ಓ ಮೊನ್ನೆ ಮೊನ್ನೆಯಷ್ಟೇ ಸಂದಿದೆ ಕೌಮಾರ್ಯ
ನಿನ್ನೆ ನಿನ್ನೆಯಷ್ಟೇ ದಾಟಿತಲ್ಲಾ ಯೌವ್ವನಕಾಲ
ಅದೋ ಸಲ್ಲುತ್ತಿದೆ ವಯಸ್ಸು ಮಧ್ಯ
ಬಾಕಿಯದು ಒಂದೇ ವೃದ್ಧಾಪ್ಯ
ಇಷ್ಟೇ ಇಹುದಲ್ಲಾ ಬದುಕೆಂಬ ಭಾಗ್ಯ
ಎಮ್ಮ ಬಿಡದಲ್ಲಾ ಆಸೆಯೆಂಬ ಪಾಶ
ಆದರದುವೇ ತಾನೇ ಬಾಳ ನಿರ್ದೇಶಕ
ಈ ಜಗದ ಚಿತ್ರದಲಿ ಬದುಕದೆಷ್ಟು ವಿಚಿತ್ರ
ಅನ್ನಿಸಿತಲ್ಲಾ ನಿನಗೂ ಅದು ಶ್ರೀರಾಮಚಂದ್ರ
ನಮಗೂ ಹಾಗನಿಸುವುದು ಮತ್ತೆ ಅದಾವ ಲೆಕ್ಕ ದಯಾಸಾಂದ್ರ
ನಿನ್ನಾವತಾರಕ್ಕೆ ಪಾರವುಂಟೇ ಶ್ರೀರಾಮ
ಎಮ್ಮ ತೊಳಲಾಟಕ್ಕೆ ಗತಿಮಿತಿಯುಂಟೇ ದೇವ
ಇನ್ನೆಷ್ಟು ಕಾಲ ಈ ಬದುಕ ಲೆಕ್ಕ
ಆರರಿತಿಹರು ಆ ಬೊಮ್ಮನ ಪಕ್ಕಾ ಲೆಕ್ಕ
ಬಾಳಬೆಳಗಿನಲಿ ನೋಡಲದೇನು ಬೆರಗು
ಮಧ್ಯಾಹ್ನದಲಿ ಅದೋ ಅದೇನು ಹಸಿವು
ಸಂಜೆಯದು ಎಂತಿಹುದೋ ಎಂಬ ಆತಂಕವು
ಕಾಡದಿರಲೆಂಬ ಸಂಪ್ರಾರ್ಥನೆಯು ಆ ದೇವನೆದುರು
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
This reflective Kannada poem portrays the journey from youth to old age, reminding us that life passes quickly while desires continue to bind us. It reflects on destiny, human longing, and the search for peace, concluding that the true measure of life lies in its meaning, not its length.
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…
ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…
ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…