ವಿಶ್ವ ಕವಿತಾ ದಿನದ ಶುಭಾಶಯಗಳು…
ಕವಿತೆ ಹುಟ್ಟುವುದು ಮನಸಿನಿಂದ. ಅಲ್ಲಿನ ಭಾವನೆಗಳು ಕವಿತೆಯಾಗಿ ರೂಪು ತಳೆಯುತ್ತವೆ. ಕವಿ ಹೃದಯಕ್ಕೆ ಎಲ್ಲವೂ ವಿಷಯವೇ….
ಓಡುವ ಮೋಡ, ಸುರಿಯುವ ಮಳೆ, ಮೂಡುವ ಸೂರ್ಯ , ಬಾನಂಚಿನಲ್ಲಿ ಮರೆಯಾಗುವ ಭಾಸ್ಕರ. ಅರಳು ನೈದಿಲೆ, ಮುಸುಕಿದ ಮಂಜು , ಕೊನೆ ಮೊದಲಿಲ್ಲದ ಆಗಸ. ಹೀಗೆ ಕವಿಗೆ .ಬರೆಯುವ ಮನಸಿದ್ದಾಗ ಎಲ್ಲವೂ ವಸ್ತುಗಳೇ.
ಕವಿತೆ ಬರೆಯುವುದು ಗದ್ಯ ಬರೆದಂತಲ್ಲ. ಹಾಡಲು ಅನುಕೂಲವಾಗುವಂತೆ ಬರೆದಾಗ ಅದಕ್ಕೊಂದು ವಿಶೇಷ ಆಕರ್ಷಣೆ. ಛಂದೋಬದ್ಧವಾಗಿ ಬರೆದಾಗ ಒಂದು ತೂಕ ಜಾಸ್ತಿಯೇ. ಕೆಲವೊಮ್ಮೆ ನಾಲ್ಕು ಗೆರೆ ಪ್ರಾಸಬದ್ಧವಾಗಿ ಬರೆದರೂ ಪದ್ಯವಾಗಿ ಬಿಡುತ್ತದೆ.. ಭಾವನೆಗಳ ಅಭಿವ್ಯಕ್ತಿಯೇ ಮುಖ್ಯ.
ಸಣ್ಣ ದೊಡ್ಡ ಕವಿಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ ಉದ್ದೇಶದೊಂದಿಗೆ 1999 ರಲ್ಲಿ ಯುನೆಸ್ಕೊ ವಿಶ್ವ ಕವಿತಾ ದಿನವೆಂದು ಮಾರ್ಚ್ 21 ರಂದು ಆರಂಭಿಸಿತು. ಈ ಹಿನ್ನೆಲೆಯಲ್ಲಿ ವಿಶ್ವ ದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತೆಗೆದು ಕೊಳ್ಳಿ ಪೆನ್ನು , ಪೇಪರ್. ಬರೆದುಬಿಡಿ ಒಂದು ಕವಿತೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…