Advertisement
ಪ್ರಮುಖ

ಅಮೆರಿಕ ತೆರಿಗೆ ಇಳಿಕೆ : ಭಾರತದ ತೆಂಗಿನ ನಾರು ರಫ್ತುಗಳಿಗೆ ಹೊಸ ಬಲ

Share

ಅಮೆರಿಕ ಆಮದು ಸುಂಕವನ್ನು ಶೇ. 18 ಕ್ಕೆ ಇಳಿಸಿದ ನಂತರ ಭಾರತದ ತೆಂಗಿನ ನಾರು ಮತ್ತು ತೆಂಗಿನ ನಾರು ಉತ್ಪನ್ನಗಳ ರಫ್ತು ಹೆಚ್ಚಾಗುವ ನಿರೀಕ್ಷೆಯಿದೆ. ಭಾರತೀಯ ತೆಂಗಿನ ನಾರು ರಫ್ತುದಾರರ ಸಂಘದ (Federation of Indian Coir Exporters Associations) ಪ್ರಧಾನ ಕಾರ್ಯದರ್ಶಿ ಸಜನ್ ಬಿ. ನಾಯರ್ ಈ ನಿರ್ಧಾರವನ್ನು ಬಹುನಿರೀಕ್ಷಿತ ಕ್ರಮ ಎಂದು ಹೇಳಿದ್ದಾರೆ. ತೆರಿಗೆ ಕಡಿತದ ನಂತರ ಖರೀದಿದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿನೆಸ್‌ ಲೈನ್  ವರದಿಯ ಪ್ರಕಾರ, ಈ ತೆರಿಗೆ ಇಳಿಕೆ ದೀರ್ಘಾವಧಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ, ವಿಶೇಷವಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ‌ ಸಂದರ್ಭ ರಫ್ತು ಹೆಚ್ಚಳವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು ತೆಂಗಿನ ನಾರಿನ ರಫ್ತಿನಿಂದ ₹4,343 ಕೋಟಿ ಆದಾಯ ಗಳಿಸಿದ್ದು, ಅದರಲ್ಲಿ ಅಮೆರಿಕದಿಂದಲೇ ಸುಮಾರು ₹1,400 ಕೋಟಿ ಬಂದಿದೆ. ಒಟ್ಟು ತೆಂಗಿನ ನಾರು ರಫ್ತಿನ ಸರಿಸುಮಾರು ಶೇ.40ರಷ್ಟು ಅಮೆರಿಕ ಮಾರುಕಟ್ಟೆಗೆ ಹೋಗುತ್ತದೆ.

ಆಗಸ್ಟ್ 27, 2025ರಿಂದ ಜಾರಿಗೆ ಬಂದಿದ್ದ ಶೇ.50ರಷ್ಟು ತೆರಿಗೆಯಿಂದಾಗಿ ಅಮೆರಿಕ ಮಾರುಕಟ್ಟೆಯಲ್ಲಿ ಭಾರತೀಯ ತೆಂಗಿನ ನಾರು ಉತ್ಪನ್ನಗಳ ಬೆಲೆ ಗಣನೀಯವಾಗಿ ಹೆಚ್ಚಿತ್ತು. ಇದರ ಪರಿಣಾಮವಾಗಿ ಕೇವಲ ಒಂದು ತ್ರೈಮಾಸಿಕದಲ್ಲೇ ಸುಮಾರು ₹400 ಕೋಟಿ ನಷ್ಟ ಉಂಟಾಗಿತ್ತು. ಈ ತೆರಿಗೆಯ ಹೊಡೆತವನ್ನು ಹೆಚ್ಚು ಅನುಭವಿಸಿದ್ದು ಕೇರಳದ ತೆಂಗಿನ ನಾರು ಉದ್ಯಮ. ಅಮೆರಿಕಕ್ಕೆ ಭಾರತದ ಒಟ್ಟು ತೆಂಗಿನ ನಾರು ರಫ್ತಿನಲ್ಲಿ ಕೇರಳದ ಪಾಲು ಸುಮಾರು ಶೇ.57ರಷ್ಟಿದೆ. ಹೆಚ್ಚಿನ ತೆರಿಗೆಯಿಂದಾಗಿ ರಫ್ತುದಾರರು ಯುರೋಪ್ ಮತ್ತು ಏಷ್ಯಾದ ಇತರೆ ಮಾರುಕಟ್ಟೆಗಳತ್ತ ಮುಖ ಮಾಡಬೇಕಾಯಿತು.

ಆದರೆ ಈಗ ತೆರಿಗೆಯನ್ನು ಶೇ.18ಕ್ಕೆ ಇಳಿಸಿರುವುದರಿಂದ, ತೆಂಗಿನ ನಾರು ಮ್ಯಾಟ್‌ಗಳಂತಹ ಉತ್ಪನ್ನಗಳು ಮತ್ತೆ ಸ್ಪರ್ಧಾತ್ಮಕವಾಗಲಿದ್ದು, ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದಕ್ಕೆ ಸಮಾನವಾಗಿ, ಅಮೆರಿಕವು ಸಿಗಡಿ ರಫ್ತಿನ ಮೇಲಿನ ಪರಸ್ಪರ ತೆರಿಗೆಯನ್ನು ಕಡಿಮೆ ಮಾಡಿರುವುದರಿಂದ ಆಂಧ್ರಪ್ರದೇಶದಲ್ಲಿ ಜಲಚರ ಸಾಕಣೆ ಕ್ಷೇತ್ರ ಪುನರುಜ್ಜೀವನಗೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷ ಆರ್ಥಿಕ ಅನಿಶ್ಚಿತತೆಯಲ್ಲಿ ಸಿಲುಕಿದ್ದ ಲಕ್ಷಾಂತರ ಜಲಚರ ಸಾಕಣೆ ರೈತರಿಗೆ ಇದು ದೊಡ್ಡ ರಿಲೀಫ್ ಆಗಿದೆ. ಸುಮಾರು 8 ಲಕ್ಷ ಜನರು — ರೈತರು, ಕಾರ್ಮಿಕರು ಹಾಗೂ ವ್ಯಾಪಾರಿಗಳು — ಜಲಚರ ಸಾಕಣೆಯನ್ನು ಅವಲಂಬಿಸಿದ್ದಾರೆ. ಹಿಂದಿನ ಅವಧಿಯಲ್ಲಿ ತೆರಿಗೆ 7 ಶೇಕಡೆಯಿಂದ ಸುಮಾರು 60 ಶೇಕಡೆಗೆ ಏರಿಕೆಯಾದ ಪರಿಣಾಮ, ರಫ್ತು ಕುಸಿತ ಕಂಡಿತ್ತು. ಈಗ ತೆರಿಗೆ ಕಡಿತವು ಈ ವಲಯಕ್ಕೂ ಹೊಸ ಉಸಿರು ತುಂಬುವ ನಿರೀಕ್ಷೆ ಇದೆ.

ಇದನ್ನೂ ಓದಿ…

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

6 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

13 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

13 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

20 hours ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

21 hours ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

2 days ago