Advertisement
Opinion

ತಾಜಾ ಹಾಲೇ ಅತ್ಯಂತ ಶ್ರೇಷ್ಠ | ಕೆಲವೇ ವರ್ಷಗಳಲ್ಲಿ ಶುದ್ಧ ಹಾಲಿಗಾಗಿ ಮುಂಗಡ ಬುಕ್ ಮಾಡಿ ಕಾಯುವ ಸ್ಥಿತಿ ಒದಗಬಹುದು..!

Share

ಹಾಲು(Milk) ಅತ್ಯಂತ ಸೂಕ್ಷ್ಮ ವಸ್ತು. ಅತ್ಯಂತ ಸ್ವಚ್ಛ ಸ್ಥಿತಿಯಲ್ಲಿ ಇಟ್ಟರೂ, ಅದನ್ನು ಹಾಳು ಮಾಡಲು ವಾತಾವರಣದ ಬ್ಯಾಕ್ಟೀರಿಯಾಗಳು(Bacteria) ಸಾಕು. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ. (ಪಶು ವೈದ್ಯರೊಬ್ಬರು ಹೇಳಿದ್ದು) ಹೈನುಗಾರಿಕೆಯೇ(Dairy farming) ಪ್ರಧಾನವಾದ ವಿದೇಶಗಳಲ್ಲಿ, ಅತ್ಯಂತ hygienic, sterilized ಸ್ಥಿತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಕೂಡಾ ಕೆಚ್ಚಲುಬಾವು ರೋಗ ಬಾಧಿಸುತ್ತದೆ. ಈ ವಿಷಯವನ್ನು ಹಾಲು ಎಷ್ಟೊಂದು ಸೂಕ್ಷ್ಮ ಪ್ರತಿಕ್ರಿಯೆಯ ವಸ್ತು ಎನ್ನುವುದಕ್ಕೆ ಉದಾಹರಣೆಯಾಗಿ ಹೇಳಿದೆ. ಹೇಳಬೇಕಾದ ಮುಖ್ಯ ವಿಚಾರ ಮುಂದಿದೆ.

ತರಕಾರಿಗಳು(Vegetable) ಬೇಯಿಸುವಾಗ ಪೋಷಕಾಂಶಗಳು ನಷ್ಟವಾಗುತ್ತದೆ. ಅದನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಕೆಲವೊಂದು ನಿಯಮಗಳಿವೆ. ಇದೇ ಥಿಯರಿಯನ್ನು ಹಾಲಿಗೆ ಅನ್ವಯಿಸಿ ನೋಡಿ. ಆಗಷ್ಟೇ ಕರೆದ ನೊರೆ ಹಾಲು ಉತ್ಕೃಷ್ಟ ಗುಣಮಟ್ಟದ ಪೇಯ. ಆದರೆ ಹಾಲು ಕರೆಯುವ ವಿಚಾರದಲ್ಲಿ ಕಟ್ಟುನಿಟ್ಟಿನ ಸ್ವಚ್ಛತಾ ನಿಯಮಗಳನ್ನು ಪಾಲಿಸಬೇಕು.

ರೈತರು ಕರೆದ ಹಾಲನ್ನು ನಿಯಮಿತ ಅವಧಿಯ ಒಳಗೆ ಸ್ಟೀಲ್ ಕ್ಯಾನ್ ಗಳಲ್ಲಿ ತುಂಬಿ ಹಾಲಿನ ಡಿಪೋಗಳಿಗೆ ತಲುಪಿಸುವುದು. ಅದನ್ನು ಅಷ್ಟೇ ಶೀಘ್ರವಾಗಿ ಶೀತಲೀಕರಣ ಘಟಕಗಳಿಗೆ ವರ್ಗಾವಣೆ. ಮುಂದೆ ಅಂಥದ್ದೇ ಸಾಗಾಟ ವಾಹನಗಳ ಮೂಲಕ ಸಂಗ್ರಹ ಕೇಂದ್ರಕ್ಕೆ ವರ್ಗಾವಣೆ. ಅಲ್ಲಿ ಹಾಲಿನ ಪ್ಯಾಸ್ಚರೈಸೇಷನ್ ಮುಂತಾದ ಪ್ರಕ್ರಿಯೆಗಳಿಗೆ ಒಳಪಡಿಸಿ ದಾಸ್ತಾನು ಮಾಡುವುದು. ಈ ರೀತಿಯ ಶಿಸ್ತು ಬದ್ಧವಾಗಿ ಸಂಸ್ಕರಿಸಿದ ಹಾಲು ನಮಗೆ “ನಂದಿನಿ”ಯ ಮೂಲಕ ದೊರಕುತ್ತಿರುವುದು. ಇಲ್ಲಿ ಆಧುನಿಕ ಯಂತ್ರಗಳು, ವೃತ್ತಿ ಪರಿಣತರು, ಎಲ್ಲಾ ಸೌಲಭ್ಯಗಳು ಲಭ್ಯವಿರುವ ಕಾರಣ ಮತ್ತು ಇದೊಂದು ಸಾಕಷ್ಟು ಬಂಡವಾಳ ಉಳ್ಳ ಸಹಕಾರಿ ಸಂಸ್ಥೆಯಾದ ಕಾರಣ., ಯಾವುದೇ ಸಂಶಯವಿಲ್ಲದೆ ಈ ಹಾಲು ಬಳಸಬಹುದು.

