Advertisement
MIRROR FOCUS

ಶ್ರೀಲಂಕಾ ಮೂಲಕ ಭಾರತಕ್ಕೆ ಬರುತ್ತಿದ್ದ 23 ಕಂಟೈನರ್‌ ಅಡಿಕೆ ವಶ | ಅಡಿಕೆ ಮಾರುಕಟ್ಟೆ ಮತ್ತೆ ಸ್ಥಿರತೆಯ ನಿರೀಕ್ಷೆ |

Share

ಅಡಿಕೆ ಮಾರುಕಟ್ಟೆ ಅಸ್ಥಿರಗೊಳಿಸುವ ಸತತ ಪ್ರಯತ್ನಗಳು ವಿಫಲವಾಗುತ್ತಿದೆ. ಅಸ್ಸಾಂ ಗಡಿಯ ಮೂಲಕ ಭಾರತದೊಳಕ್ಕೆ ಬರುತ್ತಿದ್ದ ಅಡಿಕೆಗೆ ನಿರಂತರ ತಡೆಯಾಗುತ್ತಿದ್ದಂತೆಯೇ ಇದೀಗ ಶ್ರೀಲಂಕಾ ಮೂಲಕ ಭಾರತದೊಳಕ್ಕೆ ಅಡಿಕೆ ಸಾಗಾಟದ ಪ್ರಯತ್ನವೂ ವಿಫಲವಾಗಿದೆ. ಶ್ರೀಲಂಕಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಡಿಕೆ ಆಮದು ಹಾಗೂ ರಫ್ತು ಬಗ್ಗೆ ಮಾಹಿತಿ ಪಡೆದು 23 ಕಂಟೈನರ್‌ ಅಡಿಕೆ ವಶಕ್ಕೆ ಪಡೆದುಕೊಂಡು ಕಸ್ಟಮ್ಸ್ ಇಲಾಖೆಯ ಮಾಜಿ ಸಹಾಯಕ ಅಧೀಕ್ಷಕರನ್ನುವಶಕ್ಕೆ ತೆಗೆದುಕೊಂಡಿದೆ.

ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಭಾರತಕ್ಕೆ ಮರು ರಫ್ತು ಮಾಡುವ ಸಂದರ್ಭದಲ್ಲಿ  ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಡೋನೇಶ್ಯಾದಿಂದ ಅಡಿಕೆ ಆಮದು ಮಾಡಿ ಶ್ರೀಲಂಕಾದಲ್ಲಿ  ಬೆಳೆದ ಅಡಿಕೆಯನ್ನು  ಭಾರತಕ್ಕೆ ರಫ್ತು ಮಾಡುವಂತೆ ದಾಖಲೆ ಸೃಷ್ಟಿ ಮಾಡಿ 23 ಕಂಟೈನರ್‌ ಅಡಿಕೆಯನ್ನು ನಕಲಿ ದಾಖಲೆ ಮೂಲಕ ಸಾಗಾಟ ಮಾಡಲು ಯತ್ನ ನಡೆದಿತ್ತು. ಇದನ್ನು ಶ್ರೀಲಂಕಾದ ಅಪರಾಧ ತನಿಖಾ ಇಲಾಖೆ  ಪತ್ತೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಪರಾಧ ತನಿಖಾ ವಿಭಾಗದ ವಕ್ತಾರ ಡಿಐಜಿ ಅಜಿತ್‌ , ಇಂಡೋನೇಶ್ಯಾದಿಂದ ಅಡಿಕೆ ತರಿಸಿ ಭಾರತಕ್ಕೆ ಮರುರಫ್ತು ಮಾಡುವ ಜಾಲ ಇದಾಗಿದೆ. ಶ್ರೀಲಂಕಾದಲ್ಲಿ  ಬೆಳೆದ ಅಡಿಕೆಯಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಸಾಗಾಟ ಮಾಡುವ ಪ್ರಯತ್ನ ನಡೆದಿತ್ತು. ಸದ್ಯ 23 ಕಂಟೈನರ್‌ ಅಡಿಕೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು 2020  ಆಗಸ್ಟ್‌ ತಿಂಗಳಿನಿಂದ ಕೆಲವು ಬಾರಿ ಅಡಿಕೆ ಶ್ರೀಲಂಕಾಕ್ಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಸ್ಟಮ್ಸ್ ಮಾಜಿ ಸಹಾಯಕ ಅಧೀಕ್ಷಕರು ಸಹಾಯ ನೀಡಿದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅಸ್ಸಾಂ ಗಡಿಯಲ್ಲಿ ಕೂಡಾ ಅಡಿಕೆ ಆಮದು ತಡೆಯಲಾಗಿದೆ. ಕಳ್ಳ ದಾರಿ ಮೂಲಕ ಅಸ್ಸಾಂ ಗಡಿಯಲ್ಲಿ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣರವನ್ನು  ಅಸ್ಸಾಂ ಗಡಿ ಭದ್ರತಾ ಪಡೆ ಪತ್ತೆ ಮಾಡಿದ್ದು ಸುಮಾರು 7.7 ಲಕ್ಷ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ. ಮಿಜೋರಾಂನ ಚಂಪೈ ಜಿಲ್ಲೆಯ ಇಂಡೋ-ಮ್ಯಾನ್ಮಾರ್ ಅಂತರರಾಷ್ಟ್ರೀಯ ಗಡಿ ಮೂಲಕ  ಕಳ್ಳಸಾಗಣೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಗಡಿ ಭದ್ರತಾ ಸಿಬಂದಿಗಳು ಮಾಹಿತಿ ನೀಡಿದ್ದಾರೆ.

ಏನಾಗಬಹುದು ಅಡಿಕೆ ಮಾರುಕಟ್ಟೆ ?
ಇದೀಗ ಅಡಿಕೆ ಧಾರಣೆಯಲ್ಲಿ ಇಲ್ಲೂ ಏರಿಳಿತಳ ಮೂಲಕ ಧಾರಣಿ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಅಡಿಕೆ ಬೇಡಿಕೆ ಯಥಾ ಸ್ಥಿತಿ ಇದ್ದು ಮಾರುಕಟ್ಟೆಯಲ್ಲಿ  ಹಣದ ಕೊರತೆ ಇರುವುದು  ಸದ್ಯದ ಮಟ್ಟಿಗೆ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. 15 ದಿನಗಳಲ್ಲಿ  ಮತ್ತೆ ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಾಣಲಿದೆ. ಅಡಿಕೆ ಖರೀದಿಯಲ್ಲಿ  ಹಾಗೂ ಬಳಕೆಯಲ್ಲಿ  ಯಾವುದೇ ಹಿನ್ನಡೆಯಾಗಿಲ್ಲ, ಹೀಗಾಗಿ ಬೇಡಿಕೆ ಹೆಚ್ಚುತ್ತಲೇ ಇದ್ದು, ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಧಾರಣೆ ಏರಿಕೆಯ ನಿರೀಕ್ಷೆ ಇದೆ. ಕೊರೋನಾ, ಲಾಕ್ಡೌನ್‌ ಹಾಗೂ ಹಣದ ಕೊರತೆ ಮಾರುಕಟ್ಟೆಗೆ ಅಡ್ಡಿಯಾಗದೇ ಇದ್ದರೆ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗಿದೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

3 minutes ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

6 hours ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

6 hours ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

23 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

1 day ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

1 day ago