Advertisement
ಸುದ್ದಿಗಳು

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

Share

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ ಸಾಕು ಎಂದೆನಿಸಿ ಬಿಡುತ್ತದೆ. ಹಾಗೆಯೇ ನಾವು ಆರೋಗ್ಯವಾಗಿ ಇದ್ದೇವೆ ಎಂದು ಬೇರೆ ಯಾರೂ ಹೇಳಬೇಕಾಗಿಲ್ಲ. ನಮ್ಮ ದೇಹವೇ ಕೆಲವೊಂದು ಸಂಕೇತದ ಮೂಲಕ ತಿಳಿಸಿಕೊಡುತ್ತದೆ. ಈ ಸಂಕೇತವೂ ನಮಗೆ ತಿಳಿದರೆ ಸಾಕು. ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.

ಯಾವೆಲ್ಲಾ ಸಂಕೇತಗಳೆಂದರೆ: 

  • ಬೆಳಗ್ಗೆ ತಾಜಾತನದಿಂದ ಏಳುವುದು: ಉಲ್ಲಾಸದಿಂದ ಬೆಳಿಗ್ಗೆ ಯಾರೂ ಏಳುತ್ತಾರೋ ಅವರೇ ಆರೋಗ್ಯವಂತರು. ಏಕೆಂದರೆ ದೇಹವು ಆರೋಗ್ಯವಾಗಿದೆ ಎಂಬುದನ್ನು ಸೂಚಿಸುವಲ್ಲಿ ನಿದ್ರೆ ಒಂದು. ರಾತ್ರಿ ಗುಣಮಟ್ಟದ ನಿದ್ರೆಯು ಆರೋಗ್ಯದ ರೋಗ ನಿರೋಧಕ ಶಕ್ತಿಯನ್ನು ಸೂಚಿಸುತ್ತದೆ.
  • ಸರಿಯಾದ ಮಲವಿಸರ್ಜನೆ ಹಾಗೂ ಸ್ವಚ್ಛವಾದ ಮೂತ್ರ: ಬೆಳಿಗ್ಗಿನ ಮೂತ್ರವೂ ಸ್ಚಚ್ಛವಾಗಿದ್ದರೆ ಕಿಡ್ನಿಯೂ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರ್ಥ. ಹಾಗೂ ಯಾವುದೇ ತೊಂದರೆ ಇಲ್ಲದೆ ಮಲವಿಸರ್ಜನೆ ಸಾಧ್ಯವಾದರೆ ಅದು ಕರುಳಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಜೀರ್ಣಾಂಗ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಸೂಚಿಸುತ್ತದೆ.
  • ಗಾಯ: ದೇಹಕ್ಕೆ ಆಗುವ ಗಾಯವೂ ಬೇಗನೆ ವಾಸಿಯಾದರೆ ನಮ್ಮ ದೇಹವೂ ರೋಗನಿರೋಧಕ ಶಕ್ತಿ ಹಾಗೂ ನಾವು ಸರಿಯಾದ ಪೋಷಕಾಂಶಗಳನ್ನು ಸೇವಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ.
  • ಚರ್ಮದ ಆರೋಗ್ಯ: ನಮ್ಮ ಚರ್ಮವೂ ಆರೋಗ್ಯಕರವಾಗಿ ಕಾಂತಿಯುತವಾಗಿದೆ ಎಂದರೆ ನಮ್ಮ ದೇಹಕ್ಕೆ ಸರಿಯಾದ ಜಲಸಂಚಯನವಾಗುತ್ತಿದೆ ಎಂದರ್ಥ.
  • ಆಯಾಸವಿಲ್ಲದ ನಡೆ: ವೇಗಾಗಿ ನಡೆಯುವಾಗ ಬೇಗನೆ ಆಯಾಸವಾಗುವುದಿಲ್ಲ ಎಂದರೆ ರಕ್ತ ಪರಿಚಲನೆ, ನರವ್ಯೂಹ, ಸ್ನಾಯುಗಳು ಆರೋಗ್ಯ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
  • ಸ್ಮರಣಶಕ್ತಿ: ಸ್ಮರಣಶಕ್ತಿ ಉತ್ತಮವಾಗಿದ್ದರೆ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ.
  • ಸ್ಥಿರವಾದ ಉಸಿರಾಟ: ಸಾಮಾನ್ಯ ಹಾಗೂ ಸ್ಥಿರವಾದ ಉಸಿರಾಟದ ಮಾದರಿ ಆರೋಗ್ಯಕರ ಉಸಿರಾಟದ ವ್ಯವಸ್ಥೆಯನ್ನು ಸೂಚಿಸುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

13 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

14 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

3 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

3 days ago