Advertisement
ಅನುಕ್ರಮ

“ಚಿಲಿಪಿಲಿ” ಹಕ್ಕಿ ನೀಡುವ ರಾಧಾಕೃಷ್ಣ ರಾವ್ ಬಾಳಿಲ

Share
ರೂರಲ್‌ ಮಿರರ್‌ ಹೊಸತೊಂದು ಅಂಕಣ ಶುರು ಮಾಡುತ್ತಿದೆ. ಹಕ್ಕಿಗಳ ಲೋಕವನ್ನು ಪರಿಚಯ ಮಾಡುವ ಚಿಲಿಪಿಲಿ ಅಂಕಣ ಇದು. ಬರಹಗಾರ್ತಿ ಅಶ್ವಿನಿಮೂರ್ತಿ ಬಾಳಿಲ ಈ ಅಂಕಣ ಬರೆಯುವರು. ಹಕ್ಕಿಗಳ ಪರಿಚಯ ಮಾಡುವರು. ಇದಕ್ಕೆ ಚಿತ್ರವನ್ನು ನೀಡುವವರು  ರಾಧಾಕೃಷ್ಣ ರಾವ್ ಯು ಬಾಳಿಲ. ಫೋಟೋಗ್ರಫಿ ಒಂದು ತಪಸ್ಸು. ಅದರಲ್ಲೂ ಹಕ್ಕಿ, ಪರಿಸರದ ಛಾಯಾಚಿತ್ರ ತೆಗೆಯುವುದು  ಎಂದರೆ ಅದು ಬಹುದೊಡ್ಡ ತಪಸ್ಸು.
ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರ ಅರ್ಥಮಾಡಿಸಿ ಬಿಡುತ್ತದೆ. ಮಾತನಾಡುವ ಫೋಟೋವನ್ನು ತೆಗೆಯುವುದೂ ಒಂದು ಕಲೆ. ಛಾಯಾಗ್ರಹಣ ಕಲೆಯನ್ನು ಒಲಿಸಿಕೊಂಡವರಲ್ಲಿ ಪ್ರಮುಖರಾಗಿ ಕಂಡು ಬರುವವರು ರಾಧಾಕೃಷ್ಣ ರಾವ್ ಯು ಬಾಳಿಲ ಅವರು. ಇವರು ಸೆರೆ ಹಿಡಿಯುವ ಪ್ರತಿ ಫೋಟೋ ವೂ ಒಂದು ಸಂಭಾಷಣೆಯೇ. ಅದರಲ್ಲೂ ಪಕ್ಷಿ ಚಿತ್ರಣವಂತೂ ಅದ್ಭುತ.  ಕೃಷಿಕರಾಗಿರುವ ಇವರು ವನ್ಯಜೀವಿ ಛಾಯಾಗ್ರಾಹಕರು.  ಅಪಾರ ಶ್ರದ್ಧೆ, ಪರಿಶ್ರಮ , ತಾಳ್ಮೆ, ಹಾಗೂ ನೂತನ ತಂತ್ರಜ್ಞಾನದ ಅರಿವು ವನ್ಯಜೀವಿ ಛಾಯಾಗ್ರಹಣಕ್ಕೆ ಬಹಳ ಅಗತ್ಯ. ಕೆಲವೊಂದು ಫೋಟೋಗಳನ್ನು ತೆಗೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹಕ್ಕಿಗಳ ಮನಸ್ಥಿಯನ್ನು ಅರ್ಥಮಾಡಿಕೊಂಡು , ವಿವಿಧ ಭಂಗಿಗಳನ್ನು ಸಮರ್ಥವಾಗಿ ಸೆರೆಹಿಡಿಯ ಬಲ್ಲರು. ಇವರು ತೆಗೆದ ಪ್ರತಿಯೊಂದು ಹಕ್ಕಿಗಳ ಛಾಯಾಚಿತ್ರವೂ ಏನನ್ನೋ ಧ್ವನಿಸುತ್ತದೆ. ಬರಿಗಣ್ಣಿನಲ್ಲಿ ಗೋಚರಿಸದ ಸೂಕ್ಷ್ಮ ಸಂಗತಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗದು.  ಇವರ ಫೋಟೋಗಳು ಪಕ್ಷಿ ಲೋಕದ ಸುಂದರ‌ ಚಿತ್ರಣಗಳು. ಇವರು ಅಶ್ವಿನಿಮೂರ್ತಿ ಅವರಿಗೆ ಹಕ್ಕಿಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಛಾಯಾಚಿತ್ರಗಳನ್ನು ನೀಡುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

5 hours ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

12 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

13 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

13 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

23 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

23 hours ago