Advertisement
ವೈರಲ್ ಸುದ್ದಿ

ಮರದಿಂದ ನೀರು ಚಿಮ್ಮುತ್ತದೆ ಏಕೆ.. ? | ಅದರ ಹಿಂದಿನ ವಿಜ್ಞಾನ ಏನು ?

Share

ಮರದಿಂದ ನೀರು ಚಿಮ್ಮುತ್ತಿದೆ. ಪ್ರಕೃತಿಯ ಈ ಅಚ್ಚರಿ ಅಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಜ್ಞಾನದ ಮೂಲಕ ಈ ಅಚ್ಚರಿಗೆ ಉತ್ತರವೂ ಸಿಕ್ಕಿದೆ. ಈ ಘಟನೆ ನಡೆದದ್ದು ಯುರೋಪಿನ ಮಾಂಟೆನೆಗ್ರೊದಲ್ಲಿ.  ಹಿಪ್ಪುನೇರಳೆ ಮರದಲ್ಲಿ  ಈ ಕೌತುಕ ಕಂಡಿತ್ತು. 

ಆಗ್ನೇಯ ಯುರೋಪಿನ ಮಾಂಟೆನೆಗ್ರೊದಲ್ಲಿರುವ ಹಿಪ್ಪುನೇರಳೆ ಮರವು ಅದರ ಕಾಂಡದೊಳಗೆ ಧಾರಾಕಾರವಾಗಿ ನೀರನ್ನು ಹೊರಹಾಕುವುದನ್ನು ಕಾಣುತ್ತಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಯಿತು. ಮರದಿಂದ ಈ ರೀತಿ ನೀರು ಚಿಮ್ಮಲು ಸಾಧ್ಯವೇ ಎಂದು ಚರ್ಚೆಯಾಗಿತ್ತು. ಅದರಲ್ಲಿ  ಏನೋ ಕೌತುಕವಿದೆ ಎಂದೂ ಚರ್ಚೆಯಾಯಿತು. ಆದರೆ ಪ್ರಪಂಚದಾದ್ಯಂತ ಇದೇ ಮಾದರಿಯಲ್ಲಿ  ವಿವಿಧ ಮರಗಳಲ್ಲಿ  ನೀರು ಹೊರಬರುತ್ತದೆ, ಕೆಲವು ಮರಗಳಲ್ಲಿ ನೀರು ಚಿಮ್ಮುತ್ತದೆ ಕೂಡಾ. ಕೆಲವು ಮರಗಳಲ್ಲಿ  ಗೆಲ್ಲು, ಟೊಂಗೆ ಕಡಿದಾಗ ನೀರು ಹರಿದರೆ ಇನ್ನೂ ಕೆಲವು ಮರಗಳಲ್ಲಿ ಪ್ರಕೃತಿ ಸಹಜವಾಗಿಯೇ ವರ್ಷಕ್ಕೊಮ್ಮೆ ನೀರು ಹರಿಯುತ್ತದೆ.  ಕೆಲವು ಮರಗಳು ಪ್ರತಿ ವರ್ಷ, ಒಂದು ಅಥವಾ ಎರಡು ದಿನಗಳವರೆಗೆ, ಮರಗಳ ತೊಗಟೆಗಳು ಅವುಗಳ ಮೂಲಕ ನೀರನ್ನು ಹರಿಯುವಂತೆ ಮಾಡುತ್ತವೆ.

ಮಾಂಟೆನೆಗ್ರೊದ ರಾಜಧಾನಿಯಾದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲೂ ಅದೇ ಮಾದರಿಯಲ್ಲಿ ಮರದಿಂದ ನೀರು ಹರಿದಿದೆ. ಮರದ ಟೊಳ್ಳುಗಳು ಉಕ್ಕಿ ಹರಿಯುವಿಕೆಯನ್ನು ಸಮತೋಲನಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಮರಗಳು ಈ ರೀತಿಯಲ್ಲಿ  ನೀರನ್ನು ಹೊರಹಾಕುತ್ತವೆ. ಮಳೆ ಕಳೆದು ಬೇಸಗೆಯ ಸಮಯದಲ್ಲಿ  ಮರಗಳು ಸಮತೋಲನ ಕಾಣಲು ಈ ರೀತಿ ಮಾಡುತ್ತವೆ ಎಂದು ವೈಜ್ಞಾನಿಕ ಕಾರಣವನ್ನು ಕೊಡಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

10 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

1 day ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago