Advertisement
Opinion

#Opinion | ನಾನೇಕೆ ಕೃಷಿಕ….? | ಕೃಷಿಕ ರಮೇಶ ದೇಲಂಪಾಡಿ ಹೇಳುತ್ತಾರೆ…. |

Share

ಹುಟ್ಟಿದ್ದು ಕೃಷಿ ಕುಟುಂಬದಲ್ಲಿ.ಕೃಷಿ ಹೊರತಾಗಿ ಇತರ ಆದಾಯ ಇಲ್ಲದ ಮನೆ.1960ರ ಉತ್ತರಾರ್ಧದ ದಶಕದಲ್ಲಿ ನನ್ನ ಜನ್ಮ.ಈ ಕಾಲಘಟ್ಟದಲ್ಲಿ ಮತ್ತು ಮುಂದಕ್ಕೆ 1990ರ ದಶಕದ ತನಕವೂ ಕೃಷಿ ಆದಾಯದ ಮುಂದೆ ಇತರ ಉದ್ಯೋಗಗಳಿಂದ ಸಿಗುವ ಸಾಮಾನ್ಯ ಆದಾಯ ಕಡಿಮೆ ಇದ್ದ ಕಾಲಘಟ್ಟ.

ಹಾಗಾಗಿ ಏನೇ ವಿದ್ಯಾಭ್ಯಾಸ ಇದ್ದರೂ ಕೊನೆಗೆ ಜೀವನ ಕೃಷಿಯಲ್ಲೇ ಅಂತ ಹೆತ್ತವರ ನಿರ್ಧಾರ.ಅದಕ್ಕೆ ಪೂರಕವಾಗಿ ನನ್ನ ಮನಸ್ಥಿತಿಯೂ ಹೊಂದಿಕೊಂಡಿತ್ತು. ನನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದದ್ದು 1987ನೇ ಇಸವಿಯಲ್ಲಿ. ಅಂದಿನಿಂದ ಕೃಷಿಯೇ ನನ್ನ ಉದ್ಯೋಗ.

ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ಆದಾಯ ಕೊಡುತ್ತದೆ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಕನಿಷ್ಟ ಶ್ರಮದಾಯಕ ಅಂತ.ಕೃಷಿ ಉದ್ಯೋಗ ಇತರೆಲ್ಲ ಉದ್ಯೋಗಗಳಿಂದ ಹೆಚ್ಚು ನೆಮ್ಮದಿ ಕೊಡುವಂತಹದ್ದು ಅಂತ.
ಹೌದು ,ನನ್ನ ಆದಾಯ ಸಂಪೂರ್ಣವಾಗಿ ಕೃಷಿ ಕ್ಷೇತ್ರದಿಂದಲೇ.ನನ್ನ ಎಲ್ಲಾ ಆಸೆ,ಬಯಕೆಗಳನ್ಬೂ ಪೂರೈಸಿಕೊಳ್ಳಲು ಪ್ರಯತ್ನಿಸ ಬೇಕಾದ್ದೂ ಇದೇ ಕೃಷಿ ಕ್ಷೇತ್ರದ ಆದಾಯದಿಂದಲೇ.ಇದಕ್ಕಾಗಿ ಕೃಷಿಯಿಂದ ನನಗೆ ಹಣ ಬೇಕು,ಮತ್ತಷ್ಟು ಬೇಕು.
ನನಗೂ ಆಸೆಗಳಿವೆ.ಸ್ವಂತಕ್ಕೊಂದು ನನ್ನದೇ ಆದ , ನನ್ನ ಸೈಟಿನ ಮನೆ ಇರಬೇಕು.ಕನಿಷ್ಟ ಇನ್ನೋವಾ ಲಕ್ಷುರಿ ಕಾರು ಕೊಂಡು ಕೊಳ್ಳಲು ಸಾಧ್ಯವಾಗಬೇಕು.

ಆಗಿಲ್ಲ ಇನ್ನೂ,ಪೂರೈಸಿಲ್ಲ ಇನ್ನೂ.ಅಷ್ಟೊಂದು ಹಣ ನನಗಿನ್ನೂ ಕೃಷಿಯಿಂದ ದೊರಕಿಲ್ಲ. ಅಷ್ಟು ಸಾಕಾ? ಖಂಡಿತಾ ಸಾಲದು.ಸಾಧ್ಯ ಆದರೆ ಸ್ವಂತಕ್ಕೊಂದು ಹೆಲಿಕಾಪ್ಟರ್ ಖರೀದಿಸ ಬೇಕು.ಖಾಸಾಗಿ ಜೆಟ್ ವಿಮಾನ ಇಟ್ಟುಕೊಳ್ಳ ಬೇಕು.ಆಸೆ ತಪ್ಪಾ?

‌ನನ್ನ ಉತ್ಪನ್ನಗಳನ್ಬು ನಾನು ಮುಕ್ತ ಮಾರುಕಟ್ಟೆ ಬೆಲೆಯಲ್ಲಷ್ಟೇ ಮಾರಬೇಕಾದ ಅನಿವಾರ್ಯತೆ ನನಗಿದೆ.ನನ್ನ ಉತ್ಪನ್ನಗಳನ್ನು ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು ದರ ಕೊಟ್ಟು ಖರೀದಿಸುವ ಗಿರಾಕಿಗಳು ನನಗಿಲ್ಲ. ಅದೆಲ್ಲ ಪೂರೈಸಿದ ಬಳಿಕ ಇನ್ನುಳಿದ ವಿಷಯಗಳತ್ತ ಗಮನ ಕೊಡೋಣ.ಅಲ್ಲಿ ತನಕ ನನ್ನ ನೀತಿಗಳಲ್ಲಿ‌ ಯಾವ ಬದಲಾವಣೆಯೂ ಇಲ್ಲ.

ಬರಹ :
ರಮೇಶ್‌ ದೇಲಂಪಾಡಿ
ರಮೇಶ್‌ ದೇಲಂಪಾಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

1 day ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

1 day ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

1 day ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago