Advertisement
The Rural Mirror ವಾರದ ವಿಶೇಷ

ವೀಕೆಂಡ್‌ ಚಾರಣ…! | ಒಮ್ಮೆಲೇ ಏಕೆ ಕುಮಾರ ಪರ್ವತ ಚಾರಣಕ್ಕೆ ಬರುತ್ತಿದ್ದಾರೆ…? | ಕಾಡು ಉಳಿಯಲಿ, ಕುಮಾರಪರ್ವತದ ರಕ್ಷಣೆಯ ಅಗತ್ಯವೂ ಇದೆ |

Share

ಕಳೆದ ಎರಡು ವಾರಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ವಿಪರೀತ ಮಂದಿ ಆಗಮಿಸುತ್ತಿದ್ದಾರೆ. ಅಷ್ಟೂ ಜನರೂ ಪರಿಸರ ಪ್ರೇಮಿಗಳೇ…!?. ಟ್ರೆಕಿಂಗ್‌ ಹೆಸರಲ್ಲಿ ಮಜಾ ಮಾಡಲು ಬರುತ್ತಿದ್ದಾರೆಯೇ..? ಇದೆರಡೂ ಪ್ರಶ್ನೆಗಳ ನಡುವೆ ಈಗ ಯಾಕಿಷ್ಟು ಮಂದಿ ಕುಮಾರಪರ್ವತ ಚಾರಣಕ್ಕೆ ಬರುತ್ತಿದ್ದಾರೆ…?ಮುಂದೆ ಓದಿ

ರಾಜ್ಯದ ಬೇರೆ ಬೇರೆ ಕಡೆಯಿಂದ  ಕುಮಾರಪರ್ವತ ಚಾರಣಕ್ಕೆ ಒಮ್ಮೆಲೇ ಹೆಚ್ಚಾಗಿ ಜನರು ಆಗಮಿಸುತ್ತಿದ್ದಾರೆ. ರಜಾ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಕಾಣಸಿಗುತ್ತಾರೆ. ಕಳೆದ ಎರಡು-ಮೂರು ವಾರಗಳಿಂದ ವಿಪರೀತ ಜನಸಂದಣಿಯಲ್ಲಿ ಚಾರಣಿಗರು ಕಾಣುತ್ತಿದ್ದಾರೆ. ಈಗಾಗಲೇ ಅಂತರ್ಜಾಲದ ಮೂಲಕ ಕುಮಾರಪರ್ವತದ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿದೆ. ಹೀಗಾಗಿ ಬಹಳ ಆಸಕ್ತಿಯಿಂದ ಚಾರಣಿಗರು ಬರುತ್ತಿದ್ದಾರೆ.ಮುಂದೆ ಓದಿ

ಕುಮಾರಪರ್ವತ ಚಾರಣ ಮುಂಜಾನೆ

ಈಚೆಗೆ ಗಿರಿಗದ್ದೆಯ ಭಟ್ಟರು ನಿಧನವಾದ ಸಂದರ್ಭ ಕುಮಾರಪರ್ವತ ಹಾಗೂ ಗಿರಿಗದ್ದೆಯ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿತ್ತು. ಅದರ ಜೊತೆಗೇ ಕುಮಾರಪರ್ವತ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಹಿನ್ನೆಲೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸಹಜವಾಗಿಯೇ ಕುಮಾರಪರ್ವತದ ಬಗ್ಗೆ ಕುತೂಹಲ ಹೆಚ್ಚಾಯಿತು. ಕುಮಾರ ಪರ್ವತದಲ್ಲಿ ಪೂಜೆ ನಡೆಯುತ್ತದೆ ಎನ್ನುವುದು  ಸಾಕಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕಳೆದ  ಎರಡು ವರ್ಷಗಳಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ವೈರಲ್‌ ಆಗಿದೆ. ಇದೆಲ್ಲವೂ ಕುಮಾರಪರ್ವತ ಚಾರಣಿಗರ ಸಂಖ್ಯೆ ಏರಿಕೆಗೆ ಕಾರಣವಾಗಿದೆ.ಮುಂದೆ ಓದಿ

ಕಾಡು ದಾರಿಯ ನಡುವಿನ ಪಯಣ ಹಾಗೂ ಸುಂದರ ಪರಿಸರದ ನಡುವಿನ ಪಯಣ ಈ ಚಾರಣ. ಪರ್ವತ ಏರುವ ಮೊದಲೇ ಅರಣ್ಯ ಇಲಾಖೆ ಸಾಕಷ್ಟು ತಪಾಸಣೆ ಮಾಡುತ್ತಿದ್ದರೂ, ಕಾಡು ಹಾದಿಯ ನಡುವೆ ಪ್ಲಾಸ್ಟಿಕ್‌ ಹಾಗೂ ಪರಿಸರ ಕೆಡಿಸುವ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆಲೇ ವಿಪರೀತ ಚಾರಣಿಗರು ತೆರಳಿದರೆ, ಕಾಡಿನ ಒಳಗಿನ ಗಲಾಟೆ, ಬೊಬ್ಬೆಗಳಿಂದ ಕಾಡು ಪ್ರಾಣಿಗಳೂ ಭಯಗೊಂಡು ತೊಂದರೆ ನೀಡುವ ಸಂಭವವೂ ಇದೆ. ಪರಿಸರವೂ ಬೇಗನೆ ಕಲುಷಿತವಾಗುವುದು ಸಾಧ್ಯತೆ ಇದೆ. ಹೀಗಾಗಿ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಾದ್ದು ಅಗತ್ಯ ಇದೆ.

Kumara Parvatha

ಕುಮಾರಪರ್ವತ

More and more people are coming from different parts of the state for the Kumara Parvata trek. A large number of trekkers come even on holidays. For the last two-three weeks, there has been a huge numbers of trekkers. Now environmental protection is a big challenge.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

7 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

7 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago