Advertisement
ಸುದ್ದಿಗಳು

ಜೆಡಿಎಸ್​​ 2ನೇ ಪಟ್ಟಿ| ಹಾಸನದಲ್ಲಿ ಭವಾನಿ ಬದಲು ಸ್ವರೂಪ್​, ಕಡೂರಲ್ಲಿ ದತ್ತಗೆ ಟಿಕೆಟ್​ |

Share

ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್​​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಜೆಡಿಎಸ್‌ (JDS) ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌ ಸಿಕ್ಕಿದೆ.

ಕಡೂರಿನಿಂದ ವೈಎಸ್‌ವಿ ದತ್ತಾ (YSV Datta), ಅಥಣಿಯಿಂದ ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌ಡಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.  ಹಾಸನದ ಅರಸೀಕೆರೆ (Arsikere) ಕ್ಷೇತ್ರವೊಂದನ್ನು ಬಿಟ್ಟು  ಉಳಿದ ಎಲ್ಲಾ ಕ್ಷೇತ್ರಗಳಿಗೆ ಜೆಡಿಎಸ್‌ ಟಿಕೆಟ್‌ ಫೈನಲ್‌ ಮಾಡಿದೆ.

ಜೆಡಿಎಸ್‌ ನಾಯಕ, ಹಾಲಿ ಶಾಸಕ ಶಿವಲಿಂಗೇಗೌಡ  ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಇನ್ನೂ ಸರಿಯಾದ ಅಭ್ಯರ್ಥಿಯನ್ನು ಜೆಡಿಎಸ್‌ ಹುಡುಕಾಡುತ್ತಿದೆ.

ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು?
1 ಕುಡಚಿ- ಆನಂದ್ ಮಾಳಗಿ
2 ರಾಯಭಾಗ- ಪ್ರದೀಪ್ ಮಾಳಗಿ
3 ವದತ್ತಿ- ಸೌರಬ್ ಚೊಪ್ರಾ
4 ಅಥಣಿ- ಶ್ರೀ ಶಶಿಕಾಂತ್ ಪಡಸಲಿಗಿ ಗುರುಗಳು
5 ಹುಬ್ಬಳ್ಳಿ – ಧಾರವಾಡ ಪೂರ್ವ- ವೀರಭದ್ರಪ್ಪ ಹಾಲರವಿ
6 ಕುಮಟಾ- ಸೂರಜ್ ಸೋನಿ ನಾಯಕ್
7 ಹಳಿಯಾಳ- ಎಸ್‌. ಎಲ್‌. ಘೊಟ್ನೋಕರ್
8 ಭಟ್ಕಳ- ನಾಗೇಂದ್ರ ನಾಯಕ್
9 ಶಿರಸಿ- ಸಿದ್ದಾಪುರ- ಉಪೇಂದ್ರ ಪೈ
10 ಯಲ್ಲಾಪುರ- ಡಾ. ನಾಗೇಶ್ ನಾಯಕ್

11 ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
12 ಕಲಬುರ್ಗಿ ಉತ್ತರ- ನಾಸೀರ್ ಹುಸೇನ್ ಉಸ್ತಾದ್
13 ಬಳ್ಳಾರಿ ನಗರ- ಅಲ್ಲಾಭಕ್ಷ್ ಅಲಿಯಾಸ್ ಮುನ್ನ
14 ಹಗರಿಬೊಮ್ಮನಹಳ್ಳಿ – ಪರಮೇಶ್ವರಪ್ಪ
15 ಹರಪ್ಪನಹಳ್ಳಿ- ಎನ್‌. ಎಂ. ನೂರ್ ಅಹಮದ್
16 ಸಿರಗುಪ್ಪ- ಪರಮೇಶ್ವರ್ ನಾಯಕ್
17 ಕಂಪ್ಲಿ- ರಾಜು ನಾಯಕ್
18 ಕೊಳ್ಳೇಗಾಲ- ಪುಟ್ಟಸ್ವಾಮಿ
19 ಗುಂಡ್ಲುಪೇಟೆ- ಕಡಬೂರು ಮಂಜುನಾಥ್
20 ಕಾಪು- ಸಬೀನಾ ಸಮದ್

21 ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
22 ಉಡುಪಿ- ದಕ್ಷತ್ ಆರ್. ಶೆಟ್ಟಿ
23 ಬೈಂದೂರು- ಮನ್ಸೂರ್ ಇಬ್ರಾಹಿಂ
24 ಕುಂದಾಪುರ-ರಮೇಶ್ ಕುಂದಾಪುರ
25 ಮಂಗಳೂರು ದಕ್ಷಿಣ- ಸುಮತಿ ಹೆಗಡೆ
26 ಕನಕಪುರ- ನಾಗರಾಜು
27 ಯಲಹಂಕ- ಮುನೇಗೌಡ
28 ಸರ್ವಜ್ಞ ನಗರ- ಮೊಹಮ್ಮದ್ ಮುಸ್ತಾಫ್
29 ಯಶವಂತಪುರ- ಜವರಾಯೀಗೌಡ
30 ತಿಪಟೂರು- ಶಾಂತಕುಮಾರ್

31 ಶಿರಾ- ಆರ್.ಉಗ್ರೇಶ್
32 ಹಾನಗಲ್- ಮನೋಹರ ತಹಸೀಲ್ದಾರ್
33 ಸಿಂದಗಿ- ವಿಶಾಲಕ್ಷಿ ಶಿವಾನಂದ
34 ಗಂಗಾವತಿ- ಹೆಚ್‌. ಆರ್‌ ಚನ್ನಕೇಶವ
35 ಹೆಚ್‌.ಡಿ ಕೋಟೆ- ಜಯಪ್ರಕಾಶ್
36 ಜೇವರ್ಗಿ- ದೊಡಪ್ಪಗೌಡ ಶಿವಲಿಂಗಪ್ಪಗೌಡ
37 ಶಹಾಪುರ- ಗುರುಲಿಂಗಪ್ಪಗೌಡ
38 ಕಾರವಾರ- ಚೈತ್ರ ಕೋಟಾಕರ್
39 ಪುತ್ತೂರು- ದಿವ್ಯಪ್ರಭ
40 ಕಡೂರು- ವೈ.ಎಸ್.ವಿ ದತ್ತಾ

41 ಹೊಳೆನರಸೀಪುರ – ಹೆಚ್‌.ಡಿ ರೇವಣ್ಣ
42 ಬೇಲೂರು – ಕೆ.ಎಸ್‌ ಲಿಂಗೇಶ್
43 ಸಕಲೇಶಪುರ – ಹೆಚ್‌.ಕೆ ಕುಮಾರಸ್ವಾಮಿ
44 ಅರಕಲಗೂಡು- ಎ. ಮಂಜು
45 ಹಾಸನ- ಸ್ವರೂಪ್ ಪ್ರಕಾಶ್‌
46 ಶ್ರವಣಬೆಳಗೊಳ- ಸಿ.ಎನ್‌ ಬಾಲಕೃಷ್ಣ
47 ಮಹಾಲಕ್ಷ್ಮಿ ಲೇಔಟ್- ರಾಜಣ್ಣ
48 ಹಿರಿಯೂರು- ರವೀಂದ್ರಪ್ಪ
49 ಮಾಯಕೊಂಡ- ಆನಂದಪ್ಪ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

14 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

22 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

3 days ago