ಮಳೆಯಾರ್ಭಟ ಹೆಚ್ಚಾಗಿದೆ. ಶನಿವಾರ ಮಧ್ಯಾಹ್ನದ ನಂತರ ತಡ ರಾತ್ರಿಯ ತನಕವೂ ವರುಣನ ಭರ್ಜರಿ ಆಟ. ವ್ಯಾಪಕವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ನಿನ್ನೆ ಮುಸ್ಸಂಜೆಯ ಭಾರೀ ಮಳೆಗೆ ಬೆಳ್ಳಾರೆ ಸಮೀಪದ ಪೆರುವಾಜೆಯ ಶ್ರೀ ಜಲದುರ್ಗಾ ದೇವೀ ದೇವಸ್ಥಾನದ ಒಳಾಂಗಣಕ್ಕೆ ಗೌರೀ ಹೊಳೆಯ ಪ್ರವಾಹದ ನೀರು ನುಗ್ಗಿತ್ತು.
ಉಳಿದಂತೆ ಬೆಳ್ತಂಗಡಿ ನಗರದಲ್ಲಿ ಗರಿಷ್ಟ ಮಳೆ 175 ಮಿ ಮೀ. ಬಳ್ಪ 162, ಕಲ್ಮಡ್ಕ 134, ಎಣ್ಮೂರು 115, ಕಲ್ಲಾಜೆ 111, ಕಮಿಲ 110, ಹಾಲೆಮಜಲು 101, ಮೆಟ್ಟಿನಡ್ಕ 97, ಅಯ್ಯನಕಟ್ಟೆ 94, ಬಾಳಿಲ, ಕೋಡಿಂಬಳ-ತೆಕ್ಕಡ್ಕ ತಲಾ 89,
ಹರಿಹರ-ಮಲ್ಲಾರ, ಸುಳ್ಯ ನಗರ, ಎಂ ಚೆಂಬು ತಲಾ 84, ಮುಳ್ಯ-ಅಜ್ಜಾವರ 78, ಮಡಪ್ಪಾಡಿ 74, ಕೊಳ್ತಿಗೆ-ಎಕ್ಕಡ್ಕ 73,
ದೊಡ್ಡತೋಟ 72, ವಾಲ್ತಾಜೆ-ಕಂದ್ರಪ್ಪಾಡಿ 71, ಅಡೆಂಜ-ಉರುವಾಲು 68, ತೊಡಿಕಾನ 66, ಸುಬ್ರಹ್ಮಣ್ಯ 65, ಕೊಲ್ಲಮೊಗ್ರ 60,
ಉಳಿದಂತೆ ಕೆದಿಲ, ಮುಂಡೂರು ತಲಾ 35, ಆರ್ಯಾಪು-ಬಂಗಾರಡ್ಕ 25, ಕೆಲಿಂಜ 23 ಬಲ್ನಾಡು, ಕಡಬ ತಲಾ 15, ಮಂಚಿ 14 ಹಾಗೂ ಕಾಸರಗೋಡಿನ ಕಲ್ಲಕಟ್ಟದಲ್ಲಿ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಇತರೆಡೆಗೆ ಹೋಲಿಸಿದರೆ ನಿನ್ನೆಯೂ ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳಲ್ಲಿ ಮಳೆ ಕಡಿಮೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕಡಬದಲ್ಲಿ ತುಂಬಾ ಕಡಿಮೆ ಮಳೆ 5 ಮಿ.ಮೀ. ಅಷ್ಟೇ ದಾಖಲಾಗಿದೆ.!
ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…
ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…