ಕೊಳವೆಬಾವಿ ಇದೆ. ನೀರಿನ ಟ್ಯಾಂಕ್ ಇದೆ, ಪೈಪ್ ಲೈನ್ ಇದೆ. ಕುಡಿಯುವ ನೀರು ಮಾತ್ರಾ ಇಲ್ಲ…! . ಇದು ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ಟಿನಡ್ಕದಲ್ಲಿನ ಪರಿಸ್ಥಿತಿ. ಸರಕಾರದ ಯೋಜನೆಗಳೆಲ್ಲಾ ಹೀಗಾದರೆ ಹೇಗೆ ?
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ಅತ್ಯಂತ ಪ್ರತಿಷ್ಟಿತ ಪಂಚಾಯತ್ ಎಂಬ ಹೆಗ್ಗಳಿಕೆ. ಇಲ್ಲಿ ಎಲ್ಲಾ ಪಕ್ಷಗಳಿಂದಲೂ ಪ್ರಮುಖ ನಾಯಕರು ಇದ್ದಾರೆ. ಆದರೆ ಎಲ್ಲಾ ಯೋಜನೆಗಳೂ ಅರ್ಧಕ್ಕೆ ಅರ್ಧವೇ..!. ಮೊನ್ನೆ ಮೊನ್ನೆ ಗುತ್ತಿಗಾರಿನಲ್ಲಿ ಸುದ್ದಿ ಮಾಡಿದ್ದು ಕುಡಿಯುವ ನೀರು. ಗುತ್ತಿಗಾರು ಪೇಟೆಯಲ್ಲಿಯೇ ಕುಡಿಯುವ ನೀರಿಲ್ಲದೆ ಹಲವು ದಿನಗಳಾದರೂ ಯಾವುದೇ ಸ್ಪಂದನ ಇರಲಿಲ್ಲ ಎಂದು ಸಾರ್ವಜನಿಕರು ಹೇಳಿದ್ದರು.
ಇನ್ನೊಂದು ಸುದ್ದಿಯಾದ ಸಂಗತಿ ಎಂದರೆ ಜಿಮ್ ಕೇಂದ್ರ. ಗುತ್ತಿಗಾರಿಗೆ ಜಿಮ್ ಪರಿಕರಗಳು ಲಭ್ಯವಿದ್ದರೂ ಅದು ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗಲಿಲ್ಲ. ಈ ಬಗ್ಗೆಯೂ ಯಾವುದೇ ಸ್ಪಂದನೆ ಇಲ್ಲ.
ಇದೀಗ ಇದೇ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವಿಶ್ವ ಬ್ಯಾಂಕ್ ಯೋಜನೆಯಡೆ ನೀರಿನ ಟ್ಯಾಂಕ್ ನಿರ್ಮಾಣವಾಗಿದೆ. ಕೆಲವು ಸಮಯಗಳವರೆಗೆ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. ಈಚೆಗೆ ಸುಮಾರು ಆರೇಳು ವರ್ಷಗಳಿಂದ ಈ ಟ್ಯಾಂಕ್ ಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಹೀಗಾಗಿ ಮೆಟ್ಟಿನಡ್ಕ ಶಾಲೆ ಹಾಗೂ ಆಸುಪಾಸಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಅಚ್ಚರಿ ಎಂದರೆ ಸುಳ್ಯದ ಶಾಸಕರ ಸಂಬಂಧಿಕರೋರ್ವರಿಗೂ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅವರು ಈ ಬಗ್ಗೆ ಸಮಾಧಾನದಿಂದಲೇ ನೀರು ಹೊತ್ತು ತರುತ್ತಿದ್ದಾರೆ…!. ಈ ಎಲ್ಲಾ ಸಮಸ್ಯೆ ನಿವಾರಣೆಗೆ ನೂತನ ಕೊಳವೆ ಬಾವಿ ಕೂಡಾ ತೆಗೆಯಲಾಗಿದೆ. ಅದಾದ ಬಳಿಕ ಪಂಪ್, ಪೈಪ್ ಅಳವಡಿಕೆಗೆ ಕೂಡಾ ಅನುದಾನ ಇದ್ದರೂ ಟ್ಯಾಂಕ್ ಗೆ ಇನ್ನೂ ನೀರು ಹಾಯಿಸಲು ಸಾಧ್ಯವಾಗಲಿಲ್ಲ. ಈಚೆಗೆ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಗ್ರಾಪಂ ಸದಸ್ಯೆಯೊಬ್ಬರು ಸ್ವತ: ಹಾರೆ ಹಿಡಿದು ಕೆಲಸ ಮಾಡಿದ್ದರು. ಈಗ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…
ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…
ಬ್ರಿಟನ್ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…
ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…