ಕೆಲವೊಂದು ಖಾಸಗಿ ಸಂಸ್ಥೆಗಳು ಮಾರಾಟ ಮಾಡುವ ಹಾಲು ಪರಿಶುದ್ಧವಾಗಿಲ್ಲದಿರುವ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿತ್ತು. “ಸಂಗ್ರಹ ಮತ್ತು ವಿತರಣೆ” ವ್ಯವಸ್ಥೆಯ ಸರಪಳಿಯೇ ಸರಿಯಾಗಿಲ್ಲದ ಸಂಸ್ಥೆಗಳು/ಕಂಪೆನಿಗಳು, ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಹಾಲು ಸರಬರಾಜು ಮಾಡುವ ಶಕ್ತಿ ಹೊಂದಿವೆ ಎಂದ ಮೇಲೆ ಅವರನ್ನು ಸಂಶಯಿಸಬೇಕಾದದ್ದೇ. ಸಂಗ್ರಹ ಮತ್ತು ಸಂಸ್ಕರಣೆಯ ದಾರಿ ವೆಚ್ಚದಾಯಕವಾದುದರಿಂದ ಕಲಬೆರಕೆ ಅಥವಾ ರಾಸಾಯನಿಕ ವಸ್ತುಗಳ ಬೆರಕೆ ಮೂಲಕ ಹಾಲು ಸಂಗ್ರಹ ಮತ್ತು ದಾಸ್ತಾನು ಸುಲಭ ಮತ್ತು ಕಡಿಮೆ ವೆಚ್ಚದ ದಾರಿ.

ಅರ್ಧ ಅಥವಾ ಒಂದು ಲೀಟರ್ ಹಾಲು ಖರೀದಿಸಿ ಬಳಸುವವರಿಗೆ ಕಲಬೆರಕೆಯ ಅನುಭವ ಕಷ್ಟ. ಈ ಕಲಬೆರಕೆಯಲ್ಲಿ ಬಳಸುವ ರಾಸಾಯನಿಕಗಳು ತಕ್ಷಣ ಪ್ರಭಾವ ಬೀರದೇ ಇರಬಹುದು ಅಥವಾ ದೀರ್ಘ ಕಾಲದ ನಂತರ ಸಮಸ್ಯೆಗಳನ್ನು ತಂದೊಡ್ಡಬಹುದು ಅಥವಾ ಇದು ಹಾಲಿನ ಉತ್ಪನ್ನಗಳ ಬಳಕೆಯಿಂದ ಬಂದ ಸಮಸ್ಯೆ ಎಂದು ತಿಳಿಯದೆಯೂ ಇರಬಹುದು. ಆದುದರಿಂದ ನಂಬಲರ್ಹ, ರೈತರ ನೇರ ಸಂಪರ್ಕ ಇರುವ ನಂದಿನಿ ಹಾಲನ್ನೇ ಬಳಸಿ ಎನ್ನುವ ಸಲಹೆ, ಕೋರಿಕೆ.

ತಾಜಾ ಹಾಲೇ ಅತ್ಯಂತ ಶ್ರೇಷ್ಠ. ಆದರೆ ಹೈನುಗಾರಿಕೆ/ಹೈನೋದ್ಯಮ ಪತನದ ದಾರಿಯಲ್ಲಿ ಸಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಅತ್ತ ಬಿಡಲೂ ಆಗದೇ ಮುಂದುವರಿಸಲೂ ಆಗದೆ ಒದ್ದಾಡುವ ತ್ರಿಶಂಕು ಸ್ಥಿತಿ ರೈತರದ್ದು. ಯುವ ಪೀಳಿಗೆಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ. ಕೆಲವೇ ವರ್ಷಗಳಲ್ಲಿ ಶುದ್ಧ ಹಾಲಿಗಾಗಿ ಮುಂಗಡ ಬುಕ್ ಮಾಡಿ ಕಾಯುವ ಸ್ಥಿತಿ ಬರಲಿದೆ ಎನ್ನುವ ಸ್ಪಷ್ಟ ವಾಕ್ಯದೊಂದಿಗೆ..

ಬರಹ :
ರಾಮಚಂದ್ರ ಕಂಜರ್ಪಣೆ, ಮಡ್ಯಾಂತಾರು
,  (ಅವರ ಫೇಸ್‌ಬುಕ್‌ ವಾಲ್ನಿಂದ)
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

6 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

14 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

18 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago