Advertisement
ಸುದ್ದಿಗಳು

ಭೂಕಂಪನದಿಂದ ಸುದ್ದಿಯಾದ ಚೆಂಬು ಪ್ರದೇಶದಲ್ಲಿ ಈ ಸ್ಥಿತಿ ಇದೆ….! | ಮೂಲಭೂತ ಆವಶ್ಯಕತೆಗಳ ಕಡೆಗೆ ಗಮನ ಅಗತ್ಯ… !

Share

ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯ ಚೆಂಬು ಭೂಕಂಪನದ ಮೂಲಕ ಗಮನ ಸೆಳೆಯಿತು. ಚೆಂಬು, ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶಗಳು ರಾಜ್ಯಾದ್ಯಂತ ಸುದ್ದಿಯಾಯಿತು. ಆದರೆ ಇಂದಿಗೂ ಆ ಊರಿನ ಕೆಲವು ಕಡೆ ಮೂಲಭೂತ ಸೌಲಭ್ಯಗಳ ಆವಶ್ಯಕತೆ ಇದೆ.  ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿನ ಹೊಳೆ ದಾಟಲು ಜನರು ಸಂಕಷ್ಟ ಪಡುತ್ತಿದ್ದಾರೆ. ಜೀಪೊಂದು ನೀರು ದಾಟಿ ಹೋಗುವ ಈ ವಿಡಿಯೋ ಈಗ ಗಮನಸೆಳೆದಿದೆ.

ಕೊಡಗು ಜಿಲ್ಲೆಯ ಚೆಂಬು ಹಾಗೂ ಸುಳ್ಯ ತಾಲೂಕಿನ ಸಂಪಾಜೆ ಮೊದಲಾದ ಪ್ರದೇಶಗಳೂ ಭೂಕಂಪನದ ಮೂಲಕ ಸುದ್ದಿಯಾಯಿತು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು  ಹೇಳಲಾಯಿತು. ಚೆಂಬು, ಸಂಪಾಜೆ ಪ್ರದೇಶದಲ್ಲಿ ಕೃಷಿಯೇ ಪ್ರಮುಖವಾದ ಆದಾಯದ ಮೂಲ. ಆದರೆ ಅಡಿಕೆ ಹಳದಿ ಎಲೆ ರೋಗದ ನಂತರ ಅಡಿಕೆ ಕೃಷಿ ಕಡಿಮೆಯಾಗಿದೆ. ಅದರ ಬದಲಾಗಿ ರಬ್ಬರ್‌ ಕೃಷಿ ವಿಸ್ತಾರವಾಗಿದೆ. ಗುಡ್ಡದಿಂದ ಹಿಡಿದು ತೋಟವದರೆಗೂ ರಬ್ಬರ್‌ ಕೃಷಿ ಇದೆ. ಇಲ್ಲಿನ ಕೃಷಿ ಸಮಸ್ಯೆ , ಕೃಷಿಪಲ್ಲಟದ ಜೊತೆಗೆ ಇಲ್ಲಿ  ಮೂಲಭೂತ ಆವಶ್ಯಕತೆಗಳ ಕೊರತೆ ಜನರನ್ನು ಕಾಡುತ್ತಿದೆ. ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿ  ಸುಮಾರು 25 ಮನೆಗಳು ಇವೆ. ಇಲ್ಲಿ  ಹರಿಯುವ ಹೊಳೆಯ ಕಾರಣದಿಂದ ಮಳೆಗಾಲ ದಾಟಲು ಸಮಸ್ಯೆಯಾಗುತ್ತದೆ. ಹೊಳೆ ದಾಟಿದ ಮುಂದೆ ಉಂಬಳ್ಳೆ ಎಂಬ ಪ್ರದೇಶ ಇದೆ. ಹಲವಾರು ಸಮಯಗಳಿಂದಲೂ ಇಲ್ಲಿನ ಜನ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಹೆಚ್ಚು ನೀರು ಹರಿದಾಗ ಯಾವುದೇ ವಾಹನ ದಾಟುವುದಿಲ್ಲ, ಈ ಸಂದರ್ಭ ಸುತ್ತು ಬಳಸಿ ಪರ್ಯಾಯ ದಾರಿ ಬಳಸುತ್ತಾರೆ ಕಟ್ಟಪಲ್ಲಿಯ ಜನರು. ಈ ಪ್ರದೇಶದಲ್ಲಿ  ಮಲೆಕುಡಿಯ ಸಮುದಾಯದ ಕುಟುಂಬಗಳು ಹೆಚ್ಚಿದೆ.

ಭೂಕಂಪನದ ಸುದ್ದಿಯ ಜೊತೆಗೆ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಈಗ ಜನರು ಮಾತನಾಡುತ್ತಿದ್ದಾರೆ. ಒಂದು ವೇಳೆ ತುರ್ತಾಗಿ ಇಲ್ಲಿಂದ ಸ್ಥಳಾಂತರವಾಗಬೇಕಾಗಿ ಬಂದರೆ ಸಂಪರ್ಕ ಹೇಗೆ ಎನ್ನುವುದು  ಕೂಡಾ ಪ್ರಶ್ನೆಯಾಗಿದೆ ಎಂದು  ಕೇಳುತ್ತಾರೆ ಇಲ್ಲಿನ ಜನರು.ಸದ್ದಿಲ್ಲದೆ ಸುದ್ದಿಯಾದ ಭೂಕಂಪನ ಬಳಿಕ ಚೆಂಬು ಗ್ರಾಮ ಸುದ್ದಿಯಾಗಿದೆ. ಇದೀಗ ಗ್ರಾಮೀಣ ಭಾಗದ ಇಂತಹ ಮೂಲಭೂತ ಸಮಸ್ಯೆಗಳ ಕಡೆಗೂ ಆಡಳಿತ ಗಮನಿಸಬೇಕಿದೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

19 hours ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

1 day ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

3 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

4 days ago