Advertisement
ಅನುಕ್ರಮ

ಸಹಕಾರಿ ಸಪ್ತಾಹ : ಸಹಕಾರಿ ಕ್ಷೇತ್ರದ ಅರಿವು : ಭಾಗ-2

Share

ಸಂಸ್ಥೆಯಲ್ಲಿರುವ ಸಾಲ, ಠೇವಣಾತಿ ಚಟುವಟಿಕೆಗಳಿಲ್ಲದೇ ಇನ್ನಿತರ ಎಲ್ಲಾ ವ್ಯವಹಾರಗಳಲ್ಲಿ ಸದಸ್ಯ ತೊಡಗಿಸಿಕೊಳ್ಳುವುದು ಆತನ ಬದ್ಧತೆ.

ಕೆಲವೊಂದು ಸದಸ್ಯರಿಗೆ ಸಂಘದ ಚೌಕಟ್ಟಿನ ಬಗ್ಗೆ ಪರಿಚಯವಾಗಲಿ, ಮಹಾಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಆಗಲಿ ತಿಳುವಳಿಕೆ ಇರುವುದಿಲ್ಲ. ಸಂಘದ ಬೈಲಾಗಳನ್ನು ಸದಸ್ಯರಿಗೆ ಪಡಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಅದನ್ನು ಪಡೆದು ಅಧ್ಯಯನ ನಡೆಸಬೇಕು. ಹಲವು ವಿಷಯಗಳು ಬೈಲಾ ಅಧ್ಯಯನದಿಂದ ಮನನವಾಗುತ್ತದೆ. ಅವಶ್ಯಕ
ಎಂದು ಕಂಡುಬಂದಲ್ಲಿ ಸಹಕಾರಿ ತಜ್ಞರ ಮೂಲಕ ಬೈಲಾ ಬಗ್ಗೆ ಆಗಲೀ ಸಹಕಾರಿ ಕಾನೂನು, ನಿಯಮ ಬಗ್ಗೆಯಾಗಲೀ ಸದಸ್ಯರು ಚರ್ಚಿಸುವ ರೂಢಿ ರೂಪಿಸಿಕೊಳ್ಳಬೇಕು.
ಸಹಕಾರಿ ಸಂಘಗಳ ಕಾಯ್ದೆ, ನಿಯಮ, ಉಪವಿಧಿಗಳಿಗೊಳಪಟ್ಟು ಸಂಘದಲ್ಲಿ ಅಂತಿಮ ಅಧಿಕಾರವು ಸರ್ವ ಸದಸ್ಯರದ್ದಾಗಿರುತ್ತದೆ. ಕಾಯ್ದೆಯಲ್ಲಿ ತಿಳಿಸಿದಂತೆ ಸದಸ್ಯರ ಮಹಾಸಭೆಯನ್ನು ಜರಗಿಸುವ ಪ್ರಕ್ರಿಯೆಗಳು ಈ ರೀತಿ ಇರುತ್ತದೆ.

ಸರ್ವ ಸದಸ್ಯರ ಸಭೆ (ಮಹಾಸಭೆ)ಯನ್ನು ವರ್ಷಾಂತ್ಯವಾಗಿ (ಮಾರ್ಚ್ 31) ಆರು ತಿಂಗಳೊಳಗೆ (ಸೆಪ್ಟೆಂಬರ್ 25ರೊಳಗೆ) ಕಡ್ಡಾಯವಾಗಿ ಜರಗಿಸತಕ್ಕದ್ದು.
ವರ್ಷಾಂತ್ಯದ ಬಳಿಕ ಮೇ ಅಂತ್ಯದೊಳಗೆ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಅಂತಿಮಗೊಳಿಸಿ ನಿರ್ಣಯಪಡಿಸಿದ ಲೆಕ್ಕ ಪರಿಶೋಧಕರಿಗೆ ಪರಿಶೋಧನೆಗಾಗಿ ಒಪ್ಪಿಸತಕ್ಕದ್ದು, ಲೆಕ್ಕ ಪರಿಶೋಧಕರು ಪರಿಶೋಧನೆ ನಡೆಸಿ ತಮ್ಮ ಅಂತಿಮ ವರದಿಯನ್ನು ಅಗೋಸ್ತು ಅಂತ್ಯದೊಳಗೆ ಸಂಘಕ್ಕೆ ಸಲ್ಲಿಸತಕ್ಕದ್ದು, ಪರಿಶೋಧಿತ ಲೆಕ್ಕ ಪತ್ರಗಳು ಕೂಡಾ ವಾರ್ಷಿಕ
ಮಹಾಸಭೆಯ ಕಾರ್ಯಸೂಚಿಯ ಭಾಗವಾಗಿರುತ್ತದೆ. ಆಡಳಿತ ಮಂಡಳಿಯು ವಾರ್ಷಿಕ ಮಹಾಸಭೆ ಜರುಗಿಸಲು ಅವಕಾಶವಿರುವ ಅಂತಿಮ ದಿನಾಂಕಕ್ಕೆ 3 ತಿಂಗಳ ಮುಂಚಿತವಾಗಿ ಮಹಾಸಭೆ ಜರುಗಿಸುವ ದಿನಾಂಕವನ್ನು ನಿರ್ಣಯಿಸಬೇಕು. ವಾರ್ಷಿಕ ಮಹಾಸಭೆಯಲ್ಲಿ ಕಾಯ್ದೆ ಕಲಂ 27ರಲ್ಲಿ ಹೇಳಿದ ಕಾರ್ಯಸೂಚಿಗಳನ್ನು ಚರ್ಚಿಸಿ, ವಿಮರ್ಶಿಸಿ ನಿರ್ಣಯ ಕೈಗೊಳ್ಳುವುದು.

ಒಂದು ಸಹಕಾರಿ ಸಂಘದಲ್ಲಿ ವಾರ್ಷಿಕ ಮಹಾಸಭೆಯು ಮಹತ್ವಪೂರ್ಣ ಅಂತಿಮ ಅಧಿಕಾರ ಹೊಂದಿರುವ ಸಭೆಯಾಗಿರುವುದರಿಂದ ಸದಸ್ಯರು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘದ ವ್ಯವಹಾರದ ಆಗು ಹೋಗುಗಳನ್ನು ಮನನ ಮಾಡಿಕೊಳ್ಳುವ ಅನಿವಾರ್ಯತೆ ಸಂಘದ ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದ ತೀರಾ ಅಗತ್ಯವಿದೆ. ಸಾಮಾನ್ಯವಾಗಿ
ಸೆಪ್ಟೆಂಬರ ತಿಂಗಳು ಸಹಕಾರಿ ಸಂಘಗಳ ಮಹಾಸಭೆಯ ದಿನಗಳು, ಸಾಮಾನ್ಯ ಸದಸ್ಯರು ಸಂಘದಿಂದ ದೊರೆಯುವ ಸಾಲ ಸೌಲಭ್ಯಗಳ ಕಡೆ ಮಾತ್ರ ಗಮನ ಹರಿಸುತ್ತಾರೆ ಹೊರತು ಮಹಾಸಭೆಯ ಮಹತ್ವ ಅದರಲ್ಲಿ ಚರ್ಚಿಸುವ, ಪಾಲ್ಗೊಳ್ಳುವ ಅಗತ್ಯತೆಯ ಅರಿವು ಹೊಂದಿರುವುದಿಲ್ಲ.

(…. ಮುಂದುವರಿಯುತ್ತದೆ…)

ಭಾಗ-1 : https://theruralmirror.com/?p=15514

ಬರಹ :

ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

15 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago