Advertisement
ಹೊಸರುಚಿ-ಅಡುಗೆ

ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!

Share

ಮಳೆಗಾಲದಲ್ಲಿ ಹಲಸಿನ ಕಾಯಿ ಸಾಕಷ್ಟು ಲಭ್ಯವಾಗುವ ಸಮಯ. ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಯನ್ನು ಬಳಸಿ ಯಾವುದೇ ಎಣ್ಣೆ ಅಥವಾ ಬೇಯಿಸುವ ಪ್ರಕ್ರಿಯೆಯಿಲ್ಲದೆ ಸುಲಭವಾಗಿ ತಯಾರಿಸಬಹುದಾದ ಈ “ಜಾಕ್‌ಫ್ರೂಟ್ ಸ್ಪೈಸಿ” ಆರೋಗ್ಯಕರ ಹಾಗೂ ರುಚಿಕರ ಸ್ನ್ಯಾಕ್ ಆಗಿದೆ. ಸಿಹಿ, ಖಾರ ಮತ್ತು ಹುಳಿಯ ಸಮ್ಮಿಶ್ರ ರುಚಿಯ ಈ ತಿನಿಸು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವಂತದ್ದು.

ಬೇಕಾಗುವ ಸಾಮಗ್ರಿಗಳು

  • ಹಲಸಿನ ಕಾಯಿ – ¾ ಕಪ್ (ಸ್ವಲ್ಪ ಸಿಹಿ ರುಚಿಯದು)
  • ಗರಂ ಮಸಾಲ – 1 ಟೀ ಚಮಚ
  • ಚಾಟ್ ಮಸಾಲ – ½ ಟೀ ಚಮಚ
  • ಒರೆಗಾನೋ – ½ ಟೀ ಚಮಚ
  • ಡ್ರೈ ಮ್ಯಾಂಗೋ ಪೌಡರ್ (ಅಮ್ಚೂರ್) – ½ ಟೀ ಚಮಚ
  • ಜೀರಿಗೆ ಪುಡಿ – 1 ಟೀ ಚಮಚ
  • ಕೊತ್ತಂಬರಿ ಪುಡಿ – ½ ಟೀ ಚಮಚ
  • ಚಿಲ್ಲಿ ಫ್ಲೇಕ್ಸ್ – ¼ ಟೀ ಚಮಚ
  • ಕಾಳುಮೆಣಸಿನ ಪುಡಿ – ¼ ಟೀ ಚಮಚ

ಗಮನಿಸಿ: ಈ ರೆಸಿಪಿಗೆ ಉಪ್ಪು ಅಗತ್ಯವಿಲ್ಲ. ಹಲಸಿನ ಕಾಯಿಯ ಸಹಜ ಸಿಹಿ ರುಚಿ ಮತ್ತು ಮಸಾಲೆಗಳ ಸಂಯೋಜನೆಯೇ ಅದ್ಭುತ ರುಚಿಯನ್ನು ನೀಡುತ್ತದೆ.

ತಯಾರಿಸುವ ವಿಧಾನ :  ಒಂದು ಪಾತ್ರೆಯಲ್ಲಿ ಹಲಸಿನ ಕಾಯಿಯನ್ನು ಹಾಕಿ. ನಂತರ ಮೇಲಿನ ಎಲ್ಲಾ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಕ್ಷಣವೇ ಸವಿಯಲು ಸಿದ್ಧ! ಯಾವುದೇ ಎಣ್ಣೆ ಅಥವಾ ಹೆಚ್ಚುವರಿ ಪದಾರ್ಥಗಳ ಅಗತ್ಯವಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Spicy Jackfruit is a quick, healthy snack made by mixing sweet jackfruit pieces with aromatic spices like garam masala, chaat masala, oregano, cumin, coriander, dry mango powder, chilli flakes, and black pepper. No cooking or extra salt is needed, making it a delicious sweet, spicy, and tangy treat.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

Published by
ದಿವ್ಯ ಮಹೇಶ್

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

1 hour ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

7 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

16 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

19 hours ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

1 day ago