ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಟಾಪನೆಯ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿತ್ತು. ಎಲ್ಲೆಡೆಯೂ ಘೋಷಣೆ, ರಾಮತಾರಕ ಮಂತ್ರ ಜಪಿಸುತ್ತಿದ್ದಂತೆಯೇ ರಾಮಲಲ್ಲಾ ಪ್ರತಿಷ್ಟಾಪನೆ ನಡೆದಿತ್ತು. ಇದೇ ವೇಳೆ ಇಂದು ಇಡೀ ದೇಶದಲ್ಲಿ ರಾಮಜಪ. ಶುಭ ಕಾರ್ಯಕ್ರಮಗಳಲ್ಲಿ ಪರದೆಯ ಮೂಲಕ ರಾಮ ವೈಭವ ವೀಕ್ಷಿಸಿದರೆ, ದೇವಸ್ಥಾನಗಳಲ್ಲಿ ಬೃಹತ್ ಪರದೆಯ ಮೂಲಕ ನೇರ ಪ್ರಸಾರ ವೀಕ್ಷಣೆ. ಇಷ್ಟೇ ಅಲ್ಲ ಮನೆ ಮನೆಗಳಲ್ಲೂ ರಾಮನ ಪೂಜೆ ನಡೆಯಿತು. ಸೋಮವಾರ….
ಸೋಮವಾರ ಹಮ್ಮಿಕೊಂಡಿದ್ದ ಮದುವೆ, ಉಪನಯನ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ಅಯೋಧ್ಯೆಯ ನೇರ ಪ್ರಸಾರ ವೀಕ್ಷಣೆಗೆ ಟಿ ವಿ ಅಳವಡಿಕೆ ಮಾಡಲಾಗಿತ್ತು. ರಾಮಲಲ್ಲಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಜೈ ಶ್ರೀ ರಾಮ್ ಘೋಷಣೆ ಮೊಳಗಿತ್ತು .ಪ್ರತೀ ಮನೆಯಲ್ಲೂ ಸಂಭ್ರಮ ಮನೆಮಾಡಿತ್ತು. ಇದೇ ವೇಳೆ…
ಇದೇ ವೇಳೆ ಮನೆಗಳಲ್ಲಿ ರಾಮತಾರಕ ಹವನ, ರಾಮ ತಾರಕ ಮಂತ್ರ ಪಠಣ ನಡೆಯಿತು. ಸುಳ್ಯ ತಾಲೂಕಿನ ವಳಲಂಬೆಯ ಮುರಳಿಕೃಷ್ಣ ಭಟ್ ಅವರ ಮನೆಯಲ್ಲಿ ಇಡೀ ದಿನ ರಾಮಾರ್ಪಣಂ ಕಾರ್ಯಕ್ರಮವೇ ನಡೆಯಿತು. ಬೆಳಗ್ಗೆ ಶ್ರೀ ರಾಮತಾರಕ ಹವನ, ಲೋಕಕಲ್ಯಾಣಾರ್ಥವಾಗಿ ರಾಮತಾರಕ ಮಂತ್ರ ಜಪ, ನಡೆಯಿತು. ಸಂಜೆ ರಾಮಗೀತಾ ಕಾರ್ಯಕ್ರಮದ ಮೂಲಕ ಅಕ್ಷತಾ ಮುರಳಿಕೃಷ್ಣ ಭಟ್ ಅವರಿಂದ ರಾಮ ಗೀತೆ ನಡೆಯಿತು. ಈ ಹಾಡುಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರವನ್ನೂ ಮಾಡಿದರು.
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…
ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…