ಈ ಯುವಕರ ತಂಡ ಸೇವೆ ಎಂಬ ಯಜ್ಞದಲ್ಲಿ ತೊಡಗಿಸಿಕೊಂಡಿದೆ. ಇದು ದೇವರ ಸೇವೆಯ ಜೊತೆಗೇ ಜನ ಸೇವೆ, ಅದೂ ಪುಟಾಣಿಗಳ ಆರೋಗ್ಯದ ಸೇವೆ.
ಬಂಟ್ವಾಳ ತಾಲೂಕಿನ ಅಕ್ಕಪಕ್ಕದ ಗ್ರಾಮಗಳಾದ ಕೆದಿಲ, ಕಡೇಶಿವಾಲಯ, ಪೆರ್ನೆಯ ಯುವಕರ ತಂಡ ಈಗ ಸೇವೆಗೆ ಇಳಿದಿರುವುದು. ಈ ಗ್ರಾಮದ ಸಂಘದ ಸ್ವಯಂಸೇವಕರು , ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಆಯಾ ಗ್ರಾಮದಲ್ಲಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ, ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ, ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಎನ್ನುವ ಹೆಸರಿನಲ್ಲಿ ಸಂಘಟನೆ ಆರಂಬಿಸಿ ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯನಡೆಸುತ್ತಾ ಬಂದಿದ್ದಾರೆ, ಸದ್ಯ 4 ಮಕ್ಕಳ ಅನಾರೋಗ್ಯ ದಿಂದಿರುವುದಾಗಿ, ಅವರಿಗೆ ಚಿಕಿತ್ಸಾ ವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡು ಈಗ ಎಲ್ಲಾ ಸಂಘಟನೆ ಜೊತೆಗೂಡಿ ಸೇವಾ ಯಜ್ಞದ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಅತೀ ದೊಡ್ಡ ಹನುಮಂತನ ವೇಷ (ಅಂದಾಜು 40 ಕೆಜಿ ತೂಕದ) ಹಾಕಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಹಾಯಕ್ಕಾಗಿ ಇಳಿಯುತ್ತಿದ್ದಾರೆ.
ನಾಲ್ಕು ಜನ ಅನಾರೋಗ್ಯ ಪುಟಾಣಿಗಳ ವೈದ್ಯಕೀಯ ವೆಚ್ಚಕ್ಕಾಗಿ ಸೇವಾ ಯಜ್ಞ ಎನ್ನುವ ಹೆಸರಿನಲ್ಲಿ ಹತ್ತೂರೊಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಹನುಮಂತನ ವೇಷದ ಜೊತೆಗೆ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ.ಆ ಪುಟಾಣಿಗಳ ಪ್ರಾಣ ಉಳಿಸಲು ಕೈ ಜೋಡಿಸಲು ಮನವಿ ಮಾಡಿದ್ದಾರೆ ಸಂಘಟನಗಳು. ಬಿಳಿ ಅಂಗಿ, ಕಪ್ಪು ಪೇಂಟ್, ಕೇಸರಿ ಶಾಲು ತೊಟ್ಟ ಮೂರು ಸಂಘಟನೆಯ ಕಾರ್ಯಕರ್ತರು ಡಬ್ಬ ಹಿಡಿದು ಬೃಹತ್ ಹನುಮಂತನ ವೇಷದ ಜೊತೆಗೆ ಇರುತ್ತಾರೆ ಈ ಬಡ ಪ್ರಾಣ ಉಳಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಕಣ್ಣಿಗೆ ಕಾಣುವ ದೇವರಾದ ಈ ಪುಟಾಣಿಗಳ ಜೀವ ಉಳಿಸಲು ಪಣತೊಟ್ಟಿದ್ದಾರೆ. ಕೈಲಾದ ಸಹಾಯ ಮಾಡಲು ಮನವಿ ಮಾಡಿದ್ದಾರೆ.
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…