MIRROR FOCUS

ಉಪಯೋಗಿಸಿ ನೋಡಿ ಕೋಳಿ ಗೊಬ್ಬರ | ಹೊಲದಲ್ಲಿ ಬೆಳೆಗಳ ಅಬ್ಬರ..! | ಒಂದಷ್ಟು ನಕಾರಾತ್ಮಕ ಅಂಶಗಳು ಇವೆ..! ಎಚ್ಚರ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅತಿಯಾದ ರಾಸಾಯನಿಕ ಗೊಬ್ಬರಗಳ(Chemical Fertilizer) ಬಳಕೆಯಿಂದ ಮಣ್ಣಿನ ಫಲವತ್ತತೆ(Soil fertility) ಹಾಳಾಗಿದ್ದಲ್ಲದೆ ನಾವು ಸೇವಿಸುವ ಆಹಾರ ಕಲುಷಿತಗೊಂಡಿದೆ(Contaminated food). ಇಂತಹ ವಿಷಯಗಳನ್ನು ಅರಿತ ಕೆಲವು ರೈತರು(Farmer) ಸಾವಯವ ಗೊಬ್ಬರಗಳಾದ(Organic fertilizer) ಕೊಟ್ಟಿಗೆ ಗೊಬ್ಬರ(Cow Manure), ಆಡು/ಕುರಿ ಗೊಬ್ಬರ(Goat/Sheep Manure), ಎರೆಹುಳು ಗೊಬ್ಬರ(Earthworm Manure), ಹಂದಿ ಗೊಬ್ಬರ(Pig Manure) ಮತ್ತು ಕೋಳಿ ಗೊಬ್ಬರವನ್ನು(Poultry Manure) ಬಳಸಿ ಕೃಷಿ(Agriculture) ಮಾಡುತ್ತಿದ್ದಾರೆ.

Advertisement
Advertisement

ಬೇರೆ ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಕೋಳಿ ಗೊಬ್ಬರದಲ್ಲಿ ಹೆಚ್ಚು ಸಾರಜನಕ, ರಂಜಕ ಮತ್ತು ಪೊಟ್ಯಾಷ್(Nitrogen, Phosphorus, Potash)ಸಿಗುತ್ತವೆ ಆದ್ದರಿಂದಲೇ ಕೋಳಿ ಹಿಕ್ಕಿಯನ್ನು ರೈತರು ಬೆಳೆಗಳಿಗೆ ಗೊಬ್ಬರಗಳಾಗಿ ಬಳಸುತ್ತಾರೆ. ಇತ್ತಿಚೆಗೆ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿದೆ ಅನೇಕ ರೈತರು ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಉದ್ದೇಶದಿಂದ ಕೋಳಿಗಳನ್ನು ಸಾಕುತ್ತಾರೆ. ಜೊತೆ ಜೊತೆಗೆ ಕೋಳಿ ಗೊಬ್ಬರವನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ.

ಕೃಷಿಯಲ್ಲಿ ರೈತರು ಕೋಳಿ ಗೊಬ್ಬರವನ್ನು ಬಳಸಿದರೆ ಹೆಚ್ಚಿನ ಇಳುವರಿ ಪಡೆಯುವ ಜೊತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಕೋಳಿ ಸಾಕಾಣಿಕಾ ಕೇಂದ್ರದಿಂದ ತಂದ ಗೊಬ್ಬರವನ್ನು ರೈತರು ನೇರವಾಗಿ ಬೆಳೆಗಳಿಗೆ ಬಳಸಬಾರದು. ಕೆಲ ದಿನಗಳ ತನಕ ತೇವಾಂಶ ಇರುವ ಸ್ಥಳದಲ್ಲಿ ಸಂಗ್ರಹಿಸಿ ಉಪಯೋಗಿಸಬೇಕು. ಹೆಚ್ಚು ತೇವಾಂಶ ಇರುವ ಅಂದರೆ ಮಳೆಗಾಲದ ಸಮಯದಲ್ಲಿ ಈ ಗೊಬ್ಬರ ಬೆಳೆಸಿದರೆ ಇನ್ನು ಸೂಕ್ತ.

