Advertisement
Opinion

ದೇಸಿ ತಳಿ ಹಸುಗಳು ರೈತರಿಗೆ ಭಾರವೇ…… !? | ಯಾಕೆ ಈ ಪ್ರಶ್ನೆ ಗೊತ್ತೇ….? |

Share

ಕೃಷಿಕರಿಗೆ(Farmer) ಬಹಳಷ್ಟು ವಿಚಾರದಲ್ಲಿ ಹಾಕಿದ ಶ್ರಮಕ್ಕೆ ನೇರವಾಗಿ ಹಣ ಬರುವುದಿಲ್ಲ. ‌ಅದರಲ್ಲಿ ಈ ಹೋರಿ ಬರಡು ಹಸುಗಳ(barren Cattle) ಸಾಕಣೆಯೂ ಒಂದು. ಇವುಗಳ ಸಗಣಿ(Cow dung) ಮೌಲ್ಯಕ್ಕೆ ನಾವು ಬೆಲೆ ಕೊಟ್ಟರೆ ನಾವು ಇಚ್ಚೆ ಪಟ್ಟು ಗೋವು ಪಾಲನೆ ಮಾಡುತ್ತೇವೆ. ಈ ಸಗಣಿ ಗೋಮೂತ್ರದ(Gomutra) ಬೆಲೆ ನಮ್ಮ ಕಣ್ಣಿಗೆ ಕಾಣಿಸದು. ಹಾಗಾಗಿ ಹೆಚ್ಚು ಹಾಲು ಕೊಡದ ದೇಸಿ ಹಸುಗಳು(Desi cow) ಅನುತ್ಪಾದಕ ‌. ಆದ್ದರಿಂದ ದೇಸಿ ಹಸುಗಳನ್ನು ಬಹಳಷ್ಟು ರೈತರು ತಮ್ಮ ಮನೆ ಬಾಗಿಲಿಗೆ ಬರುವ ಕಸಾಯಿಗೆ(slaughterhouse) ತಮ್ಮ ಹೋರಿ ಹಸುಗಳನ್ನು ನೀಡುವುದೇ ಸುಲಭದ ಪರಿಹಾರವಾಗಿದೆ. ಅದನ್ನು ಸಮರ್ಥಿಸಿಕೊಳ್ಳಲು ಬಲವಾದ ಕಾರಣಗಳು ಸಿಗುತ್ತದೆ. ‌ಆ ಕಾರಣಗಳೇ ಮೇಲಾಗುತ್ತಾ ಹೋಗಿ ಇನ್ನೇನು ಕೆಲ ವರ್ಷಗಳಲ್ಲಿ ಮಲೆನಾಡು ಕರಾವಳಿಯಲ್ಲಿ ಉಳಿಸಲು ಅಥವಾ ಸಾಕಲು ಮಲೆನಾಡು ಗಿಡ್ಡ ಹಸುಗಳೇ ಇರುವುದಿಲ್ಲ….

ನನ್ನ‌ ಕಣ್ಣೆದುರೇ ನಮ್ಮ ಮಲೆನಾಡಿನಲ್ಲಿ ಇಂತಹ ಹಲವಾರು ನಾಮಾವಶೇಷವಾದ ಅಮೂಲ್ಯ ಸಸ್ಯ ಪ್ರಾಣಿ ಜೀವ ಸಂಕುಲಗಳಿವೆ. ಈ ಭೂಮಿಯ ಮೇಲೆ ನಾಗರಿಕತೆ ಆರಂಭ ವಾಗಿ ನಾಲ್ಕೈದು ಸಾವಿರ ದಲ್ಲಿ ಮನುಷ್ಯ ಜೀವಿ ಯುದ್ದ, ಕ್ಷಾಮ ಡಾಂಬರದಾಚೆಯೂ ಈ ಹಿಂದಿನ ಶತಮಾನದ ತನಕವೂ ತನ್ನ ಎಲ್ಲಾ ಸಹಜೀವಿಗಳ ಜೊತೆಗೆ ಬಾಳುವೆ ಮಾಡಿಕೊಂಡು ಬಂದಿದ್ದ. ಆದರೆ ಯಾವಾಗ ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದನೋ ಆಗಿನಿಂದ ಭೂಮಿಯ ಮೇಲಿನ ಒಂದೊಂದೇ ಸಸ್ಯ ಪ್ರಾಣಿಗಳನ್ನು ನಾಶ ವಾಗುತ್ತಾ ಹೋಗಿ ಇನ್ನೊಂದು ನೂರು ವರ್ಷಗಳಲ್ಲಿ ಈ ತಂತ್ರಜ್ಞಾನವೇ ಮನುಷ್ಯ ಸಂಕುಲವನ್ನೇ ನಾಮಾವಶೇಷ ಮಾಡುತ್ತದೆ ಎಂಬುದು ಕ್ರೂರ ಸತ್ಯ…

ಆ ನಡುವೆ ನಮ್ಮಂಥವರದ್ದು ನಮ್ಮ ಕೈಲಾದ ಮಟ್ಟದ ಅಂತಿಮ ಹೋರಾಟ…. ಕಾರಣ, ನಮ್ಮಷ್ಟೇ ಈ ಭೂಮಿಯ ಮೇಲಿನ ಬದುಕುವ ಹಕ್ಕು ಇರುವ ಈ ನಿಸರ್ಗದ ಜೀವಿಗಳಾದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಉಳಿಯಬೇಕು… ಇದು ಎಲ್ಲರ ಆಶಯವಾಗಲಿ ಎಂಬುದು ನಮ್ಮ ಬಯಕೆ….

An easy solution is to give the desi cows to the slaughterhouse that many farmers come to their doorstep. There are strong reasons to justify it. Those reasons are increasing and in a few years there will be no Malnadu young cows to save or rear in the Malnadu coast....
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

17 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago