ರಾಜ್ಯ

ಅರಸಿನಮಕ್ಕಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ | ಪ್ರಧಾನಿ ಕಾರ್ಯಾಲಯದಿಂದ ತ್ವರಿತ ಸ್ಪಂದನೆ | ಬಿ ಎಸ್‌ ಎನ್‌ ಎಲ್‌ ಸ್ಪಂದಿಸುವುದೇ ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ತಲೆದೋರಿರುವ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ನೀಡಿದ ದೂರಿಗೆ ತಕ್ಷಣ ಸ್ಪಂದನೆ ದೊರೆತಿದ್ದು ಹೊಸ ಬ್ಯಾಟರಿ ಅಳವಡಿಕೆಗೆ ಮುಂದಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಹೊಸ ಬ್ಯಾಟರಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಮಂಜೂರಾತಿ ದೊರೆತ ಕೂಡಲೇ ಅಳವಡಿಸುವುದಾಗಿ ಪ್ರಧಾನಿಯವರ ಕಾರ್ಯಾಲಯದಿಂದ ಪ್ರತ್ಯುತ್ತರ ಬಂದಿದೆ. ಆದರೆ ಬಿ ಎಸ್‌ ಎನ್‌ ಎಲ್‌ ಇದಕ್ಕೆ ಸ್ಪಂದಿಸುವುದೇ ಎನ್ನುವುದು  ಈಗಿರುವ ಪ್ರಶ್ನೆಯಾಗಿದೆ.

Advertisement

ಅರಸಿನಮಕ್ಕಿಯಲ್ಲಿ ಬಿಎಸ್ಸೆನ್ನೆಲ್ ಟವರ್ ಇದ್ದು ಬಹಳ ಹಿಂದೆ ಬಿಎಸ್ಸೆನ್ನೆಲ್ ಉತ್ತಮ ಸೇವೆ ನೀಡುತ್ತಿದ್ದುದರಿಂದ ಅತ್ಯಧಿಕ ಬಳಕೆದಾರರಿದ್ದರು. ಆದರೆ ಇತ್ತೀಚೆಗೆ ಹಲವಾರು ಸಮಯದಿಂದ ವಿದ್ಯುತ್ ಹೋದಾಗ ಬ್ಯಾಟರಿ ಬ್ಯಾಕಪ್ ಇಲ್ಲದಿರುವುದರಿಂದ, ಪರ್ಯಾಯ ಬ್ಯಾಟರಿ ವ್ಯವಸ್ಥೆ ಇಲ್ಲದಿರುವುದರಿಂದ ಟವರ್ ಆಫ್ ಆಗಿ ನೆಟ್‌ವರ್ಕ್ ಹೋಗುತ್ತಿತ್ತು. ಇದರಿಂದಾಗಿ ಶಿಶಿಲ, ಶಿಬಾಜೆ, ರೆಖ್ಯ, ಹತ್ಯಡ್ಕ ಗ್ರಾಮಗಳ ಕೇಂದ್ರ ಸ್ಥಾನವಾದ ಅರಸಿನಮಕ್ಕಿಯಲ್ಲಿ ಆಧಾರ್ ನೋಂದಣಿ, ಕೋವಿಡ್ ಸಂದರ್ಭದಲ್ಲಿ ಸರಕಾರದ ಪ್ಯಾಕೇಜ್ ಘೋಷಣೆಯಾದಾಗ ಕಾರ್ಮಿಕರು, ರಿಕ್ಷಾ ಚಾಲಕರಿಗೆ ಸೌಲಭ್ಯಗಳಿಗೆ ನೋಂದಣಿಗೆ, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪಡೆಯಲು ಆನ್‌ಲೈನ್ ನೋಂದಣಿಗೆ, ಪಡಿತರ ಪಡೆಯಲು ಬರುವವರಿಗೆ ಮೊಬೈಲ್‌ಗೆ ಒಟಿಪಿ ಪಡೆಯಲು ತೀವ್ರ ಸಮಸ್ಯೆಗಳು ಉಂಟಾಗುತ್ತಿತ್ತು.

