ಒಂದು ಕಾಲದಲ್ಲಿ ದಾಖಲೆಯ ಮಟ್ಟಕ್ಕೆ ಏರಿದ್ದ ವಿಯೆಟ್ನಾಂನ ಅಡಿಕೆ ಬೆಲೆ ಈಗ ತೀವ್ರ ಕುಸಿತ ಕಂಡಿದೆ. ಚೀನಾದಿಂದ ಬಂದಿದ್ದ ಭಾರೀ ಬೇಡಿಕೆಯ ಕಾರಣ 2024 ರಲ್ಲಿ ಕೆ.ಜಿ.ಗೆ 80,000-90,000 ವಿಯೆಟ್ನಾಮೀಸ್ ಡಾಂಗ್ವರೆಗೆ ಏರಿದ್ದ ಅಡಿಕೆ ಬೆಲೆ ಇದೀಗ ಕೆಲ ಪ್ರದೇಶಗಳಲ್ಲಿ 12,000-25,000 ಡಾಂಗ್ ಮಟ್ಟಕ್ಕೆ ಇಳಿದಿದೆ.
ವಿಯೆಟ್ನಾಂನ ಕ್ವಾಂಗ್ ನ್ಗಾಯಿ ಮತ್ತು ಕ್ವಾಂಗ್ ನಾಮ್ ಪ್ರದೇಶಗಳಲ್ಲಿ ಚೀನಾದ ವ್ಯಾಪಾರಿಗಳು ಅಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದರಿಂದ ಬೆಲೆಗಳು ಗಗನಕ್ಕೇರಿದ್ದವು. ಆದರೆ ಚೀನಾದ ಖರೀದಿ ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಆರಂಭವಾಗಿದೆ. ಕೆಲ ಖರೀದಿ ಕೇಂದ್ರಗಳು ಖರೀದಿಯನ್ನೇ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.
ಅಡಿಕೆ ಒಣಗಿಸುವ ಘಟಕಗಳು ಹಾಗೂ ವ್ಯಾಪಾರಿಗಳು ಚೀನಾದಿಂದ ಆದೇಶಗಳು ಕಡಿಮೆಯಾಗಿರುವುದನ್ನು ಬೆಲೆ ಕುಸಿತದ ಪ್ರಮುಖ ಕಾರಣವೆಂದು ಹೇಳಿದ್ದಾರೆ. ಚೀನಾದ ಬೇಡಿಕೆಯ ಮೇಲೆ ಅತಿಯಾದ ಅವಲಂಬನೆಯಿರುವ ಮಾರುಕಟ್ಟೆಗಳಲ್ಲಿ ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಚೀನಾದಲ್ಲಿ ಹಳದಿ ಎಲೆ ರೋಗದಿಂದ ಅಡಿಕೆ ಉತ್ಪಾದನೆ ಕುಸಿದ ಪರಿಣಾಮ ವಿಯೆಟ್ನಾಂ ಅಡಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಈಗ ಖರೀದಿ ಕಡಿಮೆಯಾಗಿರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ವಿಯೆಟ್ನಾಂ ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ಕುಸಿತ – ಭಾರತಕ್ಕೆ ಏನು ಪರಿಣಾಮ? : ಭಾರತದಲ್ಲಿ ಉತ್ಪಾದನೆಯಾಗುವ ಅಡಿಕೆಯ ಬಹುಪಾಲು ದೇಶೀಯ ಬಳಕೆಗೆ ಹೋಗುತ್ತದೆ. ಹೀಗಾಗಿ ವಿಯೆಟ್ನಾಂ ಅಡಿಕೆ ದರ ಕುಸಿತವು ಭಾರತದ ಅಡಿಕೆ ಮಾರುಕಟ್ಟೆಗ ಸಮಸ್ಯೆ ಇಲ್ಲ. ಕರ್ನಾಟಕ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ಮಾರುಕಟ್ಟೆ ಚೀನಾ ಬೇಡಿಕೆಯ ಮೇಲೆ ನೇರವಾಗಿ ಅವಲಂಬಿತವಾಗಿಲ್ಲ. ಆದ್ದರಿಂದ ವಿಯೆಟ್ನಾಂನಲ್ಲಿ ಬೆಲೆ ಕುಸಿದ ಕಾರಣಕ್ಕೆ ಭಾರತೀಯ ಮಾರುಕಟ್ಟೆ ತಕ್ಷಣ ಕುಸಿಯುವ ಸಾಧ್ಯತೆ ಕಡಿಮೆ. ಆದರೆ ವಿಯೆಟ್ನಾಂನಲ್ಲಿ ಬೆಲೆ ಕುಸಿದರೆ ಅಲ್ಲಿನ ಅಡಿಕೆ ಇನ್ನಷ್ಟು ಅಗ್ಗವಾಗಬಹುದು. ಆಗ ಕೆಲವು ವ್ಯಾಪಾರಿಗಳು ಮ್ಯಾನ್ಮಾರ್, ಬಾಂಗ್ಲಾದೇಶ ಅಥವಾ ಈಶಾನ್ಯ ರಾಜ್ಯಗಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಅಡಿಕೆ ತರಲು ಪ್ರಯತ್ನಿಸಬಹುದು. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ಅಗತ್ಯ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Vietnam’s arecanut market has witnessed a sharp price crash after a period of record-high prices driven by Chinese demand. Prices that once touched 80,000-90,000 VND per kg have fallen drastically in some regions, highlighting the risks of dependence on a single export market
ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…
18-25 ವರ್ಷ ವಯಸ್ಸಿನ Gen Z ಯುವಕರನ್ನು ಸೆಳೆಯಲು ಬಿಜೆಪಿ ‘ತರುಣ ಮೋರ್ಚಾ’…
ಕರ್ನಾಟಕದಲ್ಲಿ ಮುಂಗಾರು ಇನ್ನೂ ಪೂರ್ಣ ಪ್ರಮಾಣದಲ್ಲಿ ಚುರುಕುಗೊಂಡಿಲ್ಲ. ಎಲ್ ನಿನೋ ಪ್ರಭಾವದಿಂದ ಮಳೆಯ…
2026ರ ಖಾರಿಫ್ ಹಂಗಾಮಿಗೆ ಸಿದ್ಧತೆ ಪರಿಶೀಲಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್…
ಇಂಡೋನೇಷ್ಯಾದ ಸ್ಟಾರ್ಟ್ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…
ಬಿದದಿ ಎಐ ಟೌನ್ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…