MIRROR FOCUS

ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಿದ ನೀರೆ | ಸತತ ಶ್ರಮದ ಮೂಲಕ ಗಂಗೆಯನ್ನು ಒಲಿಸಿಕೊಂಡ ಗೌರಿ |

Share

ತಮ್ಮ ಜೀವನ ನಿರ್ವಹಣೆಗಾಗಿ ಛಲತೊಟ್ಟು ಕೆಲಸ ಮಾಡಿ ಸಾಧಿಸಿರುವ ಬಹಳ ಮಂಂದಿಯನ್ನು ನಾವು ನೋಡಿದ್ದೇವೆ. ಆದರೆ ಏಕಾಂಗಿಯಾಗಿ ಬೇರೆಯವರಿಗಾಗಿ ಜೀವನ ಸವೆಸಿದವರು ಕೇವಲ ಬೆರಳೆಣಿಕೆಯವರು ಮಾತ್ರ. ಅಂಥವರಲ್ಲಿ ಉತ್ತರ ಕನ್ನಡದ(Uttara Kannada) ಶಿರಸಿಯ(Sirsi) ಗೌರಿ ಪರಮೇಶ್ವರ್ ನಾಯ್ಕ್(Gowri Parameshwar Naik) ಅವರು ಕೂಡ ಒಬ್ಬರು. ಈಕೆ ಮಾಡಿದ ಸಾಧನೆ ಅಂತಿಂಥದ್ದಲ್ಲ. ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗೆ(Anganavadi Children) ಗೌರಿ ಅವರು ಬಾವಿ(Well) ತೋಡಿದ್ದಾರೆ. ಇದೀಗ ತಮ್ಮ ಪ್ರಯತ್ನದ ಫಲವಾಗಿ ಬಾವಿಯಲ್ಲಿ ಗಂಗೆ ಕಂಡು ಗೌರಿ ಖುಷಿಯಿಂದ ಭಾವುಕರಾಗಿದ್ದಾರೆ. ಮಾಮೂಲಿ ಭೂಮಿಯಾಗಿದ್ದ ಜಾಗದಲ್ಲಿ ನಿರಂತರ ಒಂದು ತಿಂಂಗಳ ಗೌರಿ ಪರಮೇಶ್ವರ್ ನಾಯ್ಕ್ ಅವರ ಶ್ರಮದ ಫಲವಾಗಿ ಕುಡಿಯುವ ನೀರಿನ (Water) ಬಾವಿ ಕಾಣುತ್ತಿದೆ.

Advertisement

ನಿರಂತರವಾಗಿ ಬಾವಿ ತೋಡಿದ ಗೌರಿ : ಶಿರಸಿ ಗಣೇಶನಗರದಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ ಈಗ ದಿನ ಕಳೆದು ದಿನಕ್ಕೆ ಬಿಡುತ್ತಿರುವ ನೀರು ಸಣ್ಣ ಮಕ್ಕಳ ಆರೋಗ್ಯಕ್ಕೆ ಆಗಿ ಬರೋದಿಲ್ಲ. ಹೀಗಾಗಿ ಈ ಅಂಗನವಾಡಿಯ ಶಿಕ್ಷಕಿ ತಮ್ಮ ಅಂಗನವಾಡಿಯಿಂದ 100 ಮೀಟರ್ ದೂರದಲ್ಲಿ ಇರುವ ಗೋವಿಂದ ನಾಯ್ಕ್ ಅವರ ಮನೆಯ ಬಾವಿಯಿಂದ ಕ್ಯಾನ್‍ಗಳಲ್ಲಿ ನೀರು ತೆಗೆದುಕೊಂಡು ಬರುತ್ತಿದ್ದರು. ಇದನ್ನು ಕಂಡ ಗೌರಮ್ಮನವರು ಬಾವಿ ತೋಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಜನವರಿ 30 ರಿಂದ ನಿರಂತರವಾಗಿ ಬಾವಿ ತೋಡಿದ್ದಾರೆ. ಯಾವುದೇ ಅಡ್ಡಿ ಬಂದರೂ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.

ಫೋಟೋ ಕೃಪೆ – ಶಿವಾನಂದ ಕಳವೆ

ನಿಸ್ವಾರ್ಥ ಸೇವೆ : 55 ವರ್ಷದ ಗೌರಿ ಅವರು ಛಲ ಬಿಡದೇ ಮಕ್ಕಳಿಗಾಗಿ 45 ಅಡಿ ಬಾವಿ ತೋಡಿ ನೀರು ತರಿಸಿದ್ದಾರೆ, ನೀರು ಬಂದಿದ್ದು ಕಂಡು ಭಾವುಕರಾಗಿದ್ದಾರೆ. ನಿಸ್ವಾರ್ಥ ಸೇವೆ ಮಾಡಿದ ಗೌರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗೌರಿ ಪರಮೇಶ್ವರ್ ನಾಯ್ಕ್ ಅವರು ಈ ಹಿಂದೆ ಕೂಡ ಎರಡು ಬಾವಿಯನ್ನು ಏಕಾಂಗಿಯಾಗಿ ತೆಗೆದಿದ್ದರು. 55 ಅಡಿ ಹಾಗೂ 60 ಅಡಿ ಆಳದ ಬಾವಿಯನ್ನು ಇವರು ತಮ್ಮ ತೋಟದ ಬಳಕೆಗೆ ಹಾಗೂ ಸಾರ್ವಜನಿಕರ ಬಳಕೆಗಾಗಿ ತೆಗೆದಿದ್ದರು.

Source : ಅಂತರ್ಜಾಲ ಹಾಗೂ ಶಿವಾನಂದ ಕಳವೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…

8 hours ago

ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |

ಈಗಿನಂತೆ ಎಪ್ರಿಲ್ 26ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆರಂಭವಾಗುವ ನಿರೀಕ್ಷೆ ಇದೆ.

8 hours ago

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

23 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

23 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

23 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

23 hours ago