Advertisement
MIRROR FOCUS

ಉಪಯೋಗಿಸಿ ನೋಡಿ ಕೋಳಿ ಗೊಬ್ಬರ | ಹೊಲದಲ್ಲಿ ಬೆಳೆಗಳ ಅಬ್ಬರ..! | ಒಂದಷ್ಟು ನಕಾರಾತ್ಮಕ ಅಂಶಗಳು ಇವೆ..! ಎಚ್ಚರ…

Share

ಅತಿಯಾದ ರಾಸಾಯನಿಕ ಗೊಬ್ಬರಗಳ(Chemical Fertilizer) ಬಳಕೆಯಿಂದ ಮಣ್ಣಿನ ಫಲವತ್ತತೆ(Soil fertility) ಹಾಳಾಗಿದ್ದಲ್ಲದೆ ನಾವು ಸೇವಿಸುವ ಆಹಾರ ಕಲುಷಿತಗೊಂಡಿದೆ(Contaminated food). ಇಂತಹ ವಿಷಯಗಳನ್ನು ಅರಿತ ಕೆಲವು ರೈತರು(Farmer) ಸಾವಯವ ಗೊಬ್ಬರಗಳಾದ(Organic fertilizer) ಕೊಟ್ಟಿಗೆ ಗೊಬ್ಬರ(Cow Manure), ಆಡು/ಕುರಿ ಗೊಬ್ಬರ(Goat/Sheep Manure), ಎರೆಹುಳು ಗೊಬ್ಬರ(Earthworm Manure), ಹಂದಿ ಗೊಬ್ಬರ(Pig Manure) ಮತ್ತು ಕೋಳಿ ಗೊಬ್ಬರವನ್ನು(Poultry Manure) ಬಳಸಿ ಕೃಷಿ(Agriculture) ಮಾಡುತ್ತಿದ್ದಾರೆ.

Advertisement
Advertisement

ಬೇರೆ ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಕೋಳಿ ಗೊಬ್ಬರದಲ್ಲಿ ಹೆಚ್ಚು ಸಾರಜನಕ, ರಂಜಕ ಮತ್ತು ಪೊಟ್ಯಾಷ್(Nitrogen, Phosphorus, Potash)ಸಿಗುತ್ತವೆ ಆದ್ದರಿಂದಲೇ ಕೋಳಿ ಹಿಕ್ಕಿಯನ್ನು ರೈತರು ಬೆಳೆಗಳಿಗೆ ಗೊಬ್ಬರಗಳಾಗಿ ಬಳಸುತ್ತಾರೆ. ಇತ್ತಿಚೆಗೆ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿದೆ ಅನೇಕ ರೈತರು ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಉದ್ದೇಶದಿಂದ ಕೋಳಿಗಳನ್ನು ಸಾಕುತ್ತಾರೆ. ಜೊತೆ ಜೊತೆಗೆ ಕೋಳಿ ಗೊಬ್ಬರವನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ.

Advertisement

ಕೃಷಿಯಲ್ಲಿ ರೈತರು ಕೋಳಿ ಗೊಬ್ಬರವನ್ನು ಬಳಸಿದರೆ ಹೆಚ್ಚಿನ ಇಳುವರಿ ಪಡೆಯುವ ಜೊತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಕೋಳಿ ಸಾಕಾಣಿಕಾ ಕೇಂದ್ರದಿಂದ ತಂದ ಗೊಬ್ಬರವನ್ನು ರೈತರು ನೇರವಾಗಿ ಬೆಳೆಗಳಿಗೆ ಬಳಸಬಾರದು. ಕೆಲ ದಿನಗಳ ತನಕ ತೇವಾಂಶ ಇರುವ ಸ್ಥಳದಲ್ಲಿ ಸಂಗ್ರಹಿಸಿ ಉಪಯೋಗಿಸಬೇಕು. ಹೆಚ್ಚು ತೇವಾಂಶ ಇರುವ ಅಂದರೆ ಮಳೆಗಾಲದ ಸಮಯದಲ್ಲಿ ಈ ಗೊಬ್ಬರ ಬೆಳೆಸಿದರೆ ಇನ್ನು ಸೂಕ್ತ.