ಜೊತೆಗೆ ನೆಟ್‌ವರ್ಕ್ ಇದ್ದರೂ ಕೀಪ್ಯಾಡ್ ಹ್ಯಾಂಡ್‌ಸೆಟ್‌ಗಳಲ್ಲಿ ವಾರಗಟ್ಟಲೆ ಫೋನ್ ಕರೆ ಹೋಗದಿರುವುದು, ಸ್ಮಾರ್ಟ್ ಫೋನ್ ಇರುವವರಿಗೆ ಮಾತ್ರ ಕರೆಗಳು, ಡಾಟಾ ಸೌಲಭ್ಯ ಸಿಗುವ ಸಮಸ್ಯೆಯೂ ಉಂಟಾಗಿತ್ತು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಾದ ವೃಷಾಂಕ್ ಖಾಡಿಲ್ಕರ್‌ ಅವರು ಸೆ.22 ರಂದು ಪ್ರಧಾನಮಂತ್ರಿಯವರ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ದೂರು ಸಲ್ಲಿಸಿದ್ದು ಖಾಸಗಿ ಕಂಪೆನಿಗಳ ಟವರ್‌ಗಳನ್ನೂ ಹೆಚ್ಚಿಸುವಂತೆಯೂ ತಿಳಿಸಿದ್ದರು. ಇದೀಗ ದೂರು ನೀಡಿದ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಬಂದಿದೆ. ಈ ಪ್ರತಿಕ್ರಿಯೆ ಬಂದಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲತೆಗೂ ಪ್ರಧಾನಮಂತ್ರಿಯವರ ಕಾರ್ಯಾಲಯ ವಿಷಾದ ವ್ಯಕ್ತಪಡಿಸಿದೆ. ‌

ಹಲವು ಕಡೆಗಳಲ್ಲಿ  ಇಂತಹದ್ದೇ ಪ್ರತಿಕ್ರಿಯೆ ಪ್ರಧಾನಿಗಳ ಕಾರ್ಯಾಲಯದಿಂದ ಬಂದಿದೆ. ಸದ್ಯವೇ ಬ್ಯಾಟರಿ ಬದಲಾವಣೆ ಎಂದೂ ಉತ್ತರ ಬಂದಿದೆ. ಬ್ಯಾಟರಿ ಲಭ್ಯವಾದ ಕೂಡಲೇ ಬದಲಾವಣೆ ಎಂದೂ ಹೇಳುವ ಬಿ ಎಸ್‌ ಎನ್‌ ಎಲ್‌ ಇದುವರೆಗೂ ಬ್ಯಾಟರಿ ಅಳವಡಿಕೆ ಕಾರ್ಯ ಹಲವು ಕಡೆ ನಡೆಸಿಲ್ಲ. ಪ್ರಧಾನಿ ಕಾರ್ಯಾಲಯದ ಪ್ರತಿಕ್ರಿಯೆಯ ವೇಗದಲ್ಲಿಯೇ ಬಿ ಎಸ್‌ ಎನ್‌ ಎಲ್‌ ಕೂಡಾ ಸ್ಪಂದಿಸಿದೆ ಗ್ರಾಮೀಣ ಭಾಗದ ಅತ್ಯಂತ ಸುದೃಢ ನೆಟ್ವರ್ಕ್‌ ಬಿ ಎಸ್‌ ಎನ್‌ ಎಲ್‌ ಆಗುವುದರಲ್ಲಿ ಸಂಶಯವಿಲ್ಲ.

Advertisement
ಮೊಬೈಲ್ ನೆಟ್‌ವರ್ಕ್ ಎಂಬುದು ಪ್ರಸ್ತುತ ರಸ್ತೆ, ಕುಡಿಯುವ ನೀರಿನಂತೆಯೆ ಜನರ ಮೂಲಭೂತ ಆವಶ್ಯಕತೆಯಾಗಿದ್ದು ಅರಸಿನಮಕ್ಕಿಯ ಬಿಎಸ್ಸೆನ್ನೆಲ್ ಟವರ್ ಸಮಸ್ಯೆಗೆ ಪ್ರಧಾನಿಯವರ ಕಾರ್ಯಾಲಯದಿಂದ ಸಿಕ್ಕಿರುವ ಸ್ಪಂದನೆ ಈಡೇರುವ ಭರವಸೆ ಇದೆ.
– ವೃಷಾಂಕ್ ಖಾಡಿಲ್ಕರ್, ಅರಸಿನಮಕ್ಕಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರ್ಪಸಂಸ್ಕಾರವು ಈ ಶಾಪದಿಂದ ಮುಕ್ತಿಯನ್ನು ಒದಗಿಸುವ ಮಾರ್ಗ

ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…

3 hours ago

ಹವಾಮಾನ ವರದಿ | 31-07-2025 | ಇನ್ನೊಂದು ವಾಯುಭಾರ ಕುಸಿತದ ಲಕ್ಷಣ |

ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…

22 hours ago

ಆಧುನಿಕ ಯುಗದಲ್ಲಿ ತಂತ್ರಜ್ಞ ದಲ್ಲಾಳಿಗಳು

ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…

2 days ago

ಹಾವೇರಿಯಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯ | ರಾಜ್ಯದ 639 ರೈತರಿಗೆ ವಂಚನೆ |

ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…

2 days ago

ಕಾಡಾನೆಗಳ ನಿಯಂತ್ರಣಕ್ಕೆ ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…

2 days ago

ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ | 800 ಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿ – ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…

2 days ago