ಪೂರ್ಣ ಚಂದಿರ ಗಗನದಲಿ….

January 30, 2020
7:38 AM
ಕೈಗೆಟುಕದ ಗಗನದಲಿ
ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ
ಸುತ್ತಲೂ ಪುಟಾಣಿ ಮುತ್ತುಗಳು
ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ
ಮನದಿ ನೂರಾರು ಬಯಕೆಗಳು
ಸುಂದರ ಕನವರಿಕೆಗಳು
ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು
ಬೆಳ್ಳಿಯ ಬಟ್ಟಲೊಳಗೆ ತುಂಬಿಕೊಳ್ಳಬೇಕು
ಇಲ್ಲ! ಅದು ಬೆಳ್ಳಿಯ ಬಟ್ಟಲಲ್ಲ
ಆಗಸದರಮನೆಯ ರಾಜ
 ಬೆಳದಿಂಗಳ ಸೂಸುವ ಶ್ವೇತದೊಡೆಯ
ಅವನು ಪೂರ್ಣ ಚಂದಿರ
ಅವನ ಸುತ್ತಲೂ ಮುತ್ತುಗಳಿಲ್ಲ
ಚಂದಿರನ ಚಂದಕ್ಕೆ
ಮನಸೋತ ಚುಕ್ಕಿ ತಾರೆಗಳು
ಈ ನೋಟವೇ ವಿಹಂಗಮ
ಸುಂದರ ಶಶಿಯ, ಸೌಂದರ್ಯದ ಮೆರುಗಿಗೆ
ಸೋತಿದೆ ನನ್ನ ಮನ
ತಿಳಿಯಾದ ಮುಗಿಲು,ಹೊಳೆವ ಚಂದಿರ
ತಂಪನೆಯ ಗಾಳಿ,ನಾನು ಕಳೆದುಹೋಗಿದ್ದೇನೆ
ಕಾಲಕಳೆದು , ಅವನು ಮರೆಯಾದಾಗ‌
ಮನದಿ ಅತೀವ ಸಂಕಟ
ಮತ್ತೆ ಕಾಯುತ್ತಿರುತ್ತೇನೆ , ಸೌಂದರ್ಯದ ಗಣಿಗಾಗಿ…
ಪೂರ್ಣ ಚಂದಿರನ ಬರುವಿಕೆಗಾಗಿ..
      * ಅಪೂರ್ವ ಕೊಲ್ಯ
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror