Advertisement
MIRROR FOCUS

ಭಕ್ತರ ಇಷ್ಟಾರ್ಥ ಈಡೇರಿಸುವ ದೈವ | ಸಂತಾನ ಭಾಗ್ಯ, ಉದ್ಯೋಗ.. ಇತ್ಯಾದಿಗಳಿಗೆ ಈ ದೈವಕ್ಕೆ ಹರಿಕೆ | ಮೊಗ್ರದ ಶ್ರೀ ಭೈರಜ್ಜಿ ದೈವ |

Share

ನಂಬಿಕೆಯೇ ಈ ದೇಶದಲ್ಲಿ ಪ್ರಮುಖವಾದ್ದು. ದೇವರು-ದೈವಗಳೂ ಕೂಡಾ ನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ. ಇಲ್ಲೂ ಹಾಗೇ, ನಂಬಿದವರಿಗೆ ಯಾವತ್ತೂ ನಿರಾಸೆಯಾಗಿಲ್ಲ. ಈ ದೈವವನ್ನು ನಂಬಿ ಮಾಡಿದ ಕೆಲಸಗಳೆಲ್ಲವೂ ಯಶಸ್ಸಾಗಿದೆ. ಈ ದೈವದ ನೆಲದಲ್ಲಿ ಮೋಸಗಳಿಗೆ, ಅಹಂಕಾರಗಳು ಯಾವತ್ತೂ ಗೆಲ್ಲಲಿಲ್ಲ. ಅಂತಹ ಪುಣ್ಯ ನೆಲ ಮೊಗ್ರ. ಇಲ್ಲಿನ ಭೈರಜ್ಜಿ ವಿಶೇಷವಾದ ದೈವ. ದಕ್ಷಿಣ ಕನ್ನಡ ಜಿಲ್ಲೆಯ….

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಎಂಬ ದೈವದ ಪ್ರದೇಶ ಇದೆ. ಎರಡು ದಿನಗಳ ಕಾಲ ಇಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತದೆ. ಅದರಲ್ಲಿ ಭೈರಜ್ಜಿ ದೈವಕ್ಕೆ ವಿಶೇಷ ಮಹತ್ವ. ಈ ದೈವಕ್ಕೆ ಹರಿಕೆ ಹೇಳಿಕೊಂಡರೆ ಇಷ್ಟಾರ್ಥ ಈಡೇರುತ್ತದೆ. ಸಂತಾನ ಭಾಗ್ಯಕ್ಕೆ, ಉದ್ಯೋಗಕ್ಕೆ, ಅನ್ಯಾಯದ ಸಂದರ್ಭ ನ್ಯಾಯಕ್ಕಾಗಿ, ವಿಶೇಷವಾಗಿ ಕಳೆದುಹೋದ ವಸ್ತುಗಳಿಗೆ ಹರಿಕೆ ಹೇಳಿಕೊಂಡರೆ ಮತ್ತೆ ಲಭ್ಯವಾಗುತ್ತದೆ ಎನ್ನುವುದು ನಂಬಿಕೆ. ಇದಕ್ಕೆ ಪುಷ್ಠಿ ನೀಡುವಂತೆ ಅನೇಕರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ದೈವಕ್ಕೆ ಹರಕೆ ಸಲ್ಲಿಕೆ ಮಾಡುತ್ತಾರೆ. ಸೀರೆ, ಕತ್ತಿ , ಬೆಳ್ಳಿಯ ಆಭರಣಗಳನ್ನು ಸಮರ್ಪಣೆ ಮಾಡುತ್ತಾರೆ. ಈಚೆಗೆ ಸೀರೆಯ ಸಾವಿರ ದಾಟುತ್ತಿದೆ. ಇದು ಭೈರಜ್ಜಿ ದೈವಕ್ಕೆ ಹರಿಕೆ ಹೇಳಿ ಫಲ ನೀಡಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಭಕ್ತಾದಿಗಳು. ಭಕ್ತರು……

Advertisement

ಭಕ್ತರು ವಿವಿಧ ಇಷ್ಟಾರ್ಥ ಈಡೇರಿಕೆಗೆ  ದೈವಕ್ಕೆ ಪ್ರಾರ್ಥನೆ ಮಾಡುತ್ತಾರೆ. ನಂತರ ಈ ಇಷ್ಟಾರ್ಥ ಈಡೇರಿದ ಬಳಿಕ ದೈವದ ನೇಮದಂದು ಆಗಮಿಸಿ ಹರಿಕೆ ಸಮರ್ಪಣೆ ಮಾಡುತ್ತಾರೆ. ಈ ದೈವ ಕನ್ನಡದಲ್ಲಿಯೇ ಮಾತನಾಡುವುದು ವಿಶೇಷವಾಗಿದೆ. ಪ್ರತೀ ವರ್ಷ ಜ.19-20 ರಂದು ವಾರ್ಷಿಕ ಜಾತ್ರಾ ಉತ್ಸವ ಇಲ್ಲಿ ನಡೆಯುತ್ತದೆ.

“Ajji Daiva” of Mogra who fulfills the wishes of devotees. Many problems including childlessness will be fulfilled if “Harike” putting here.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುತ್ತಾ? ಕೇಂದ್ರ ಸಚಿವರ ಸುಳಿವಿನಿಂದ ವಾಹನ ಸವಾರರಿಗೆ ಹೊಸ ನಿರೀಕ್ಷೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ…

8 hours ago

ನಿರಂತರ ಮಳೆ ಹಿನ್ನೆಲೆ ಜುಲೈ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ…

8 hours ago

ಗ್ರಾಮಸಭೆಗೆ ಜನ ಯಾಕೆ ಬರುತ್ತಿಲ್ಲ? ಗ್ರಾಮಸಭೆಗಳು ಔಪಚಾರಿಕತೆಗೆ ಸೀಮಿತವೇ?

ಜೀವನೋಪಾಯದ ಒತ್ತಡದಿಂದ ಗ್ರಾಮಸಭೆಗೆ 55.5% ಗ್ರಾಮೀಣರು ಹಾಜರಾಗುತ್ತಿಲ್ಲ ಎಂದು ರಾಷ್ಟ್ರೀಯ ಅಧ್ಯಯನ ತಿಳಿಸಿದೆ.…

19 hours ago

ದೇಶಾದ್ಯಂತ ಚುರುಕುಗೊಂಡ ನೈಋತ್ಯ ಮುಂಗಾರು – ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಕೆ

ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕ ಕರಾವಳಿ ಸೇರಿದಂತೆ ಹಲವು…

1 day ago

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಜುಲೈ 2 ರಂದು ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 2ರಂದು ಅಂಗನವಾಡಿ, ಶಾಲೆ…

1 day ago