ವಾರದ ಹಿಂದೆ ಮುಂದ್ರಾ ಬಂದರಿನಲ್ಲಿ ಎಣ್ಣೆಯ ಹೆಸರಿನಲ್ಲಿ ಆಮದಾಗಿದ್ದ ಅಡಿಕೆ ಪತ್ತೆಯಾಗಿತ್ತು. ಇದೀಗ ನಾಗ್ಪುರದಲ್ಲಿ ದಾಸ್ತಾನು ಇರಿಸಿದ್ದ ಸುಮಾರು 20 ಸಾವಿರ ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಲ್ಡ್ ಸ್ಟೋರೇಜ್ನಲ್ಲಿ ದಾಸ್ತಾನು ಇರಿಸಿದ್ದ ಅಡಿಕೆಯನ್ನು ಲೋಡ್ ಮಾಡುತ್ತಿದ್ದ ವೇಳೆ ಪೊಲೀಸರು ಇಪ್ಪತ್ತು ಸಾವಿರ ಕೆಜಿ ತೂಕದ 250 ಮೂಟೆಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸರಕುಗಳನ್ನು ಆಹಾರ ಮತ್ತು ಔಷಧಿಗಳ ಆಡಳಿತಕ್ಕೆ (ಎಫ್ಡಿಎ) ಹಸ್ತಾಂತರಿಸಲಾಗಿದೆ.
ಮಧ್ಯ ಭಾರತದ ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶ, ಗುಜರಾತ್ ಮೊದಲಾದ ಪ್ರದೇಶಗಳು ಅಡಿಕೆ ಪೂರೈಕೆಯ ಪ್ರಮುಖ ಕೇಂದ್ರಗಳು. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ವ್ಯವಹಾರ ನಡೆಯುತ್ತದೆ. ಈಚೆಗೆ ಕೆಲವು ವ್ಯಾಪಾರಿಗಳು ವಿದೇಶದ ಅಡಿಕೆಯನ್ನು ಬೃಹತ್ ಪ್ರಮಾಣದಲ್ಲಿ ಕಳ್ಳ ದಾರಿಯ ಮೂಲಕ ಅಥವಾ ನಕಲಿ ಹೆಸರಿನಲ್ಲಿ ಅಡಿಕೆ ಆಮದು ಮಾಡುತ್ತಿರುವುದು ಬೆಳೆಕಿಗೆ ಬಂದಿದೆ. ಹೀಗಾಗಿ ತಪಾಸಣೆ ಬಿಗುಗೊಂಡಿದೆ. ಕೆಲವು ವ್ಯಾಪಾರಿಗಳು, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಶ್ರೀಲಂಕಾದಿಂದ ಕಡಿಮೆ ವೆಚ್ಚದಲ್ಲಿ ಕೆಳದರ್ಜೆಯ ಅಡಿಕೆಯನ್ನು ಕಳ್ಳಸಾಗಣೆ ಮಾಡುತ್ತಾರೆ, ಅವುಗಳನ್ನು ರಾಸಾಯನಿಕ ಸಿಹಿಕಾರಕಗಳು ಮತ್ತು ಸುವಾಸನೆಗಳೊಂದಿಗೆ ಸಂಸ್ಕರಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ಇದೀಗ ಕಳಪೆ ಗುಣಮಟ್ಟದ ಅಡಿಕೆಯ ಮೇಲೆ ದಾಳಿ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಸುಳಿವಿನ ಮೇರೆಗೆ ಡಿಸಿಪಿ ನಿಕೇತನ್ ಕದಂ ಅವರ ಮೇಲ್ವಿಚಾರಣೆಯಲ್ಲಿ ಹಿರಿಯ ಇನ್ಸ್ಪೆಕ್ಟರ್ ಗೋಕುಲ್ ಮಹಾಜನ್ ಅವರ ಕಲಾಮ್ನಾ ಪೊಲೀಸ್ ತಂಡವು ಕಳಪೆ ಗುಣಮಟ್ಟದ ಅಡಿಕೆ ವಶಪಡಿಸಿಕೊಂಡಿದೆ.
ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್ ಉಚಿತ(Free Current). ಇಂಥ…
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…
ಈಗಿನ ಪ್ರಕಾರ ಮೇ 21 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದೆ. ಮುಂಗಾರು…
ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು…
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ…
ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…