“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು ದ. ರಾ. ಬೇಂದ್ರೆ ಅವರ ಸಾಲುಗಳು. ಬಹಳ ಸುಂದರವಾದ ಸಾಲುಗಳು ಇವು…
ತಿಂದು ಬದುಕುವುದು ಎಂದರೆ ತಿನ್ನುವುದು ಅಲ್ಲ, ಇಲ್ಲಿ ಶೋಷಣೆ, ಅಸೂಯೆ, ಸ್ವಾರ್ಥ ಮತ್ತು ಮತ್ತೊಬ್ಬರ ದುಃಖದ ಮೇಲೆ ನಿಲ್ಲುವ ಬದುಕಿನ ಸಂಕೇತ. ಇಂತಹ ಬದುಕು ಕ್ಷಣಿಕ ಲಾಭ ನೀಡಬಹುದು, ಆದರೆ ಅಂತಃಕರಣವನ್ನು ಯಾವಾಗಲೋ ಒಂದು ಸಂದರ್ಭ ಹಿಂಸಿಸುತ್ತದೆ, ಬೇಂದ್ರೆ ಇಲ್ಲಿ ಎಚ್ಚರಿಸುವುದು ಇದನ್ನು. ಇತರರನ್ನು ಕುಗ್ಗಿಸಿ, ಹಿಂಸಿಸಿ ಮೇಲೇರಿದ ಬದುಕು ನಿಜವಾದ ಮಾನವೀಯ ಬದುಕಾಗಲಾರದು. ಅದು ಕಾಡುವುದೂ ನಿಶ್ಚಿತವೇ ಆಗಿರುತ್ತದೆ. ಆಗ ಕಾಲವೂ ಕಳೆದಿರುತ್ತದೆ, ಕಾಲವೂ ದೂರವಾಗಿರುತ್ತದೆ.
ತಿಳಿದು ಬದುಕಬೇಕು ಎನ್ನುವುದೇ ನಿಜವಾದ ಬದುಕು. ಇದು ಬದುಕಿಗೆ ನೀಡುವ ಸಂದೇಶ, ಬೆಳಗಿನ ಚಿಂತನೆಗೆ ದಾರಿದೀಪ. ತಿಳಿದು ಬದುಕುವುದು ಎಂದರೆ ಮಾತು, ನಡೆ ಮತ್ತು ನಿರ್ಧಾರಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿತು ನಡೆಯುವುದು. ದಿನದ ಆರಂಭದಲ್ಲೇ ಈ ಅರಿವು ಬಂದರೆ, ಬದುಕು ಹಗುರವಾಗುತ್ತದೆ, ಸಂಬಂಧಗಳು ಮೃದುಗೊಳ್ಳುತ್ತವೆ. ಯಾರು ಯಾರನ್ನೂ ನೋಯಿಸದೇ, ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ, ಅದೇ ನಿಜವಾದ ಸಂತೋಷ. ಇಂದಿನ ದಿನವನ್ನು ಈ ಚಿಂತನೆಯೊಂದಿಗೆ ಆರಂಭಿಸೋಣ….. ಶುಭದಿನ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ….
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…