Advertisement
MIRROR FOCUS

ವಯನಾಡ್‌ನಲ್ಲಿ ಮುಖವನ್ನು ವಸ್ತ್ರದಿಂದ ಮರೆಮಾಚಿ ಕಾರ್ಯಚರಿಸಿದ ಆ ವ್ಯಕ್ತಿ ಯಾರು..?

Share

ಪ್ರಾಕೃತಿಕ ವಿಕೋಪ ಸಂಭವಿಸಿದ ವಯನಾಡ್‌ನಲ್ಲಿ ಭಾರತೀಯ ಸೈನಿಕರು ತಮ್ಮ ಕಾರ್ಯಾಚರಣೆ ನಡೆಸಿ‌  ಮರಳಿದೆ,‌ ದೇಶದ ವಿವಿಧ ಭಾಗಗಳಿಂದ ಬಂದಂತಹ ಹಲವಾರು ಮಂದಿ ಆ ತಂಡದಲ್ಲಿದ್ದರು. ಆದರೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವ್ಯಕ್ತಿಯೋರ್ವರ ಮುಖವು ಮಾಸ್ಕ್‌ನಂತಹ ವಸ್ತ್ರದಿಂದ ಸದಾ ಮರೆಮಾಚಲಾಗಿತ್ತು.. ಆ ಮುಖ ಮರೆಮಾಚಿದ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ.

ಮೂಲತ ಕೇರಳದ ಆಲಪುಳ ನಿವಾಸಿ ಲೆಫ್ಟಿನೆಂಟ್ ಕರ್ನಲ್ ಋಷಿ ರಾಜಲಕ್ಷ್ಮಿ. ಮಾರ್ಚ್ 4, 2017 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದರು. ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡು 23 ಶಸ್ತ್ರಚಿಕಿತ್ಸೆ‌ಗೆ ಒಳಪಟ್ಟು ಮುಖದ ರೂಪವನ್ನೇ ಕಳೆದುಕೊಂಡ ಕಾರಣ ಸದಾ ಮುಖ ಮರೆಮಾಚಿ ಆಗಿದೆ ಇವರ ಜೀವನ. ಎಂಜಿನಿಯರಿಂಗ್ ಪದವಿ ಪಡೆದಿದ್ದ ಇವರು ತಮ್ಮ ವೃತ್ತಿ ಜೀವನ ಶುರುಮಾಡಿದ್ದು ಕೇರಳ ವಿದ್ಯುತ್ ಇಲಾಖೆಯಲ್ಲಿ, ನಂತರ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗ ಪಡೆದ ಇವರು ತಮ್ಮ ಸೈನಿಕನಾಗಬೇಕು ಎಂಬ ಕನಸಿನೊಂದಿದೆ ಭಾರತೀಯ ಸೇನೆಗೆ ಪ್ರವೇಶಿಸಿದ್ದರು.

ಋಷಿ ರಾಜಲಕ್ಷ್ಮಿ ಅವರ ಪತ್ನಿ ಕ್ಯಾಪ್ಟನ್ ಅನುಪಮಾ ಆರ್ಮಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದರು, ತಂದೆ ತಾಯಿ ಮತ್ತು ಪತ್ನಿಯ ಅತೀವ ಕಾಳಜಿಯಿಂದ ಚಿಕಿತ್ಸೆ ಪಡೆದ ಋಷಿ ಗಾಯಗಳಿಂದ ಬದುಕುಳಿದಿದ್ದರೂ ಅವರ ಮುಖ ಅವರಿಗೆ ನಷ್ಟವಾಗಿತ್ತು, ಅಂದಿನಿಂದ ಋಷಿ ಸದಾ ಮುಖಕವಚ ಧರಿಸಿ ದೇಶ ಸೇವೆಯಲ್ಲಿ ನಿರತರಾಗಿದ್ದರು. ತನ್ನ ದೇಶದ ನಾಗರಿಕರಿಗೆ  ಭಯೋತ್ಪಾದಕರಿಂದ ಮಾತ್ರವಲ್ಲದೆ ಪ್ರಕೃತಿ ವಿಕೋಪದಂತಹ ದುರಂತದಿಂದಲೂ ರಕ್ಷಣೆ ನೀಡುವುದೂ ಜವಾಬ್ದಾರಿ ಆಗಿದೆ ಎಂಬ ಸೇನೆಗೆ ಜನರ ಮೇಲಿರುವ ಬದ್ಧತೆಯು ಕರ್ನಲ್ ಋಷಿ ರಾಜಲಕ್ಷ್ಮಿ ಅವರನ್ನು ವಯನಾಡ್‌ ದುರಂತ ಭೂಮಿಗೆ ತಲುಪಿಸಿದ್ದು, ಇದು ತನ್ನ ರಾಜ್ಯ ಕಂಡ ದುರಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ ಜನರ ಪ್ರೀತಿಯನ್ನು ಎದೆಯಲ್ಲಿರಿಸಿ ಋಷಿ ರಾಜಲಕ್ಷ್ಮಿ, ಮತ್ತು ಭಾರತೀಯ ಸೈನಿಕರು ವಯನಾಡಿನಿಂದ ಮರಳಿದ್ದಾರೆ.

Source : keralakaumudi

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…

1 hour ago

ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!

ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…

2 hours ago

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

9 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

9 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

1 day ago