ಸಾಧನೆ ಎನ್ನುವುದು ಏಕಾಏಕಿ ಸಿಗುವ ಫಲವಲ್ಲ. ನಮಗೆ ಕಾಣುವುದು ಫಲಿತಾಂಶಗಳು ಮಾತ್ರಾ. ಅದರ ಹಿಂದಿನ ಶ್ರಮ ಕಾಣದು. “ಅವನು ಮಾಡಿದ, ನಾನೂ ಮಾಡುವೆ” ಎಂದರೆ ಸಾಧ್ಯವಿಲ್ಲ. ಈ ಸಾಧನೆಯು ಪ್ರತಿದಿನದ ಸಣ್ಣ ಪ್ರಯತ್ನಗಳ, ಸೋಲುಗಳಿಂದ ಕಲಿತ ಪಾಠಗಳು ಮತ್ತು ಕೈ ಬಿಡದ ಮನೋಭಾವದ ಫಲ. ಎಲ್ಲರಿಗೂ ಯಶಸ್ಸು ಒಂದೇ ರೀತಿಯಲ್ಲಿ ಬರುವುದಿಲ್ಲ; ಆದರೆ ಪ್ರಯತ್ನ ಮಾಡುವ ಹಕ್ಕು ಎಲ್ಲರಿಗೂ ಸಮಾನ. ಕೆಲವೊಮ್ಮೆ ನಮ್ಮ ಶ್ರಮಕ್ಕೆ ತಕ್ಷಣ ಫಲ ಸಿಗದಿರಬಹುದು. ಆದರೆ ಆ ಕ್ಷಣಗಳೇ ನಮ್ಮೊಳಗಿನ ಶಕ್ತಿಯನ್ನು ಹೆಚ್ಚುಗೊಳಿಸುತ್ತವೆ. ನಿಂತುಬಿಟ್ಟರೆ ಸಾಧನೆ ಇಲ್ಲ; ನಡೆಯುತ್ತಲೇ ಇದ್ದರೆ ದಾರಿ ತಾನಾಗಿಯೇ ಕಾಣುತ್ತದೆ.
ಭಗವದ್ಗೀತೆ ಹೇಳುವಂತೆ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂದರೆ, ನಿನಗೆ ಹಕ್ಕಿರುವುದು ಕರ್ಮಕ್ಕೆ ಮಾತ್ರ, ಫಲದ ಮೇಲೆ ಅಲ್ಲ. ಫಲದ ಬಗ್ಗೆ ಅತಿಯಾಗಿ ಚಿಂತಿಸದೆ, ಇಂದಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದಾಗ ಯಶಸ್ಸು ತನ್ನ ಸಮಯಕ್ಕೆ ತಾನೇ ಬರುತ್ತದೆ. ಪ್ರತಿದಿನದ ಶ್ರಮವೇ ನಾಳೆಯ ಸಾಧನೆಗೆ ಬೀಜ. ಇಂದು ನಂಬಿಕೆ ಇಟ್ಟು ಮಾಡಿದ ಕೆಲಸವೇ, ನಾಳೆ ಬದುಕಿಗೆ ಹೊಸ ಅರ್ಥ ಕೊಡುತ್ತದೆ. ಅದರ ಜೊತೆಗೇ, ಇನ್ನೊಬ್ಬನ ಸಾಧನೆಗೂ ಅಡ್ಡಿಯಾಗಬೇಡ, ಮರುಗಬೇಡ, ಮತ್ಸರವೂ ಪಡಬೇಡ. ಸಾಧ್ಯವಾದರೆ ಬೆನ್ನುತಟ್ಟು, ಸಾಧನೆಯ ದಾರಿಯನ್ನು ತಿಳಿ, ಅದೂ ಅನುಭವ ಕೊಡುತ್ತದೆ… ಶುಭದಿನ…
ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…
PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…
ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…
ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…
ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…
ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…