ಆದರೆ ಕೆಲ ರೈತರ ಅನುಭವದ ಪ್ರಕಾರ ಕೋಳಿ ಗೊಬ್ಬರದ ಬಗ್ಗೆ ಒಂದಷ್ಟು ನಕಾರಾತ್ಮಕ ಆಲೋಚನೆಗಳು ಇವೆ. ಹಾಗಾಗಿ ಕೋಳಿ ಗೊಬ್ಬರ ಒಳ್ಳೆಯದು ಹೌದೋ ಅಲ್ಲವೋ ಎಂಬ ಬಗ್ಗೆ ರೈತರೇ ವಿಮರ್ಷೆ ಮಾಡಬೇಕು, ಗೊಬ್ಬರದಿಂದ ಕೃಷಿ ಹಾಳಾಗಿದೆಯೆಂದು ಕೆಲ ರೈತರು ಹೇಳುವುದು ಇದೆ. ಯಾವುದೇ ಬಾಹ್ಯ ಪರಿಕರಗಳು ಕೃಷಿ ಕಾರ್ಯಗಳಲ್ಲಿ ಬಳಸುವುದು ಈಗ ಬಹಳ ಅಪಾಯಕಾರಿ ಮತ್ತು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಕೋಳಿ ಗೊಬ್ಬರದಲ್ಲಿ ಸೇರಿರುವ ವಿನಾಶಕಾರಿ, ಪ್ರಚೋದನಕಾರಿ ಔಷಧಿಗಳು ಕೃಷಿ ಭೂಮಿಯಲ್ಲಿ ಸೇರಿ, ಮುಂದೆ ಕುಡಿಯುವ ನೀರು ಕೂಡಾ ಕಲ್ಮಶವಾಗುತ್ತದೆ. ಮಾರಣಾಂತಿಕ ಕಾಯಿಲೆಗಳು ಪ್ರಾರಂಭ ಆಗಲು ಇವುಗಳು ಬೀಜಾಂಕುರ ಆಗಿರುತ್ತದೆ. ಕೋಳಿ ಗೊಬ್ಬರ ಅಧಿಕ ಉಪಯೋಗ ಅಡಿಕೆ ಮರಗಳು ಹೆಚ್ಚು ಟೊಳ್ಳಾಗುತ್ತದೆ. ಪ್ರಕೃತಿ ವಿಕೋಪದಲ್ಲಿ ಬೇಗನೆ ಮುರಿದು ಬೀಳುತ್ತವೆ. ಹಾಗೆ ಕೋಳಿ ಗೊಬ್ಬರ ತುಂಬಾ ಹೀಟ್ ಅನ್ನೋ ಬಗ್ಗೆ ಕೆಲ ರೈತರ ಅಭಿಪ್ರಾಯವಿದೆ. ಯಾವುದಕ್ಕೂ ಒಂದಷ್ಟು ಪ್ರಯೋಗ, ಅಥವಾ ಈಗಾಗಲೇ ಬಳಸಿದ ರೈತರ ಸಲಹೆ ಪಡೆಯುವುದು ಉತ್ತಮ.

ಮಾಹಿತಿ ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

8 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

8 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

9 hours ago

ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿಗೆ ಸೂರ್ಯಕಾಂತಿ ಖರೀದಿಗೆ ಕೇಂದ್ರ ಅನುಮತಿ…

9 hours ago

ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಉಪಲೋಕಾಯುಕ್ತರು ಸೂಚನೆ

ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಅಗಿಲೆಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ…

9 hours ago

ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ, ತೆಲಂಗಾಣ, ಕರ್ನಾಟಕ,…

9 hours ago