ಆದರೆ ಕೆಲ ರೈತರ ಅನುಭವದ ಪ್ರಕಾರ ಕೋಳಿ ಗೊಬ್ಬರದ ಬಗ್ಗೆ ಒಂದಷ್ಟು ನಕಾರಾತ್ಮಕ ಆಲೋಚನೆಗಳು ಇವೆ. ಹಾಗಾಗಿ ಕೋಳಿ ಗೊಬ್ಬರ ಒಳ್ಳೆಯದು ಹೌದೋ ಅಲ್ಲವೋ ಎಂಬ ಬಗ್ಗೆ ರೈತರೇ ವಿಮರ್ಷೆ ಮಾಡಬೇಕು, ಗೊಬ್ಬರದಿಂದ ಕೃಷಿ ಹಾಳಾಗಿದೆಯೆಂದು ಕೆಲ ರೈತರು ಹೇಳುವುದು ಇದೆ. ಯಾವುದೇ ಬಾಹ್ಯ ಪರಿಕರಗಳು ಕೃಷಿ ಕಾರ್ಯಗಳಲ್ಲಿ ಬಳಸುವುದು ಈಗ ಬಹಳ ಅಪಾಯಕಾರಿ ಮತ್ತು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಕೋಳಿ ಗೊಬ್ಬರದಲ್ಲಿ ಸೇರಿರುವ ವಿನಾಶಕಾರಿ, ಪ್ರಚೋದನಕಾರಿ ಔಷಧಿಗಳು ಕೃಷಿ ಭೂಮಿಯಲ್ಲಿ ಸೇರಿ, ಮುಂದೆ ಕುಡಿಯುವ ನೀರು ಕೂಡಾ ಕಲ್ಮಶವಾಗುತ್ತದೆ. ಮಾರಣಾಂತಿಕ ಕಾಯಿಲೆಗಳು ಪ್ರಾರಂಭ ಆಗಲು ಇವುಗಳು ಬೀಜಾಂಕುರ ಆಗಿರುತ್ತದೆ. ಕೋಳಿ ಗೊಬ್ಬರ ಅಧಿಕ ಉಪಯೋಗ ಅಡಿಕೆ ಮರಗಳು ಹೆಚ್ಚು ಟೊಳ್ಳಾಗುತ್ತದೆ. ಪ್ರಕೃತಿ ವಿಕೋಪದಲ್ಲಿ ಬೇಗನೆ ಮುರಿದು ಬೀಳುತ್ತವೆ. ಹಾಗೆ ಕೋಳಿ ಗೊಬ್ಬರ ತುಂಬಾ ಹೀಟ್ ಅನ್ನೋ ಬಗ್ಗೆ ಕೆಲ ರೈತರ ಅಭಿಪ್ರಾಯವಿದೆ. ಯಾವುದಕ್ಕೂ ಒಂದಷ್ಟು ಪ್ರಯೋಗ, ಅಥವಾ ಈಗಾಗಲೇ ಬಳಸಿದ ರೈತರ ಸಲಹೆ ಪಡೆಯುವುದು ಉತ್ತಮ.

Advertisement

ಮಾಹಿತಿ ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಡ್ರಾಗನ್‌ ಫ್ರುಟ್‌ ಬೆಳೆದು ಮಾರುಕಟ್ಟೆ ಕಂಡುಕೊಂಡ ಕೃಷಿಕ | ಸಣ್ಣ ರೈತರು ಮಾರುಕಟ್ಟೆಗೆ ಚಿಂತಿಸಬೇಕಿಲ್ಲ…!

