Advertisement
ವೈರಲ್ ಸುದ್ದಿ

ಮರದಿಂದ ನೀರು ಚಿಮ್ಮುತ್ತದೆ ಏಕೆ.. ? | ಅದರ ಹಿಂದಿನ ವಿಜ್ಞಾನ ಏನು ?

Share

ಮರದಿಂದ ನೀರು ಚಿಮ್ಮುತ್ತಿದೆ. ಪ್ರಕೃತಿಯ ಈ ಅಚ್ಚರಿ ಅಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಜ್ಞಾನದ ಮೂಲಕ ಈ ಅಚ್ಚರಿಗೆ ಉತ್ತರವೂ ಸಿಕ್ಕಿದೆ. ಈ ಘಟನೆ ನಡೆದದ್ದು ಯುರೋಪಿನ ಮಾಂಟೆನೆಗ್ರೊದಲ್ಲಿ.  ಹಿಪ್ಪುನೇರಳೆ ಮರದಲ್ಲಿ  ಈ ಕೌತುಕ ಕಂಡಿತ್ತು. 

ಆಗ್ನೇಯ ಯುರೋಪಿನ ಮಾಂಟೆನೆಗ್ರೊದಲ್ಲಿರುವ ಹಿಪ್ಪುನೇರಳೆ ಮರವು ಅದರ ಕಾಂಡದೊಳಗೆ ಧಾರಾಕಾರವಾಗಿ ನೀರನ್ನು ಹೊರಹಾಕುವುದನ್ನು ಕಾಣುತ್ತಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಯಿತು. ಮರದಿಂದ ಈ ರೀತಿ ನೀರು ಚಿಮ್ಮಲು ಸಾಧ್ಯವೇ ಎಂದು ಚರ್ಚೆಯಾಗಿತ್ತು. ಅದರಲ್ಲಿ  ಏನೋ ಕೌತುಕವಿದೆ ಎಂದೂ ಚರ್ಚೆಯಾಯಿತು. ಆದರೆ ಪ್ರಪಂಚದಾದ್ಯಂತ ಇದೇ ಮಾದರಿಯಲ್ಲಿ  ವಿವಿಧ ಮರಗಳಲ್ಲಿ  ನೀರು ಹೊರಬರುತ್ತದೆ, ಕೆಲವು ಮರಗಳಲ್ಲಿ ನೀರು ಚಿಮ್ಮುತ್ತದೆ ಕೂಡಾ. ಕೆಲವು ಮರಗಳಲ್ಲಿ  ಗೆಲ್ಲು, ಟೊಂಗೆ ಕಡಿದಾಗ ನೀರು ಹರಿದರೆ ಇನ್ನೂ ಕೆಲವು ಮರಗಳಲ್ಲಿ ಪ್ರಕೃತಿ ಸಹಜವಾಗಿಯೇ ವರ್ಷಕ್ಕೊಮ್ಮೆ ನೀರು ಹರಿಯುತ್ತದೆ.  ಕೆಲವು ಮರಗಳು ಪ್ರತಿ ವರ್ಷ, ಒಂದು ಅಥವಾ ಎರಡು ದಿನಗಳವರೆಗೆ, ಮರಗಳ ತೊಗಟೆಗಳು ಅವುಗಳ ಮೂಲಕ ನೀರನ್ನು ಹರಿಯುವಂತೆ ಮಾಡುತ್ತವೆ.

ಮಾಂಟೆನೆಗ್ರೊದ ರಾಜಧಾನಿಯಾದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲೂ ಅದೇ ಮಾದರಿಯಲ್ಲಿ ಮರದಿಂದ ನೀರು ಹರಿದಿದೆ. ಮರದ ಟೊಳ್ಳುಗಳು ಉಕ್ಕಿ ಹರಿಯುವಿಕೆಯನ್ನು ಸಮತೋಲನಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಮರಗಳು ಈ ರೀತಿಯಲ್ಲಿ  ನೀರನ್ನು ಹೊರಹಾಕುತ್ತವೆ. ಮಳೆ ಕಳೆದು ಬೇಸಗೆಯ ಸಮಯದಲ್ಲಿ  ಮರಗಳು ಸಮತೋಲನ ಕಾಣಲು ಈ ರೀತಿ ಮಾಡುತ್ತವೆ ಎಂದು ವೈಜ್ಞಾನಿಕ ಕಾರಣವನ್ನು ಕೊಡಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಜಾಗತಿಕ ಬಿಕ್ಕಟ್ಟಿನ ಪರಿಣಾಮ : ಬೆಂಗಳೂರಿಗೆ ಆಟೋ LPG ಪೂರೈಕೆ 300% ಹೆಚ್ಚಿಸಿದ ಇಂಡಿಯನ್ ಆಯಿಲ್

ಜಾಗತಿಕ ಬಿಕ್ಕಟ್ಟಿನಿಂದ ಆಟೋ LPG ಬೇಡಿಕೆ ಏರಿಕೆ ಕಂಡಿದ್ದು, ಇಂಡಿಯನ್ ಆಯಿಲ್ ಪೂರೈಕೆಯನ್ನು…

4 hours ago

ಕೃಷಿಗೆ ಹೊಸ ಚೈತನ್ಯ- ದೂರದರ್ಶನ ಚಂದನದಿಂದ “ರೈತ ರತ್ನ” ರಿಯಾಲಿಟಿ ಶೋ ಆರಂಭ

“ರೈತ ರತ್ನ” ರಿಯಾಲಿಟಿ ಶೋ ಮೂಲಕ ಕೃಷಿಕರ ಸಾಧನೆಗೆ ಹೊಸ ವೇದಿಕೆ ಸಿಕ್ಕಿದೆ.…

4 hours ago

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

13 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

22 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

1 day ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

1 day ago