Advertisement
ಅನುಕ್ರಮ

ಸಹಕಾರಿ ಸಪ್ತಾಹ : ಸಹಕಾರಿ ಕ್ಷೇತ್ರದ ಅರಿವು : ಭಾಗ-2

Share

ಸಂಸ್ಥೆಯಲ್ಲಿರುವ ಸಾಲ, ಠೇವಣಾತಿ ಚಟುವಟಿಕೆಗಳಿಲ್ಲದೇ ಇನ್ನಿತರ ಎಲ್ಲಾ ವ್ಯವಹಾರಗಳಲ್ಲಿ ಸದಸ್ಯ ತೊಡಗಿಸಿಕೊಳ್ಳುವುದು ಆತನ ಬದ್ಧತೆ.

ಕೆಲವೊಂದು ಸದಸ್ಯರಿಗೆ ಸಂಘದ ಚೌಕಟ್ಟಿನ ಬಗ್ಗೆ ಪರಿಚಯವಾಗಲಿ, ಮಹಾಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಆಗಲಿ ತಿಳುವಳಿಕೆ ಇರುವುದಿಲ್ಲ. ಸಂಘದ ಬೈಲಾಗಳನ್ನು ಸದಸ್ಯರಿಗೆ ಪಡಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ಪಡೆದು ಅಧ್ಯಯನ ನಡೆಸಬೇಕು. ಹಲವು ವಿಷಯಗಳು ಬೈಲಾ ಅಧ್ಯಯನದಿಂದ ಮನನವಾಗುತ್ತದೆ. ಅವಶ್ಯಕ
ಎಂದು ಕಂಡುಬಂದಲ್ಲಿ ಸಹಕಾರಿ ತಜ್ಞರ ಮೂಲಕ ಬೈಲಾ ಬಗ್ಗೆ ಆಗಲೀ ಸಹಕಾರಿ ಕಾನೂನು, ನಿಯಮ ಬಗ್ಗೆಯಾಗಲೀ ಸದಸ್ಯರು ಚರ್ಚಿಸುವ ರೂಢಿ ರೂಪಿಸಿಕೊಳ್ಳಬೇಕು.
ಸಹಕಾರಿ ಸಂಘಗಳ ಕಾಯ್ದೆ, ನಿಯಮ, ಉಪವಿಧಿಗಳಿಗೊಳಪಟ್ಟು ಸಂಘದಲ್ಲಿ ಅಂತಿಮ ಅಧಿಕಾರವು ಸರ್ವ ಸದಸ್ಯರದ್ದಾಗಿರುತ್ತದೆ. ಕಾಯ್ದೆಯಲ್ಲಿ ತಿಳಿಸಿದಂತೆ ಸದಸ್ಯರ ಮಹಾಸಭೆಯನ್ನು ಜರಗಿಸುವ ಪ್ರಕ್ರಿಯೆಗಳು ಈ ರೀತಿ ಇರುತ್ತದೆ.

