ಸಾಕು ಎಂದೆನಿಸಿ ಬಿಡುತ್ತದೆ. ಹಾಗೆಯೇ ನಾವು ಆರೋಗ್ಯವಾಗಿ ಇದ್ದೇವೆ ಎಂದು ಬೇರೆ ಯಾರೂ ಹೇಳಬೇಕಾಗಿಲ್ಲ. ನಮ್ಮ ದೇಹವೇ ಕೆಲವೊಂದು ಸಂಕೇತದ ಮೂಲಕ ತಿಳಿಸಿಕೊಡುತ್ತದೆ. ಈ ಸಂಕೇತವೂ ನಮಗೆ ತಿಳಿದರೆ ಸಾಕು. ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಯಾವೆಲ್ಲಾ ಸಂಕೇತಗಳೆಂದರೆ: 

  • ಬೆಳಗ್ಗೆ ತಾಜಾತನದಿಂದ ಏಳುವುದು: ಉಲ್ಲಾಸದಿಂದ ಬೆಳಿಗ್ಗೆ ಯಾರೂ ಏಳುತ್ತಾರೋ ಅವರೇ ಆರೋಗ್ಯವಂತರು. ಏಕೆಂದರೆ ದೇಹವು ಆರೋಗ್ಯವಾಗಿದೆ ಎಂಬುದನ್ನು ಸೂಚಿಸುವಲ್ಲಿ ನಿದ್ರೆ ಒಂದು. ರಾತ್ರಿ ಗುಣಮಟ್ಟದ ನಿದ್ರೆಯು ಆರೋಗ್ಯದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ.
  • ಸರಿಯಾದ ಮಲವಿಸರ್ಜನೆ ಹಾಗೂ ಸ್ವಚ್ಛವಾದ ಮೂತ್ರ: ಬೆಳಿಗ್ಗಿನ ಮೂತ್ರವೂ ಸ್ಚಚ್ಛವಾಗಿದ್ದರೆ ಕಿಡ್ನಿಯೂ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರ್ಥ. ಹಾಗೂ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಸಾಧ್ಯವಾದರೆ ಅದು ಕರುಳಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಸೂಚಿಸುತ್ತದೆ.
  • ಗಾಯ: ದೇಹಕ್ಕೆ ಆಗುವ ಗಾಯವೂ ಬೇಗನೆ ವಾಸಿಯಾದರೆ ನಮ್ಮ ದೇಹವೂ ರೋಗನಿರೋಧಕ ಶಕ್ತಿ ಹಾಗೂ ನಾವು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ.
  • ಚರ್ಮದ ಆರೋಗ್ಯ: ನಮ್ಮ ಚರ್ಮವೂ ಆರೋಗ್ಯಕರವಾಗಿ ಕಾಂತಿಯುತವಾಗಿದೆ ಎಂದರೆ ನಮ್ಮ ದೇಹಕ್ಕೆ ಸರಿಯಾದ ಜಲಸಂಚಯನವಾಗುತ್ತಿದೆ ಎಂದರ್ಥ.
  • ಆಯಾಸವಿಲ್ಲದ ನಡೆ: ವೇಗಾಗಿ ನಡೆಯುವಾಗ ಬೇಗನೆ ಆಯಾಸವಾಗುವುದಿಲ್ಲ ಎಂದರೆ ರಕ್ತ ಪರಿಚಲನೆ, ನರವ್ಯೂಹ, ಸ್ನಾಯುಗಳು ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
  • ಸ್ಮರಣಶಕ್ತಿ: ಸ್ಮರಣಶಕ್ತಿ ಉತ್ತಮವಾಗಿದ್ದರೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ.
  • ಸ್ಥಿರವಾದ ಉಸಿರಾಟ: ಸಾಮಾನ್ಯ ಹಾಗೂ ಸ್ಥಿರವಾದ ಉಸಿರಾಟದ ಮಾದರಿ ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸೂಚಿಸುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

22 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

2 days ago