ಹಬ್ಬಗಳು ಟಾನಿಕ್ ನಂತೆ.! ಒಪ್ಪುತ್ತೀರಲ್ವಾ?
ದಿನನಿತ್ಯದ ಜಂಜಡಗಳಿಂದ ಒಂದು ಪುಟ್ಟ ಬದಲಾವಣೆ ಈ ಹಬ್ಬಗಳು. ಪೂಜೆಯ ನೆಪದಲ್ಲಿ ಒಂದಷ್ಟು ಸಿಹಿ. ಸಂಪ್ರದಾಯದ ಹೆಸರಲ್ಲಿ ಎಣ್ಣೆ ಸ್ನಾನ ದೇಹಕ್ಕೂ ಉಲ್ಲಾಸ ಮನಸಿಗೂ ಖುಷಿ. ಸದ್ಯ ಯಾವ ಹಬ್ಬಗಳೂ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶ ,ಭಾಷೆ , ಪ್ರಾಂತ್ಯ ಮೀರಿ ಆಚರಿಸಲ್ಪಡುತ್ತವೆ. ಇಂದು ಸಂಭ್ರಮಕ್ಕೊಂದು ಕಾರಣ ಹಬ್ಬಗಳು. ಸಂಕ್ರಾಂತಿಯ ವಿಶೇಷ ಎಳ್ಳು, ಬೆಲ್ಲ . ಆರೋಗ್ಯದ ದೃಷ್ಟಿಯಿಂದ ಎಳ್ಳು , ಬೆಲ್ಲ ಬಹಳಷ್ಟು ಒಳ್ಳೆಯದು. ಹಾಗಾಗಿ ಸಂಕ್ರಾಂತಿಯೊಂದು ಕಾರಣ.
ಇನ್ನು ಹೊಸ ಕ್ಯಾಲೆಂಡರ್ ವರ್ಷದ ಮೊದಲ ಸಂಭ್ರಮ .
ಈ ಸಂಕ್ರಾಂತಿ ರೈತರ ಹಬ್ಬವೆಂದೇ ಪ್ರತೀತಿ. ಬೇಸಾಯ ಮುಗಿದು ಬೆಳೆ ಕೈ ಸೇರಿದ ಸಮಯದಲ್ಲಿಯೇ ಸಂಕ್ರಾಂತಿ ಬರುವುದರಿಂದ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ಸಂಧರ್ಭವೂ ಇದಾಗಿದೆ. ಕೃಷಿ ಕೈಂಕರ್ಯದಲ್ಲಿ ಜೊತೆಯಾದ ಜಾನುವಾರುಗಳನ್ನು ಸ್ನಾನ ಮಾಡಿಸಿ , ಸಿಂಗರಿಸಿ ಪೂಜಿಸುವ ಸಂಪ್ರದಾಯವಿದೆ.
ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಿಂದ ಆಚರಿಸ್ಪಡುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಆಚರಿಸಲ್ಪಡುತ್ತವೆ. ಆಯಾ ಪ್ರಾದೇಶಿಕ ಸಂಪ್ರದಾಯಕ್ಕೆ ಹೆಚ್ಚು ಒತ್ತು ಈ ಹಬ್ಬದಲ್ಲಿ ಕಾಣಬಹುದು. ಆದರೆ ಪ್ರಕೃತಿಯ ಆರಾಧನೆಯೇ ಇಲ್ಲಿ ಎದ್ದು ಕಾಣುವುದು.ಮನೆಯವರು ಊರವರು ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿ ಸಂಭ್ರಮಿಸುವುದೇ ಹಬ್ಬದ ಘಮ್ಮತ್ತು. ಪೊಂಗಲ್ ಸಂಕ್ರಾಂತಿ ಯ ವಿಶೇಷ ಖಾದ್ಯ. ಹೆಸರುಬೇಳೆ, ಅಕ್ಕಿ, ಬೆಲ್ಲ, ತೆಂಗಿನತುರಿ, ಗೇರುಬೀಜ, ತುಪ್ಪ ಹಾಲು ಬಳಸಿ ಮಾಡುವ ಈ ಖಾದ್ಯ ಬಹಳ ರುಚಿಯಾಗಿರುತ್ತದೆ. ಬನ್ನಿ ಸಂಕ್ರಾಂತಿಯನ್ನು ಪೊಂಗಲ್ ಸವಿದು ಆಚರಿಸೋಣ. ಸಂಕ್ರಾಂತಿ ಎಲ್ಲರಿಗೂ ಒಳ್ಳಯದನ್ನೇ ಮಾಡಲಿ. ಸಂಕ್ರಾಂತಿಯ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…
23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…
ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…