Advertisement
MIRROR FOCUS

ಜಲಸಂರಕ್ಷಣೆಗೆ ಒಂದು ಮಾದರಿ | ಎರಡು ಗಂಟೆ ಕೆಲಸದಲ್ಲಿ ಪುಟಾಣಿ ಕಟ್ಟ | ಬಾವಿ ನೀರು ಏರಿಕೆ |

Share

ಬೇಸಗೆ ಆರಂಭವಾಯಿತು. ಕೆರೆ, ಬಾವಿಯಲ್ಲಿ  ನೀರಿನ ಮಟ್ಟ ಕಡಿಮೆಯಾಗುವ ಹೊತ್ತು ಆರಂಭವಾಯಿತು. ಈಗ ಜಲಸಂರಕ್ಷಣೆಯ ಪಾಠಗಳು ಅಗತ್ಯವಾಗಿದೆ. ಇದಕ್ಕೆ ಮಾದರಿಯಾಗಿ ಇಲ್ಲೊಂದು ಪುಟ್ಟ ಕಟ್ಟ ರಚನೆ ಮಾಡಿ ಓಡುವ ನೀರನ್ನು ನಿಲ್ಲುವಂತೆ ಮಾಡಿ ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಮಾದರಿಯೊಂದು ಇದೆ.

ಸುಳ್ಯ ತಾಲೂಕಿನ ಅಮರಮುಡ್ನೂರು  ಗ್ರಾಮದ ಕಟ್ಟದಮಜಲಿನ ಶಿವರಾಮ ಪೈಲೂರು ಅವರ  ಮನೆಯ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತದೆ. ಬಾವಿಯ  ತಳ ಭಾಗ 30 ಅಡಿ ದೂರದಲ್ಲಿ ಹರಿಯುವ ಸಣ್ಣ ತೋಡಿನ ಮಟ್ಟಕ್ಕೆ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ತೋಡಿನ ಹರಿವಿಗೆ ತಡೆಯೊಡ್ಡುವ ಯೋಚನೆ ಮಾಡಿದರು. ಆ ಕಟ್ಟದಲ್ಲಿ ನೀರು ಏರುವಂತೆ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ಒಂದಷ್ಟು ನೀರು ರಿಸರ್ವ್‌ ಆಗಿ ಉಳಿಯಿತು. ನೀರು ಬತ್ತು ಅವಧಿ ಮುಂದಕ್ಕೆ ಹೋಯಿತು.

ಈ ಪುಟ್ಟ ಕಟ್ಟ ರಚನೆಗೆ ಸರಳ ವಿಧಾನ. ಮೂವರು ಕೃಷಿ ಸಹಾಯಕರೊಂದಿಗೆ ಎರಡು ಗಂಟೆ ಕೆಲಸ. ಸುಮಾರು 20 ಗೊಬ್ಬರದ ಚೀಲಗಳಿಗೆ ತೋಡಿನ ಮಣ್ಣುಮಿಶ್ರಿತ ಮರಳು ತುಂಬಿ ಪೇರಿಸಿದ್ದರು. ಎದುರಿಗೆ ತುಂಡು ಕಲ್ಲುಗಳನ್ನು ಇಟ್ಟು ಮಣ್ಣು ತುಂಬಿ ಭದ್ರಪಡಿಸಿ , ಇನ್ನೊಂದು ಬದಿಗೆ ಹಳೆಯ ತೆಂಗಿನ ಮರದ ಬೊಡ್ಡೆಗಳನ್ನು ಜೋಡಿಸಿ ಪುಟಾಣಿ ಕಟ್ಟ ರೂಪುಗೊಂಡಿತು. ಈ ಕಟ್ಟದ ಮುನ್ನ, ಇನ್ನೊಂದು ಸಣ್ಣ ತಡೆ. ಅಲ್ಲಿಗೂ ತೆಂಗಿನ ಬೊಡ್ಡೆಗಳೇ ಆಧಾರ. ಈ ಪ್ರಯೋಗ ಬಾವಿಯಲ್ಲಿ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಬಹುದೆಂಬ ಆಶಾಭಾವ. ಪಕ್ಕದಲ್ಲಿರುವ ತೋಟಕ್ಕೂ ಪ್ರಯೋಜನ ಆದೀತು ಎಂದು ಹೇಳುತ್ತಾರೆ ಶಿವರಾಂ ಪೈಲೂರು.

ಈ ಮಾದರಿಗೆ ಪ್ರೇರಣೆಯಾದ್ದು ಸದಾ ನೀರೆಚ್ಚರ ಮೂಡಿಸುವುದರ ಜತೆಗೆ ಪ್ರೇರಣೆ ನೀಡುತ್ತಿರುವ ನೀರ ನೆಮ್ಮದಿಯತ್ತ ಪಡ್ರೆ ಎನ್ನುವ  ವಾಟ್ಸಪ್ ಗುಂಪು ಎಂದು ಹೇಳಲು ಮರೆಯುವುದಿಲ್ಲ ಶಿವರಾಮ ಪೈಲೂರು ಅವರು. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲಿ ಪುಟಾಣಿ ಕಟ್ಟಗಳ ರಚನೆ ಮಾಡುವ ಮೂಲಕ ಜಲಸಂರಕ್ಷಣೆ, ಹರಿಯುವ ನೀರಿನ ಬಳಕೆ,  ಒರತೆ, ಕೊಳವೆಬಾವಿ ನೀರನ್ನು ರಿಸರ್ವ್‌ ಆಗಿಡುವ ಪ್ರಯತ್ನ ಮಾಡಬಹುದು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

22 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

23 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

3 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

3 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

3 days ago