Advertisement
ಸುದ್ದಿಗಳು

ಬಾಳ ಮಧ್ಯಾಹ್ನದ ಲಹರಿ

Share

ಓ ಮೊನ್ನೆ ಮೊನ್ನೆಯಷ್ಟೇ ಸಂದಿದೆ ಕೌಮಾರ್ಯ
ನಿನ್ನೆ ನಿನ್ನೆಯಷ್ಟೇ ದಾಟಿತಲ್ಲಾ ಯೌವ್ವನಕಾಲ
ಅದೋ ಸಲ್ಲುತ್ತಿದೆ ವಯಸ್ಸು ಮಧ್ಯ
ಬಾಕಿಯದು ಒಂದೇ ವೃದ್ಧಾಪ್ಯ
ಇಷ್ಟೇ ಇಹುದಲ್ಲಾ ಬದುಕೆಂಬ ಭಾಗ್ಯ
ಎಮ್ಮ ಬಿಡದಲ್ಲಾ ಆಸೆಯೆಂಬ ಪಾಶ
ಆದರದುವೇ ತಾನೇ ಬಾಳ ನಿರ್ದೇಶಕ

ಈ ಜಗದ ಚಿತ್ರದಲಿ ಬದುಕದೆಷ್ಟು ವಿಚಿತ್ರ
ಅನ್ನಿಸಿತಲ್ಲಾ ನಿನಗೂ ಅದು ಶ್ರೀರಾಮಚಂದ್ರ
ನಮಗೂ ಹಾಗನಿಸುವುದು ಮತ್ತೆ ಅದಾವ ಲೆಕ್ಕ ದಯಾಸಾಂದ್ರ
ನಿನ್ನಾವತಾರಕ್ಕೆ ಪಾರವುಂಟೇ ಶ್ರೀರಾಮ
ಎಮ್ಮ ತೊಳಲಾಟಕ್ಕೆ ಗತಿಮಿತಿಯುಂಟೇ ದೇವ
ಇನ್ನೆಷ್ಟು ಕಾಲ ಈ ಬದುಕ ಲೆಕ್ಕ
ಆರರಿತಿಹರು ಆ ಬೊಮ್ಮನ ಪಕ್ಕಾ ಲೆಕ್ಕ

ಬಾಳಬೆಳಗಿನಲಿ ನೋಡಲದೇನು ಬೆರಗು
ಮಧ್ಯಾಹ್ನದಲಿ ಅದೋ ಅದೇನು ಹಸಿವು
ಸಂಜೆಯದು ಎಂತಿಹುದೋ ಎಂಬ ಆತಂಕವು
ಕಾಡದಿರಲೆಂಬ ಸಂಪ್ರಾರ್ಥನೆಯು ಆ ದೇವನೆದುರು

ಬರಹ :
ಜಯಪ್ರಕಾಶ ಎ ನಾಕೂರು

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

This reflective Kannada poem portrays the journey from youth to old age, reminding us that life passes quickly while desires continue to bind us. It reflects on destiny, human longing, and the search for peace, concluding that the true measure of life lies in its meaning, not its length.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

1 hour ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

4 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

5 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

8 hours ago

ಮುಂಬೈನಲ್ಲಿ ಭಾರೀ ಮಳೆ ಅಬ್ಬರ – ರೆಡ್ ಅಲರ್ಟ್ ಮುಂದುವರಿಕೆ, ಜನಜೀವನ ಅಸ್ತವ್ಯಸ್ತ

ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…

17 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?

ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…

18 hours ago