Advertisement
ಅನುಕ್ರಮ

ಕವನ | ಬದುಕು ಮತ್ತು ಸಾವು

Share

ಹುಟ್ಟಿದಾಗ ದೃಷ್ಟಿ ಕಳೆದುಕೊಂಡಾತ
ಜಗತ್ತನ್ನು ಕಾಣಲಾಗಲಿಲ್ಲವೆಂದು,
ಬದುಕನ್ನು ಕಳೆದುಕೊಂಡಿದ್ದರೆ
ಜಗದಲ್ಲಿ ಕುರುಡರೇ
ಕಾಣಸಿಗುತ್ತಿರಲಿಲ್ಲ….!

ಕಿವಿಗಳಿಲ್ಲದವರು ತನ್ನವರ
ನುಡಿಗಳ ಕೇಳಿಸಿಕೊಳ್ಳಲಾಗುತ್ತಿಲ್ಲವೆಂದು
ಬದುಕಿಗೆ ಅಂತ್ಯವಿಡುತ್ತಿದ್ದರೆ
ಇಂದು ಕಿವುಡರೇ
ಕಾಣ ಸಿಗುತ್ತಿರಲಿಲ್ಲ…..!

ಪ್ರೀತಿ ಸಿಗದೇ ಇದ್ದವರೆಲ್ಲಾ,
ತಮ್ಮ ಬದುಕನ್ನು
ಅಂತ್ಯಗಾಣಿಸುತ್ತಿದ್ದರೆ,
ಅನಾಥವೆಂಬ ಪದಕೆ
ಅರ್ಥವೇ ಇರುತ್ತಿರಲಿಲ್ಲ…!

ಕಷ್ಟಕ್ಕೆ ಹೆದರಿ ಎಲ್ಲರೂ
ಬದುಕನ್ನು ಕಳೆದುಕೊಂಡಿದ್ದರೆ
ಬದುಕಿನ ಸುಂದರ ಕ್ಷಣಗಳ
ಯಾರು ಅನುಭವಿಸುತ್ತಿರಲಿಲ್ಲ..!

ಕಷ್ಟಗಳ ಬದುಕಿನ ದಾರಿಯಾಗಿಸಬೇಕು
ನೋವುಗಳನ್ನೇ ಬದುಕಿನ ಬೆಳಕಾಗಿಸಬೇಕು
ಬದುಕಿ ಏನನ್ನೂ ಸಾಧಿಸಲಾಗಲಿಲ್ಲವೆಂದ ಮೇಲೆ,
ಸತ್ತು ಸಾಧಿಸುವುದೇನಿದೆ….?

#ಅಪೂರ್ವ ಕೊಲ್ಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?

ಇಂಡೋ ಫಾಲಿ ಮತ್ತು ಬರ್ಮಾ ಗೋಟಾ ಅಡಿಕೆ ಆಮದು ಹೆಚ್ಚಾದರೂ ಮಂಗಳೂರು ಚಾಲಿ…

12 hours ago

ವೈಜ್ಞಾನಿಕ ಕೃಷಿಗೆ ಕೇಂದ್ರದ ಒತ್ತು | ರಾಜ್ಯವಾರು ಕೃಷಿ-ಹವಾಮಾನ ಮಾರ್ಗಸೂಚಿ ಸಿದ್ಧಕ್ಕೆ ವೇಗ

ರಾಜ್ಯಗಳ ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯವಾರು ಕೃಷಿ ಮಾರ್ಗಸೂಚಿ ಸಿದ್ಧಪಡಿಸಲು ಕೇಂದ್ರ ಕೃಷಿ…

13 hours ago

ಕರಾವಳಿಯಲ್ಲಿ ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ | ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಸಮುದ್ರದ ಅಲೆಗಳ ಅಬ್ಬರ ಹಾಗೂ ಗಾಳಿ ವೇಗ ಹೆಚ್ಚಾಗುವ ಸಾಧ್ಯತೆ…

13 hours ago

ಭಾರತದ ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಹಾವಳಿ..! ಮಣ್ಣಿನೊಳಗೆ ‘ಪ್ಲಾಸ್ಟಿಕ್ ವಿಷ’! ರೈತರ ಭವಿಷ್ಯಕ್ಕೆ ಮೈಕ್ರೋಪ್ಲಾಸ್ಟಿಕ್ ದೊಡ್ಡ ಎಚ್ಚರಿಕೆ

ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದನೆಗೆ ಭೀತಿ ತಂದಿದೆ.…

18 hours ago

ಹವಾಮಾನ ವರದಿ | 17-05-2026 | ಮೇ 19 ರಿಂದ ಹವಾಮಾನದಲ್ಲಿ ದೊಡ್ಡ ಬದಲಾವಣೆ ಸಾಧ್ಯ..!

ಮೇ 19 ಅಥವಾ 20ರಿಂದ ಕರ್ನಾಟಕದಲ್ಲಿ ಮುಂಗಾರು ಮಾದರಿಯ ಗಾಳಿಯ ಚಲನೆ ಆರಂಭವಾಗುವ…

21 hours ago

ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ‘ಲೈಟ್‌ ಅಬ್ಬರ’…! ಬೆಂಕಿಗಾಹುತಿಯಾದ ಬಸ್‌ ಘಟನೆ ಮತ್ತೆ ಎಚ್ಚರಿಸಿದ ಅಪಾಯದ ಗಂಟೆ..!

ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳ ಅತಿವೇಗ ಹಾಗೂ ಅತಿಯಾದ LED ಲೈಟುಗಳ ವಿರುದ್ಧ…

1 day ago