ಪುತ್ತೂರು ಸಮಾಜದ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಯೋರ್ವರು ತನ್ನ ಸ್ವ ಇಚ್ಚೆಯಿಂದ ದೇಹದಾನಕ್ಕೆ ಹೆಸರು ನೋಂದಾಯಿಸಿದ್ದರೆ.
ಪುತ್ತೂರು ತಾಲೂಕಿನ ಚಿಕ್ಕಮೂಡ್ನೂರಿನ ತಾರಿಗುಡ್ಡೆ ವಿಠಲ ಗೌಡ ಚಿಕ್ಕಪುತ್ತೂರುರವರ ಪತ್ನಿ ದೇವಮ್ಮ (58 ವ.) ಸ್ವ ಇಚ್ಛೆಯಿಂದ ಗಂಡ ಹಾಗೂ ಅವರ ಮೂವರು ಮಕ್ಕಳ ಒಪ್ಪಿಗೆಯ ಮೆರೆಗೆ ಡಾ.ಕೆ.ವಿ ಚಿದಾನಂದ ಮಾಲಿಕತ್ವದ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ವೀಲ್ ನಾಮೆ ಯಾನೆ ಮರಣ ಶಾಸನವನ್ನು ಮಾಡಿಸಿದ್ದಾರೆ.
ನಿಧನರಾದನಂತರ ಕೆಲವೇ ಗಂಟೆಗಳಲ್ಲಿ ಭಸ್ಮವಾಗುವ ದೇಹದಿಂದ ಏನೂ ಪ್ರಯೋಜನವಿಲ್ಲ ಆದರೆ ವಿದ್ಯಾರ್ಥಿಗಳಿಗಾದರೂ ಉಪಯೋಗ ಆಗಲಿ ಎನ್ನುವ ಒಳ್ಳೆಯ ಚಿಂತನೆಯ ಮೂಲಕ ದೇಹದಾನ ಮಾಡುವುದೆಂದು ಕೆಲವು ವರ್ಷಗಳ ಹಿಂದೆಯೇ ನಿರ್ಧರಿಸಿದೆ. ಆದರೆ ಹೇಗೆ ಮಾಡುವುದೇನ್ನುವ ಮಾಹಿತಿ ಇರಲಿಲ್ಲ . ಇತ್ತಿಚೆಗೆ ಪುತ್ತೂರಿನ ವೈದ್ಯರೊಬ್ಬರು ಕೆವಿಜಿ ಮೆಡಿಕಲ್ ಕಾಲೇಜು ಸಂಪರ್ಕಿಸುವಂತೆ ಹೇಳಿದರಿಂದ ನಾನೇ ಬಂದು ಮಾಹಿತಿ ಸಂಗ್ರಹಿಸಿ, ವೀಲು ನಾಮೆ ಮಾಡಿಸಿ ಕಾಲೇಜಿಗೂ ಕೊಟ್ಟಿದ್ದೇನೆ ಎನ್ನುತ್ತಾರೆ ದೇವಮ್ಮರವರು.
ಮರಣ ಹೊಂದಿದ 5 ಗಂಟೆಯ ಒಳಗಾಗಿ ದೇಹವನ್ನು ಮೆಡಿಕಲ್ ಕಾಲೇಜಿಗೆ ಒಪ್ಪಿಸಬೇಕು ಎನ್ನುವ ನಿಯಮವಿದೆ.
ದೇವಮ್ಮ ಅವರ ಯೋಚನೆ ಬಹಳಷ್ಟು ದೃಡ ನಿರ್ಧರವಾಗಿದ್ದು, ಅದರಿಂದಾಗಿ ನೂರಾರು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ವೈದ್ಯರಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ತಿಳಿಸಿದ್ದಾರೆ.
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…
ಗುಟ್ಕಾ ಮತ್ತು ಪಾನ್ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…
ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…