ದಾಮಾಯಣ ಇದು ದಾಮಾಯಣ….!! ಇದೆಂತ ಮಾರ್ರೆ ದಾಮಾಯಣ ಅಂತ ಕೇಳ್ತೀರಾ ? ಇದು ಸುಳ್ಯದ ಹುಡುಗರು ನಟಿಸಿರುವ, ತಂಡ ಮಾಡಿರುವ ಸಿನಿಮಾ. ಬಹುನಿರೀಕ್ಷೆಯ ಸಿನಿಮಾ. ದಕ್ಷಿಣ ಕನ್ನಡ ಸೊಗಡಿನ ಭಾಷೆಯಲ್ಲಿ ಬಂದಿರುವ ಸಿನಿಮಾ. ಪಕ್ಕಾ ಲೋಕಲ್ ಹುಡುಗನ ದೊಡ್ಡ ಕನಸಿನ ಚಿತ್ರ ಇದು.
ಹೌದು, ಸುಳ್ಯದ ಹುಡುಗರ ಒಂದು ಸಿನಿಮಾ ಸೆಟ್ಟೇರಿದೆ. ಕನಸು ಮತ್ತು ವಾಸ್ತವದ ಮೇಲೆ ಇರುವ ಹೊಸ ಸಿನಿಮಾ ಇದೆ ಜುಲೈ 14ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಮಂಗಳೂರಿನಲ್ಲಿ ಆಡಿಯೋ ಲಾಂಚ್ ಆಗಿದೆ.
ಸುಳ್ಯದ ಉತ್ಸಾಹಿ ಯುವಕ, ಯುವಪ್ರತಿಭೆ ಶ್ರೀಮುಖ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಕನ್ನಡ ಸೊಗಡಿನ ಕನ್ನಡ ಭಾಷೆಯಲ್ಲಿ ಬಂದಿರುವ ಈ ಚಿತ್ರ ಪಕ್ಕ ಲೋಕಲ್ ಹುಡುಗನ ಕಥೆ ಇರುವ ಸಿನಿಮಾವಾಗಿದೆ. ಪಕ್ಕಾ ತಮಾಷೆಯ ಈಗಿನ ಕಾಲಘಟ್ಟಕ್ಕೆ ಸರಿಹೊಂದುವಂತಹ ಚಲನಚಿತ್ರವಾಗಿದೆ.
ಸುಳ್ಯ, ಪುತ್ತೂರು, ಮಂಗಳೂರು ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ಮಂಗಳೂರಿನಲ್ಲಿ ಹಾಡುಗಳು ಬಿಡುಗಡೆಯಾಗಿದೆ.
ಸೆವೆಂಟಿ ಸೆವೆನ್ ಸ್ಟುಡಿಯೋಸ್ ಮೂಲಕ ರಾಘವೇಂದ್ರ ಕುಡ್ವ ನಿರ್ಮಿಸಿರುವ ಈ ಸಿನಿಮಾಕ್ಕೆ ಸಿದ್ದು ಜಿ.ಎಸ್ ಅವರು ಛಾಯಾಗ್ರಹಣ ಮಾಡಿ, ಕೆ. ಎಂ ಕಾರ್ತಿಕ್ ಅವರ ಸಂಕಲನ, ಕೀರ್ತನ್ ಬಾಳಿಲ ಸಂಗೀತ ನಿರ್ದೇಶನ, ಅಕ್ಷಯ್ ರೇವಂಕರ್ ಅವರು ಸಿನಿಮಾದ ಸಹ ನಿರ್ದೇಶನ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲ್ಸ ಮಾಡಿದ್ದಾರೆ.
ನಾಯಕಿಯಾಗಿ ನಟಿ ಅನಘ ಭಟ್ ಅವರು ನಟಿಸಿದ್ದಾರೆ. ಜುಲೈ 14ಕ್ಕೆ ಬಿಡುಗಡೆ ಆಗಿ ಯಶಸ್ಸು ಪಡೆಯಲಿದೆ ಎನ್ನುವ ವಿಶ್ವಾಸ ಈ ತಂಡದ್ದು.
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…