ಇದೊಂದು ಗೋವಿನ ಕಥೆ. ರಸ್ತೆ ಬದಿಯಲ್ಲಿ ಕಾಲು ಮುರಿದು ಬಿದ್ದ ಸ್ಥಿತಿಯಲ್ಲಿದ್ದ ಹೋರಿಯನ್ನು ಗೋಪ್ರೇಮಿಗಳು ರಕ್ಷಣೆ ಮಾಡಿದ್ದರು. ಇದೀಗ ಈ ಗೋವಿಗೆ ಪ್ಲಾಸ್ಟರ್ ಹಾಕಿ ಬ್ಯಾಂಡೇಜ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಿಗೂ ಈಗ ವಿಶ್ರಾಂತಿ. 24 ದಿನಗಳಿಂದ ನಿರಂತರ ಚಿಕಿತ್ಸೆ ಮುಂದುವರಿದಿದೆ.
ಗೋವು ಎಂದರೆ ಪ್ರೀತಿ ಮಾತ್ರವಲ್ಲ ಕೃಷಿಕರಿಗೆ ಅದೊಂದು ಭಾವನಾತ್ಮಕ ಸಂಬಂಧ. ಹಾಗಿದ್ದರೂ ಹೋರಿಗಳು ಕಟುಕರ ಪಾಲಾಗುವುದು ಇದ್ದೇ ಇದೆ. ಅದೇಗೋ ಸುಬ್ರಹ್ಮಣ್ಯದ ಬಳಿ ಕಾಲು ಕಟ್ಟಿದ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಹೋರಿಯ ಕಾಲು ಮುರಿದುಕೊಂಡಿತ್ತು. ಸ್ಥಳೀಯರು ಹಾಗೂ ಗೋಪ್ರೇಮಿಗಳು ರಕ್ಷಣೆ ಮಾಡಿದರು. ಆ ಬಳಿಕ ಪಶುವೈದ್ಯ ಡಾ.ವೆಂಕಟಾಚಲಪತಿ ಅವರ ಮೂಲಕ ಚಿಕಿತ್ಸೆ ನಡೆಯಿತು.
ಈಗ ಗೋವಿನ ಕಾಲು ಸರಿ ಮಾಡುವುದಕ್ಕೆ ಪ್ಲಾಸ್ಟರ್ ಹಾಕಿ ಮಲಗಿಸಲಾಗಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗೂ ಅತ್ಯಂತ ಚೆನ್ನಾಗಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಡಾದ ಕಾಲಿಗೆ ಪ್ಲಾಸ್ಟರ್ ಹಾಕಿ ಕಾಲು ಕಟ್ಟಲಾಗಿದೆ. ಸದ್ಯ ಸುಬ್ರಹ್ಮಣ್ಯದ ಕಲ ವಿಲೇವಾರಿ ಘಟಕದ ಬಳಿಯಲ್ಲಿ ಆಶ್ರಯ ಪಡೆದಿರುವ ಈ ಹೋರಿಗೆ ಸ್ಥಳೀಯರು ಹುಲ್ಲು, ನೀರು ನೀಡುತ್ತಾರೆ, ಪಶುವೈದ್ಯ ಡಾ.ವೆಂಕಟಾಚಲಪತಿ ನಿತ್ಯವೂ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ( ವಿಡಿಯೋ ಇಲ್ಲಿದೆ….. )
ಮನುಷ್ಯರಷ್ಟೇ ಕೇರ್ ತೆಗೆದುಕೊಂಡು ಚಿಕಿತ್ಸೆ ನೀಡುವುದು ಗೋ ಪ್ರೇಮಿಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ವೈದ್ಯರು ಸಾರಿ ಹೇಳಿದರೆ, ರಕ್ಷಣೆಯ ಬಳಿಕ ನಿತ್ಯವೂ ಹುಲ್ಲು, ನೀರು ನೀಡುವ ಆ ತಂಡ ನಿಜವಾದ ಗೋಸೇವೆಯಲ್ಲಿ ಈಗ ತೊಡಗಿಸಿಕೊಂಡಿದೆ. ಕಳೆದ 24 ದಿನಗಳಿಂದ ಡಾ.ವೆಂಕಟಾಚಲಪತಿ, ಅಂಬರೀಶ್ ಹಾಗೂ ಸ್ಥಳೀಯರಾದ ಶೇಖರ ಸುಬ್ರಹ್ಮಣ್ಯ, ಶರತ್ ಕೊಲ್ಲಮೊಗ್ರ, ಅಶ್ವತ್ಥ್ ಬಿಳಿನೆಲೆ ಸೇವೆ ಮಾಡುತ್ತಿದ್ದಾರೆ.
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…
ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…
ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…