ಡ್ರಾಗನ್‌ ಫ್ರುಟ್‌ ಕೃಷಿ ಮಾಡಿ ಸ್ವತ: ಮಾರುಕಟ್ಟೆಯನ್ನೂ ಕಂಡುಕೊಂಡು ಮಾರಾಟವನ್ನೂ ಮಾಡುವ ಮೂಲಕ…

3 hours ago

ಮಳೆ ಹಿನ್ನೆಲೆಯಲ್ಲಿ ಗಿರಿಶಿಖರಗಳ ಟ್ರೆಕ್ಕಿಂಗ್ ನಿಷೇಧ | ನೀರಿಗೆ ಇಳಿಯದಂತೆ ಜಿಲ್ಲಾಧಿಕಾರಿ ಆದೇಶ |

ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿರುತ್ತವೆ. ಸಾರ್ವಜನಿಕರ ಹಿತಾಸಕ್ತಿಯನ್ನು…

4 hours ago

ಕುಸಿಯುತ್ತಿರುವ ಸೇತುವೆಗಳು ಮತ್ತು ಕಬ್ಬಿಣ ಹಾಗು ಸಿಮೆಂಟಿನ ಜಾಹೀರಾತುಗಳು…!

ಭೂಕಂಪಕ್ಕೂ(Earthquake) ಕುಗ್ಗಲ್ಲ, ಚಂಡಮಾರುತಕ್ಕೂ(Cyclone) ಜಗ್ಗಲ್ಲ, ನಮ್ಮ ಕಂಪನಿಯ ಕಬ್ಬಿಣ(Iron) ಮತ್ತು ಉಕ್ಕು(Steel). ಹಾಗೆಯೇ…

11 hours ago

ನಿಮಗಿದು ಗೊತ್ತೇ…? | RO ಹಾಗೂ ಬಾಟಲಿ ನೀರುಗಳನ್ನು ತ್ಯಜಿಸಿ ಮನೆಯಲ್ಲಿ ಸಜೀವಗೊಳಿಸಿದ ನೀರನ್ನು ಬಳಸಿ

"ಜಲವೇ ಜೀವನ," "ಜೀವ ಜಲ," "ಜಲವೇ ಅಮೃತ," "ಅಮೃತ ಜಲ"(Water) ಇತ್ಯಾದಿಯಾಗಿ ನೀರಿನ…

12 hours ago

ಪಶುಗಳ ಪಾಲಿನ “ಆನಂದ” ಡಾಕ್ಟರ್ ಆನಂದ್ | ಪಶು ವೈದ್ಯಕೀಯ ಸಚಿವಾಲಯ ಮಲೆನಾಡಿನ ಕಡೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಬೇಕು |

ಗ್ರಾಮೀಣ ಭಾಗದಲ್ಲಿ ಪಶು ಸೇರಿದಂತೆ ಇತರ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಸೂಕ್ತ ವೈದ್ಯರ…

12 hours ago

ಕೀನ್ಯಾದಲ್ಲಿ ಕಾಗೆಗಳನ್ನು ಕೊಲ್ಲಲು ಆದೇಶ | ಈಗ ಅಮೇರಿಕಾದಲ್ಲಿ ನಾಲ್ಕೂವರೆ ಲಕ್ಷ ಗೂಬೆಗಳನ್ನು ಕೊಲ್ಲಲು ಆದೇಶ..! | ಕಾರಣ ಏನು ಗೊತ್ತಾ..?

ಅಮೇರಿಕಾದ ವನ್ಯಜೀವಿ ಅಧಿಕಾರಿಗಳು ಅಳಿವಿನಂಚಿನಲ್ಲಿರುವ ಮಚ್ಚೆಯುಳ್ಳ ಗೂಬೆಗಳನ್ನು ಉಳಿಸಲು ನಿಷೇಧಿತ ಗೂಬೆಗಳನ್ನು ಕೊಲ್ಲಲು…

12 hours ago