“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು ದ. ರಾ. ಬೇಂದ್ರೆ ಅವರ ಸಾಲುಗಳು. ಬಹಳ ಸುಂದರವಾದ ಸಾಲುಗಳು ಇವು…
ತಿಂದು ಬದುಕುವುದು ಎಂದರೆ ತಿನ್ನುವುದು ಅಲ್ಲ, ಇಲ್ಲಿ ಶೋಷಣೆ, ಅಸೂಯೆ, ಸ್ವಾರ್ಥ ಮತ್ತು ಮತ್ತೊಬ್ಬರ ದುಃಖದ ಮೇಲೆ ನಿಲ್ಲುವ ಬದುಕಿನ ಸಂಕೇತ. ಇಂತಹ ಬದುಕು ಕ್ಷಣಿಕ ಲಾಭ ನೀಡಬಹುದು, ಆದರೆ ಅಂತಃಕರಣವನ್ನು ಯಾವಾಗಲೋ ಒಂದು ಸಂದರ್ಭ ಹಿಂಸಿಸುತ್ತದೆ, ಬೇಂದ್ರೆ ಇಲ್ಲಿ ಎಚ್ಚರಿಸುವುದು ಇದನ್ನು. ಇತರರನ್ನು ಕುಗ್ಗಿಸಿ, ಹಿಂಸಿಸಿ ಮೇಲೇರಿದ ಬದುಕು ನಿಜವಾದ ಮಾನವೀಯ ಬದುಕಾಗಲಾರದು. ಅದು ಕಾಡುವುದೂ ನಿಶ್ಚಿತವೇ ಆಗಿರುತ್ತದೆ. ಆಗ ಕಾಲವೂ ಕಳೆದಿರುತ್ತದೆ, ಕಾಲವೂ ದೂರವಾಗಿರುತ್ತದೆ.
ತಿಳಿದು ಬದುಕಬೇಕು ಎನ್ನುವುದೇ ನಿಜವಾದ ಬದುಕು. ಇದು ಬದುಕಿಗೆ ನೀಡುವ ಸಂದೇಶ, ಬೆಳಗಿನ ಚಿಂತನೆಗೆ ದಾರಿದೀಪ. ತಿಳಿದು ಬದುಕುವುದು ಎಂದರೆ ಮಾತು, ನಡೆ ಮತ್ತು ನಿರ್ಧಾರಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿತು ನಡೆಯುವುದು. ದಿನದ ಆರಂಭದಲ್ಲೇ ಈ ಅರಿವು ಬಂದರೆ, ಬದುಕು ಹಗುರವಾಗುತ್ತದೆ, ಸಂಬಂಧಗಳು ಮೃದುಗೊಳ್ಳುತ್ತವೆ. ಯಾರು ಯಾರನ್ನೂ ನೋಯಿಸದೇ, ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ, ಅದೇ ನಿಜವಾದ ಸಂತೋಷ. ಇಂದಿನ ದಿನವನ್ನು ಈ ಚಿಂತನೆಯೊಂದಿಗೆ ಆರಂಭಿಸೋಣ….. ಶುಭದಿನ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ….
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಜುಲೈ 5ರಿಂದ 9ರವರೆಗೆ ಒಂದು ಅಥವಾ ಎರಡು…
ರಾಜ್ಯದಲ್ಲಿ ಮುಂಗಾರು ಚಟುವಟಿಕೆ ಮುಂದುವರಿದಿದ್ದು, ಜು. 4ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ…
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಭಾರತೀಯ ಹವಾಮಾನ ಇಲಾಖೆಯ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಕೆಲವು ದಿನಗಳು ಬಿಟ್ಟು ಬಿಟ್ಟು ಸಾಧಾರಣ ಮಳೆ…
ಜೀವನೋಪಾಯದ ಒತ್ತಡದಿಂದ ಗ್ರಾಮಸಭೆಗೆ 55.5% ಗ್ರಾಮೀಣರು ಹಾಜರಾಗುತ್ತಿಲ್ಲ ಎಂದು ರಾಷ್ಟ್ರೀಯ ಅಧ್ಯಯನ ತಿಳಿಸಿದೆ.…