ಮಹಾರಾಷ್ಟ್ರದಲ್ಲಿ(Maharastra) ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ(Agri Tourism) ಅನ್ನು ಕರ್ನಾಟಕದಲ್ಲಿಯೂ(Karnataka) ಬೆಳೆಸುವ ಇಚ್ಛೆ ಇದೆ. ಕರ್ನಾಟಕದಲ್ಲಿ 108 ರೈತರನ್ನು Agri Tourism, ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಕೃಷಿ ಆಶ್ರಮ) ಸ್ಥಾಪನೆಗೆ ಮುಂದಾಗಲು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ.
ಕೃಷಿ ಆಶ್ರಮ ಎಂದರೇನು? ಅದರ ಸ್ಥಾಪನೆಗೆ ಸಿದ್ಧತೆ ಹೇಗೆ? ತೆರೆಯಲು ಎಷ್ಟು ವೆಚ್ಚ ಬಂದೀತು ? ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯುತ್ತಿರಬೇಕು? ನಿಬಂಧನೆಗಳು ಯಾವುವು? ಯಾವ ಯಾವ ವಸ್ತುಗಳು ಅಲ್ಲಿರಬಾರದು? ಯಾವ ವಸ್ತುಗಳು ಇರಬೇಕು? ಈ ವಿಚಾರಗಳನ್ನು ತಜ್ಞರಿಂದ ತಿಳಿಸಲಾಗುವುದು. ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಯಾವುದಾದರೂ ಒಂದು ಶಿಬಿರದಲ್ಲಿ ತಪ್ಪದೇ ಭಾಗವಹಿಸಿ ಕೃಷಿ ಆಶ್ರಮ ಸ್ಥಾಪಿಸಿದವರಿಗೆ “ಹೆಗ್ಗಳಿಕೆ ಪತ್ರ(Certificate) ಕನ್ನೇರಿ ಶ್ರೀಗಳಿಂದ ದೊರೆಯಲಿದೆ.
ಕೃಷಿ ಆಶ್ರಮ ಬಗೆಗಿನ ಚಿಂತನೆ, ಯೋಚನೆ ಮತ್ತು ಅದರ ಅಳವಡಿಕೆಗಳ ಬಗ್ಗೆ ನಿರಂತರವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಅಮ್ಮನಘಟ್ಟ, ಕಗ್ಗೋಡ, ಬಟ್ಟೆ ಮಲ್ಲಪ್ಪ ಮತ್ತು ಕಪ್ಪತಗುಡ್ಡ ಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಗಾರಗಳನ್ನು ನಡೆಸಲಾಗಿದೆ
ಇದೀಗ ಡಿ.16 ಹಾಗೂ 17 ರಂದು M. V. ಪಾಟೀಲ್ ಫಾರ್ಮ್ ಹೌಸ್, ಗುಡ್ಡದ ಹುಲಿಕಟ್ಟಿ ಬಳಿ ನಡೆಯಲಿದೆ. ಇದು ಕೃಷಿಕರಿಗಾಗಿ/ಕೃಷಿ ಆಸಕ್ತರಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ: 9972700958
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…