Advertisement
ಸುದ್ದಿಗಳು

ಬಾಳ ಮಧ್ಯಾಹ್ನದ ಲಹರಿ

Share

ಓ ಮೊನ್ನೆ ಮೊನ್ನೆಯಷ್ಟೇ ಸಂದಿದೆ ಕೌಮಾರ್ಯ
ನಿನ್ನೆ ನಿನ್ನೆಯಷ್ಟೇ ದಾಟಿತಲ್ಲಾ ಯೌವ್ವನಕಾಲ
ಅದೋ ಸಲ್ಲುತ್ತಿದೆ ವಯಸ್ಸು ಮಧ್ಯ
ಬಾಕಿಯದು ಒಂದೇ ವೃದ್ಧಾಪ್ಯ
ಇಷ್ಟೇ ಇಹುದಲ್ಲಾ ಬದುಕೆಂಬ ಭಾಗ್ಯ
ಎಮ್ಮ ಬಿಡದಲ್ಲಾ ಆಸೆಯೆಂಬ ಪಾಶ
ಆದರದುವೇ ತಾನೇ ಬಾಳ ನಿರ್ದೇಶಕ

ಈ ಜಗದ ಚಿತ್ರದಲಿ ಬದುಕದೆಷ್ಟು ವಿಚಿತ್ರ
ಅನ್ನಿಸಿತಲ್ಲಾ ನಿನಗೂ ಅದು ಶ್ರೀರಾಮಚಂದ್ರ
ನಮಗೂ ಹಾಗನಿಸುವುದು ಮತ್ತೆ ಅದಾವ ಲೆಕ್ಕ ದಯಾಸಾಂದ್ರ
ನಿನ್ನಾವತಾರಕ್ಕೆ ಪಾರವುಂಟೇ ಶ್ರೀರಾಮ
ಎಮ್ಮ ತೊಳಲಾಟಕ್ಕೆ ಗತಿಮಿತಿಯುಂಟೇ ದೇವ
ಇನ್ನೆಷ್ಟು ಕಾಲ ಈ ಬದುಕ ಲೆಕ್ಕ
ಆರರಿತಿಹರು ಆ ಬೊಮ್ಮನ ಪಕ್ಕಾ ಲೆಕ್ಕ

ಬಾಳಬೆಳಗಿನಲಿ ನೋಡಲದೇನು ಬೆರಗು
ಮಧ್ಯಾಹ್ನದಲಿ ಅದೋ ಅದೇನು ಹಸಿವು
ಸಂಜೆಯದು ಎಂತಿಹುದೋ ಎಂಬ ಆತಂಕವು
ಕಾಡದಿರಲೆಂಬ ಸಂಪ್ರಾರ್ಥನೆಯು ಆ ದೇವನೆದುರು

ಬರಹ :
ಜಯಪ್ರಕಾಶ ಎ ನಾಕೂರು

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

This reflective Kannada poem portrays the journey from youth to old age, reminding us that life passes quickly while desires continue to bind us. It reflects on destiny, human longing, and the search for peace, concluding that the true measure of life lies in its meaning, not its length.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

23 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago