Advertisement
Opinion

#Opinion | ನಾನೇಕೆ ಕೃಷಿಕ….? | ಕೃಷಿಕ ರಮೇಶ ದೇಲಂಪಾಡಿ ಹೇಳುತ್ತಾರೆ…. |

Share

ಹುಟ್ಟಿದ್ದು ಕೃಷಿ ಕುಟುಂಬದಲ್ಲಿ.ಕೃಷಿ ಹೊರತಾಗಿ ಇತರ ಆದಾಯ ಇಲ್ಲದ ಮನೆ.1960ರ ಉತ್ತರಾರ್ಧದ ದಶಕದಲ್ಲಿ ನನ್ನ ಜನ್ಮ.ಈ ಕಾಲಘಟ್ಟದಲ್ಲಿ ಮತ್ತು ಮುಂದಕ್ಕೆ 1990ರ ದಶಕದ ತನಕವೂ ಕೃಷಿ ಆದಾಯದ ಮುಂದೆ ಇತರ ಉದ್ಯೋಗಗಳಿಂದ ಸಿಗುವ ಸಾಮಾನ್ಯ ಆದಾಯ ಕಡಿಮೆ ಇದ್ದ ಕಾಲಘಟ್ಟ.

ಹಾಗಾಗಿ ಏನೇ ವಿದ್ಯಾಭ್ಯಾಸ ಇದ್ದರೂ ಕೊನೆಗೆ ಜೀವನ ಕೃಷಿಯಲ್ಲೇ ಅಂತ ಹೆತ್ತವರ ನಿರ್ಧಾರ.ಅದಕ್ಕೆ ಪೂರಕವಾಗಿ ನನ್ನ ಮನಸ್ಥಿತಿಯೂ ಹೊಂದಿಕೊಂಡಿತ್ತು. ನನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದದ್ದು 1987ನೇ ಇಸವಿಯಲ್ಲಿ. ಅಂದಿನಿಂದ ಕೃಷಿಯೇ ನನ್ನ ಉದ್ಯೋಗ.

ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ಆದಾಯ ಕೊಡುತ್ತದೆ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಕನಿಷ್ಟ ಶ್ರಮದಾಯಕ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ನೆಮ್ಮದಿ ಕೊಡುವಂತಹದ್ದು ಅಂತ.
ಹೌದು ,ನನ್ನ ಆದಾಯ ಸಂಪೂರ್ಣವಾಗಿ ಕೃಷಿ ಕ್ಷೇತ್ರದಿಂದಲೇ.ನನ್ನ ಎಲ್ಲಾ ಆಸೆ,ಬಯಕೆಗಳನ್ಬೂ ಪೂರೈಸಿಕೊಳ್ಳಲು ಪ್ರಯತ್ನಿಸ ಬೇಕಾದ್ದೂ ಇದೇ ಕೃಷಿ ಕ್ಷೇತ್ರದ ಆದಾಯದಿಂದಲೇ.ಇದಕ್ಕಾಗಿ ಕೃಷಿಯಿಂದ ನನಗೆ ಹಣ ಬೇಕು,ಮತ್ತಷ್ಟು ಬೇಕು.
ನನಗೂ ಆಸೆಗಳಿವೆ.ಸ್ವಂತಕ್ಕೊಂದು ನನ್ನದೇ ಆದ , ನನ್ನ ಸೈಟಿನ ಮನೆ ಇರಬೇಕು.ಕನಿಷ್ಟ ಇನ್ನೋವಾ ಲಕ್ಷುರಿ ಕಾರು ಕೊಂಡು ಕೊಳ್ಳಲು ಸಾಧ್ಯವಾಗಬೇಕು.

ಆಗಿಲ್ಲ ಇನ್ನೂ,ಪೂರೈಸಿಲ್ಲ ಇನ್ನೂ.ಅಷ್ಟೊಂದು ಹಣ ನನಗಿನ್ನೂ ಕೃಷಿಯಿಂದ ದೊರಕಿಲ್ಲ. ಅಷ್ಟು ಸಾಕಾ? ಖಂಡಿತಾ ಸಾಲದು.ಸಾಧ್ಯ ಆದರೆ ಸ್ವಂತಕ್ಕೊಂದು ಹೆಲಿಕಾಪ್ಟರ್ ಖರೀದಿಸ ಬೇಕು.ಖಾಸಾಗಿ ಜೆಟ್ ವಿಮಾನ ಇಟ್ಟುಕೊಳ್ಳ ಬೇಕು.ಆಸೆ ತಪ್ಪಾ?

‌ನನ್ನ ಉತ್ಪನ್ನಗಳನ್ಬು ನಾನು ಮುಕ್ತ ಮಾರುಕಟ್ಟೆ ಬೆಲೆಯಲ್ಲಷ್ಟೇ ಮಾರಬೇಕಾದ ಅನಿವಾರ್ಯತೆ ನನಗಿದೆ.ನನ್ನ ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು ದರ ಕೊಟ್ಟು ಖರೀದಿಸುವ ಗಿರಾಕಿಗಳು ನನಗಿಲ್ಲ. ಅದೆಲ್ಲ ಪೂರೈಸಿದ ಬಳಿಕ ಇನ್ನುಳಿದ ವಿಷಯಗಳತ್ತ ಗಮನ ಕೊಡೋಣ.ಅಲ್ಲಿ ತನಕ ನನ್ನ ನೀತಿಗಳಲ್ಲಿ‌ ಯಾವ ಬದಲಾವಣೆಯೂ ಇಲ್ಲ.

ಬರಹ :
ರಮೇಶ್‌ ದೇಲಂಪಾಡಿ
ರಮೇಶ್‌ ದೇಲಂಪಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

17 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

24 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

1 day ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

2 days ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago