ಮಹಾರಾಷ್ಟ್ರದಲ್ಲಿ(Maharastra) ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ(Agri Tourism) ಅನ್ನು ಕರ್ನಾಟಕದಲ್ಲಿಯೂ(Karnataka) ಬೆಳೆಸುವ ಇಚ್ಛೆ ಇದೆ. ಕರ್ನಾಟಕದಲ್ಲಿ 108 ರೈತರನ್ನು Agri Tourism, ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಕೃಷಿ ಆಶ್ರಮ) ಸ್ಥಾಪನೆಗೆ ಮುಂದಾಗಲು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ.
ಕೃಷಿ ಆಶ್ರಮ ಎಂದರೇನು? ಅದರ ಸ್ಥಾಪನೆಗೆ ಸಿದ್ಧತೆ ಹೇಗೆ? ತೆರೆಯಲು ಎಷ್ಟು ವೆಚ್ಚ ಬಂದೀತು ? ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯುತ್ತಿರಬೇಕು? ನಿಬಂಧನೆಗಳು ಯಾವುವು? ಯಾವ ಯಾವ ವಸ್ತುಗಳು ಅಲ್ಲಿರಬಾರದು? ಯಾವ ವಸ್ತುಗಳು ಇರಬೇಕು? ಈ ವಿಚಾರಗಳನ್ನು ತಜ್ಞರಿಂದ ತಿಳಿಸಲಾಗುವುದು. ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಯಾವುದಾದರೂ ಒಂದು ಶಿಬಿರದಲ್ಲಿ ತಪ್ಪದೇ ಭಾಗವಹಿಸಿ ಕೃಷಿ ಆಶ್ರಮ ಸ್ಥಾಪಿಸಿದವರಿಗೆ “ಹೆಗ್ಗಳಿಕೆ ಪತ್ರ(Certificate) ಕನ್ನೇರಿ ಶ್ರೀಗಳಿಂದ ದೊರೆಯಲಿದೆ.
ಕೃಷಿ ಆಶ್ರಮ ಬಗೆಗಿನ ಚಿಂತನೆ, ಯೋಚನೆ ಮತ್ತು ಅದರ ಅಳವಡಿಕೆಗಳ ಬಗ್ಗೆ ನಿರಂತರವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಅಮ್ಮನಘಟ್ಟ, ಕಗ್ಗೋಡ, ಬಟ್ಟೆ ಮಲ್ಲಪ್ಪ ಮತ್ತು ಕಪ್ಪತಗುಡ್ಡ ಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಗಾರಗಳನ್ನು ನಡೆಸಲಾಗಿದೆ
ಇದೀಗ ಡಿ.16 ಹಾಗೂ 17 ರಂದು M. V. ಪಾಟೀಲ್ ಫಾರ್ಮ್ ಹೌಸ್, ಗುಡ್ಡದ ಹುಲಿಕಟ್ಟಿ ಬಳಿ ನಡೆಯಲಿದೆ. ಇದು ಕೃಷಿಕರಿಗಾಗಿ/ಕೃಷಿ ಆಸಕ್ತರಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ: 9972700958
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…