ಸರ್ವ ಸದಸ್ಯರ ಸಭೆ (ಮಹಾಸಭೆ)ಯನ್ನು ವರ್ಷಾಂತ್ಯವಾಗಿ (ಮಾರ್ಚ್ 31) ಆರು ತಿಂಗಳೊಳಗೆ (ಸೆಪ್ಟೆಂಬರ್ 25ರೊಳಗೆ) ಕಡ್ಡಾಯವಾಗಿ ಜರಗಿಸತಕ್ಕದ್ದು.
ವರ್ಷಾಂತ್ಯದ ಬಳಿಕ ಮೇ ಅಂತ್ಯದೊಳಗೆ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸಿ ನಿರ್ಣಯಪಡಿಸಿದ ಲೆಕ್ಕ ಪರಿಶೋಧಕರಿಗೆ ಪರಿಶೋಧನೆಗಾಗಿ ಒಪ್ಪಿಸತಕ್ಕದ್ದು, ಲೆಕ್ಕ ಪರಿಶೋಧಕರು ಪರಿಶೋಧನೆ ನಡೆಸಿ ತಮ್ಮ ಅಂತಿಮ ವರದಿಯನ್ನು ಅಗೋಸ್ತು ಅಂತ್ಯದೊಳಗೆ ಸಂಘಕ್ಕೆ ಸಲ್ಲಿಸತಕ್ಕದ್ದು, ಪರಿಶೋಧಿತ ಲೆಕ್ಕ ಪತ್ರಗಳು ಕೂಡಾ ವಾರ್ಷಿಕ
ಮಹಾಸಭೆಯ ಕಾರ್ಯಸೂಚಿಯ ಭಾಗವಾಗಿರುತ್ತದೆ. ಆಡಳಿತ ಮಂಡಳಿಯು ವಾರ್ಷಿಕ ಮಹಾಸಭೆ ಜರುಗಿಸಲು ಅವಕಾಶವಿರುವ ಅಂತಿಮ ದಿನಾಂಕಕ್ಕೆ 3 ತಿಂಗಳ ಮುಂಚಿತವಾಗಿ ಮಹಾಸಭೆ ಜರುಗಿಸುವ ದಿನಾಂಕವನ್ನು ನಿರ್ಣಯಿಸಬೇಕು. ವಾರ್ಷಿಕ ಮಹಾಸಭೆಯಲ್ಲಿ ಕಾಯ್ದೆ ಕಲಂ 27ರಲ್ಲಿ ಹೇಳಿದ ಕಾರ್ಯಸೂಚಿಗಳನ್ನು ಚರ್ಚಿಸಿ, ವಿಮರ್ಶಿಸಿ ನಿರ್ಣಯ ಕೈಗೊಳ್ಳುವುದು.

ಒಂದು ಸಹಕಾರಿ ಸಂಘದಲ್ಲಿ ವಾರ್ಷಿಕ ಮಹಾಸಭೆಯು ಮಹತ್ವಪೂರ್ಣ ಅಂತಿಮ ಅಧಿಕಾರ ಹೊಂದಿರುವ ಸಭೆಯಾಗಿರುವುದರಿಂದ ಸದಸ್ಯರು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘದ ವ್ಯವಹಾರದ ಆಗು ಹೋಗುಗಳನ್ನು ಮನನ ಮಾಡಿಕೊಳ್ಳುವ ಅನಿವಾರ್ಯತೆ ಸಂಘದ ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದ ತೀರಾ ಅಗತ್ಯವಿದೆ. ಸಾಮಾನ್ಯವಾಗಿ
ಸೆಪ್ಟೆಂಬರ ತಿಂಗಳು ಸಹಕಾರಿ ಸಂಘಗಳ ಮಹಾಸಭೆಯ ದಿನಗಳು, ಸಾಮಾನ್ಯ ಸದಸ್ಯರು ಸಂಘದಿಂದ ದೊರೆಯುವ ಸಾಲ ಸೌಲಭ್ಯಗಳ ಕಡೆ ಮಾತ್ರ ಗಮನ ಹರಿಸುತ್ತಾರೆ ಹೊರತು ಮಹಾಸಭೆಯ ಮಹತ್ವ ಅದರಲ್ಲಿ ಚರ್ಚಿಸುವ, ಪಾಲ್ಗೊಳ್ಳುವ ಅಗತ್ಯತೆಯ ಅರಿವು ಹೊಂದಿರುವುದಿಲ್ಲ.

(…. ಮುಂದುವರಿಯುತ್ತದೆ…)

ಭಾಗ-1 : https://theruralmirror.com/?p=15514

ಬರಹ :

ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಸಂಕಷ್ಟ ಎಂದರೆ ರೈತನ ಸಾಲ ಮಾತ್ರವಲ್ಲ – ಕೃಷಿ ಕಾರ್ಮಿಕರ ರಕ್ಷಣೆಯೂ ಅಗತ್ಯ

2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…

2 hours ago

ಹಂತ ಹಂತವಾಗಿ 16 ಸಾವಿರ ಶಿಕ್ಷಕರ ನೇಮಕ – ಅನುದಾನಿತ ಶಾಲೆಗಳಿಗೂ 6 ಸಾವಿರ ಹುದ್ದೆ – ಸಚಿವ ಮಧು ಬಂಗಾರಪ್ಪ

ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…

2 hours ago

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

20 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

1 day ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

1 day ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

2 days ago