MIRROR FOCUS

ಒಂದು ಗೋವಿನ ಕಥೆ…. ! | ತುಂಡಾದ ಗೋವಿನ ಕಾಲಿಗೆ ಪ್ಲಾಸ್ಟರ್‌ | 24 ದಿನಗಳಿಂದ ನಿರಂತರ ಚಿಕಿತ್ಸೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೊಂದು ಗೋವಿನ ಕಥೆ. ರಸ್ತೆ ಬದಿಯಲ್ಲಿ ಕಾಲು ಮುರಿದು ಬಿದ್ದ ಸ್ಥಿತಿಯಲ್ಲಿದ್ದ ಹೋರಿಯನ್ನು ಗೋಪ್ರೇಮಿಗಳು ರಕ್ಷಣೆ ಮಾಡಿದ್ದರು. ಇದೀಗ ಈ ಗೋವಿಗೆ ಪ್ಲಾಸ್ಟರ್‌ ಹಾಕಿ ಬ್ಯಾಂಡೇಜ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಿಗೂ ಈಗ ವಿಶ್ರಾಂತಿ. 24 ದಿನಗಳಿಂದ ನಿರಂತರ ಚಿಕಿತ್ಸೆ ಮುಂದುವರಿದಿದೆ.

Advertisement

ಗೋವು ಎಂದರೆ ಪ್ರೀತಿ ಮಾತ್ರವಲ್ಲ ಕೃಷಿಕರಿಗೆ ಅದೊಂದು ಭಾವನಾತ್ಮಕ ಸಂಬಂಧ. ಹಾಗಿದ್ದರೂ ಹೋರಿಗಳು ಕಟುಕರ ಪಾಲಾಗುವುದು ಇದ್ದೇ ಇದೆ. ಅದೇಗೋ ಸುಬ್ರಹ್ಮಣ್ಯದ ಬಳಿ ಕಾಲು ಕಟ್ಟಿದ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಹೋರಿಯ ಕಾಲು ಮುರಿದುಕೊಂಡಿತ್ತು. ಸ್ಥಳೀಯರು ಹಾಗೂ ಗೋಪ್ರೇಮಿಗಳು ರಕ್ಷಣೆ ಮಾಡಿದರು. ಆ ಬಳಿಕ ಪಶುವೈದ್ಯ ಡಾ.ವೆಂಕಟಾಚಲಪತಿ ಅವರ ಮೂಲಕ ಚಿಕಿತ್ಸೆ ನಡೆಯಿತು.

ಈಗ ಗೋವಿನ ಕಾಲು ಸರಿ ಮಾಡುವುದಕ್ಕೆ ಪ್ಲಾಸ್ಟರ್‌ ಹಾಕಿ ಮಲಗಿಸಲಾಗಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗೂ ಅತ್ಯಂತ ಚೆನ್ನಾಗಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಡಾದ ಕಾಲಿಗೆ ಪ್ಲಾಸ್ಟರ್‌ ಹಾಕಿ ಕಾಲು ಕಟ್ಟಲಾಗಿದೆ. ಸದ್ಯ ಸುಬ್ರಹ್ಮಣ್ಯದ ಕಲ ವಿಲೇವಾರಿ ಘಟಕದ ಬಳಿಯಲ್ಲಿ ಆಶ್ರಯ ಪಡೆದಿರುವ ಈ ಹೋರಿಗೆ ಸ್ಥಳೀಯರು ಹುಲ್ಲು, ನೀರು ನೀಡುತ್ತಾರೆ, ಪಶುವೈದ್ಯ ಡಾ.ವೆಂಕಟಾಚಲಪತಿ ನಿತ್ಯವೂ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ( ವಿಡಿಯೋ ಇಲ್ಲಿದೆ….. )

Advertisement

 

Advertisement

ಮನುಷ್ಯರಷ್ಟೇ ಕೇರ್‌ ತೆಗೆದುಕೊಂಡು ಚಿಕಿತ್ಸೆ ನೀಡುವುದು ಗೋ ಪ್ರೇಮಿಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ವೈದ್ಯರು ಸಾರಿ ಹೇಳಿದರೆ, ರಕ್ಷಣೆಯ ಬಳಿಕ ನಿತ್ಯವೂ ಹುಲ್ಲು, ನೀರು ನೀಡುವ ಆ ತಂಡ ನಿಜವಾದ ಗೋಸೇವೆಯಲ್ಲಿ ಈಗ ತೊಡಗಿಸಿಕೊಂಡಿದೆ. ಳೆದ 24  ದಿನಗಳಿಂದ ಡಾ.ವೆಂಕಟಾಚಲಪತಿ, ಅಂಬರೀಶ್‌ ಹಾಗೂ ಸ್ಥಳೀಯರಾದ ಶೇಖರ ಸುಬ್ರಹ್ಮಣ್ಯ, ಶರತ್ ಕೊಲ್ಲಮೊಗ್ರ, ಅಶ್ವತ್ಥ್‌ ಬಿಳಿನೆಲೆ  ಸೇವೆ ಮಾಡುತ್ತಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

6 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

6 hours ago

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

12 hours ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

12 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

20 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

20 hours ago