ಬೇಸಗೆ ಆರಂಭವಾಯಿತು. ಕೆರೆ, ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುವ ಹೊತ್ತು ಆರಂಭವಾಯಿತು. ಈಗ ಜಲಸಂರಕ್ಷಣೆಯ ಪಾಠಗಳು ಅಗತ್ಯವಾಗಿದೆ. ಇದಕ್ಕೆ ಮಾದರಿಯಾಗಿ ಇಲ್ಲೊಂದು ಪುಟ್ಟ ಕಟ್ಟ ರಚನೆ ಮಾಡಿ ಓಡುವ ನೀರನ್ನು ನಿಲ್ಲುವಂತೆ ಮಾಡಿ ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಮಾದರಿಯೊಂದು ಇದೆ.
ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಕಟ್ಟದಮಜಲಿನ ಶಿವರಾಮ ಪೈಲೂರು ಅವರ ಮನೆಯ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತದೆ. ಬಾವಿಯ ತಳ ಭಾಗ 30 ಅಡಿ ದೂರದಲ್ಲಿ ಹರಿಯುವ ಸಣ್ಣ ತೋಡಿನ ಮಟ್ಟಕ್ಕೆ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ತೋಡಿನ ಹರಿವಿಗೆ ತಡೆಯೊಡ್ಡುವ ಯೋಚನೆ ಮಾಡಿದರು. ಆ ಕಟ್ಟದಲ್ಲಿ ನೀರು ಏರುವಂತೆ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ಒಂದಷ್ಟು ನೀರು ರಿಸರ್ವ್ ಆಗಿ ಉಳಿಯಿತು. ನೀರು ಬತ್ತು ಅವಧಿ ಮುಂದಕ್ಕೆ ಹೋಯಿತು.
ಈ ಪುಟ್ಟ ಕಟ್ಟ ರಚನೆಗೆ ಸರಳ ವಿಧಾನ. ಮೂವರು ಕೃಷಿ ಸಹಾಯಕರೊಂದಿಗೆ ಎರಡು ಗಂಟೆ ಕೆಲಸ. ಸುಮಾರು 20 ಗೊಬ್ಬರದ ಚೀಲಗಳಿಗೆ ತೋಡಿನ ಮಣ್ಣುಮಿಶ್ರಿತ ಮರಳು ತುಂಬಿ ಪೇರಿಸಿದ್ದರು. ಎದುರಿಗೆ ತುಂಡು ಕಲ್ಲುಗಳನ್ನು ಇಟ್ಟು ಮಣ್ಣು ತುಂಬಿ ಭದ್ರಪಡಿಸಿ , ಇನ್ನೊಂದು ಬದಿಗೆ ಹಳೆಯ ತೆಂಗಿನ ಮರದ ಬೊಡ್ಡೆಗಳನ್ನು ಜೋಡಿಸಿ ಪುಟಾಣಿ ಕಟ್ಟ ರೂಪುಗೊಂಡಿತು. ಈ ಕಟ್ಟದ ಮುನ್ನ, ಇನ್ನೊಂದು ಸಣ್ಣ ತಡೆ. ಅಲ್ಲಿಗೂ ತೆಂಗಿನ ಬೊಡ್ಡೆಗಳೇ ಆಧಾರ. ಈ ಪ್ರಯೋಗ ಬಾವಿಯಲ್ಲಿ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಬಹುದೆಂಬ ಆಶಾಭಾವ. ಪಕ್ಕದಲ್ಲಿರುವ ತೋಟಕ್ಕೂ ಪ್ರಯೋಜನ ಆದೀತು ಎಂದು ಹೇಳುತ್ತಾರೆ ಶಿವರಾಂ ಪೈಲೂರು.
ಈ ಮಾದರಿಗೆ ಪ್ರೇರಣೆಯಾದ್ದು ಸದಾ ನೀರೆಚ್ಚರ ಮೂಡಿಸುವುದರ ಜತೆಗೆ ಪ್ರೇರಣೆ ನೀಡುತ್ತಿರುವ ನೀರ ನೆಮ್ಮದಿಯತ್ತ ಪಡ್ರೆ ಎನ್ನುವ ವಾಟ್ಸಪ್ ಗುಂಪು ಎಂದು ಹೇಳಲು ಮರೆಯುವುದಿಲ್ಲ ಶಿವರಾಮ ಪೈಲೂರು ಅವರು. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲಿ ಪುಟಾಣಿ ಕಟ್ಟಗಳ ರಚನೆ ಮಾಡುವ ಮೂಲಕ ಜಲಸಂರಕ್ಷಣೆ, ಹರಿಯುವ ನೀರಿನ ಬಳಕೆ, ಒರತೆ, ಕೊಳವೆಬಾವಿ ನೀರನ್ನು ರಿಸರ್ವ್ ಆಗಿಡುವ ಪ್ರಯತ್ನ ಮಾಡಬಹುದು.
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…
ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…
ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…
ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…
ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…
ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…