ಸಂಬಂಧ

September 2, 2019
1:00 PM
ಒಣಗಿ ಹೋದ ಮರದ ಮೇಲೆ
ಕುಳಿತ ಪಕ್ಷಿಗೆ ಕಾಡುತ್ತಿದೆ ಚಿಂತೆ
ವಸಂತ ಮಾಸದಲ್ಲೂ ಮರದಲ್ಲಿ
ಚಿಗುರಿಲ್ಲವೆಂದು…
ಅದು ಬಯಸುತ್ತಿದೆ
ಹೂವಿನ ಘಮ,ಹಣ್ಣಿನ ಸ್ವಾದ
ಮತ್ತೆ ಬೇಕೆಂದು
ಅತ್ತು ಕರೆಯುತ್ತಿದೆ ಮಳೆರಾಯನ
ಬಂದು ಚಿಗುರಿಸಬಾರದೇ ಮರವನ್ನ?
ಆದರೆ ಪಕ್ಷಿಗೇನು ಗೊತ್ತು?
ಮರ ಸಾಯಲೆಂದು
ಬೇರಿಗೆ ವಿಷವುಣಿಸಿದ ಮನುಜನ ಮರ್ಮ!
ನೆರಳನುಣಿಸಿದ ಮರಕ್ಕೂ
ಗೊತ್ತಿಲ್ಲ ತಾನುಂಡಿದ್ದು ವಿಷವೆಂದು
ಸತ್ತ ಮರವೂ ಕಣ್ಣೀರಿಡುತ್ತಿದೆ
ಬಾರದ ಮಳೆಯ ಶಪಿಸುತ್ತಿದೆ
ಮರದ ಆಶ್ರಯ ಮರೆಯದ
ಪಕ್ಷಿ ಮತ್ತೆ ಹಾಡಲಾರಂಭಿಸಿದೆ
ಮರದ ನೋವ ಮರೆಸಲೆಂದು
ಎಂದೆಂದೂ ಜೊತೆ ನಾನಿರುವೆನೆಂದು…!
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror