Advertisement
ಸುದ್ದಿಗಳು

ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು ‘ಫಲಪ್ರದ’

Share
ಬಂಟ್ವಾಳ ತಾಲೂಕಿನ ಉಬರು-ಮುಳಿಯ ‘ಹಲಸು ಸ್ನೇಹಿ ಕೂಟ’ವು 2011ರಿಂದ ಸಕ್ರಿಯ. ಹಲಸು, ಗೆಡ್ಡೆ, ತರಕಾರಿ, ಮಾವು, ಕಾಡುಮಾವು, ಪುನರ್ಪುಳಿ, ಚಳಿಗಾಲದ ತರಕಾರಿ, ಸಿರಿಧಾನ್ಯ, ಸೊಪ್ಪು ತರಕಾರಿಗಳು, ಹಣ್ಣುಗಳ ಫಲಾಹಾರ.. ಹೀಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಒಂದು ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ನಡೆಸಿದೆ.
ಹಲಸು ಮತ್ತು ಮಾವಿನ ‘ರುಚಿ ನೋಡಿ ತಳಿ ಆಯ್ಕೆ’ ಮೂಲಕ ಸುಮಾರು ಐವತ್ತಕ್ಕೂ ಮಿಕ್ಕಿ ತಳಿಗಳು ಅಭಿವೃದ್ಧಿಗೊಂಡು ಕೃಷಿಕರ ತೋಟದಲ್ಲಿ ಬೆಳೆದಿವೆ. ಹಲಸಿನ ತೋಟಗಳು ಎದ್ದಿವೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧಗೊಂಡಿವೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಉತ್ತಮ ಹಲಸು-ಮಾವುಗಳನ್ನು ‘ಕೃಷಿಕರೇ’ ಆಯ್ಕೆ ಮಾಡಿರುವುದು ವಿಶೇಷ.
ಸಂಪರ್ಕಕ್ಕೆ ಬಂದ ಅನೇಕ ಮನೆಗಳಲ್ಲಿ ಹಲಸು, ಮಾವು, ಸಿರಿಧಾನ್ಯ.. ಹೀಗೆ ಖಾದ್ಯಗಳಿಗೆ ಮೊದಲ ಮಣೆ. ಸದ್ದಿಲ್ಲದೆ ದಶಕಕ್ಕೂ ಮಿಕ್ಕಿ ಕಲಾಪಗಳನ್ನು ನಡೆಸುವುದ ಮೂಲಕ ಕೃಷಿ, ಕೃಷಿಕರ ಆಸಕ್ತಿಗಳನ್ನು ಜೀವಂತವಿಟ್ಟಿದೆ.
ಹನ್ನೊಂದು ವರುಷದ ‘ಹಲಸು ಸ್ನೇಹಿ ಕೂಟ’ದ ಕಲಾಪಗಳ ವಿವರಗಳು, ಆಯ್ಕೆಯಾದ ತಳಿಗಳು, ವಿಷಯ ತಜ್ಞರ ಮಾತುಗಳು ‘ಫಲಪ್ರದ’ ಪುಸ್ತಕದ ಹೂರಣಗಳು.
ಪುಸ್ತಕದ ಲೇಖಕ : ನಾ. ಕಾರಂತ ಪೆರಾಜೆ. ಹಲಸು ಸ್ನೇಹಿ ಕೂಟದ ಪ್ರಕಾಶನ.  ಪುತ್ತೂರಿನ ಜೈನ್ ಭವನದಲ್ಲಿ ಮೇ 24 ರಂದು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ‘ಫಲಪ್ರದ’ವನ್ನು ಅನಾವರಣಗೊಳಿಸುವರು. ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಡಾ.ದಿನಕರ ಅಡಿಗ, ಬಲರಾಮ ಆಚಾರ್ಯ, ಮುಳಿಯ ವೆಂಕಟಕೃಷ್ಣ ಶರ್ಮ ಇವರೆಲ್ಲರ ಶುಭಸೇಸೆಯೊಂದಿಗೆ ‘ಫಲಪ್ರದ’ ಪುಸ್ತಕ ಅನಾವರಣಗೊಳ್ಳಲಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 19-04-2026 | ಇಂದಿನಿಂದ ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಆರಂಭ

ಕರ್ನಾಟಕದಲ್ಲಿ ಇಂದಿನಿಂದ ಪ್ರೀ-ಮಾನ್ಸೂನ್ ಮಳೆ ಚಟುವಟಿಕೆ ಆರಂಭವಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ತಕ್ಷಣ ಮಳೆ,…

6 hours ago

ಜಾಗತಿಕ ಬಿಕ್ಕಟ್ಟಿನ ಪರಿಣಾಮ : ಬೆಂಗಳೂರಿಗೆ ಆಟೋ LPG ಪೂರೈಕೆ 300% ಹೆಚ್ಚಿಸಿದ ಇಂಡಿಯನ್ ಆಯಿಲ್

ಜಾಗತಿಕ ಬಿಕ್ಕಟ್ಟಿನಿಂದ ಆಟೋ LPG ಬೇಡಿಕೆ ಏರಿಕೆ ಕಂಡಿದ್ದು, ಇಂಡಿಯನ್ ಆಯಿಲ್ ಪೂರೈಕೆಯನ್ನು…

10 hours ago

ಕೃಷಿಗೆ ಹೊಸ ಚೈತನ್ಯ- ದೂರದರ್ಶನ ಚಂದನದಿಂದ “ರೈತ ರತ್ನ” ರಿಯಾಲಿಟಿ ಶೋ ಆರಂಭ

“ರೈತ ರತ್ನ” ರಿಯಾಲಿಟಿ ಶೋ ಮೂಲಕ ಕೃಷಿಕರ ಸಾಧನೆಗೆ ಹೊಸ ವೇದಿಕೆ ಸಿಕ್ಕಿದೆ.…

10 hours ago

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

20 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

1 day ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

1 day ago