Advertisement
MIRROR FOCUS

ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಿದ ನೀರೆ | ಸತತ ಶ್ರಮದ ಮೂಲಕ ಗಂಗೆಯನ್ನು ಒಲಿಸಿಕೊಂಡ ಗೌರಿ |

Share

ತಮ್ಮ ಜೀವನ ನಿರ್ವಹಣೆಗಾಗಿ ಛಲತೊಟ್ಟು ಕೆಲಸ ಮಾಡಿ ಸಾಧಿಸಿರುವ ಬಹಳ ಮಂಂದಿಯನ್ನು ನಾವು ನೋಡಿದ್ದೇವೆ. ಆದರೆ ಏಕಾಂಗಿಯಾಗಿ ಬೇರೆಯವರಿಗಾಗಿ ಜೀವನ ಸವೆಸಿದವರು ಕೇವಲ ಬೆರಳೆಣಿಕೆಯವರು ಮಾತ್ರ. ಅಂಥವರಲ್ಲಿ ಉತ್ತರ ಕನ್ನಡದ(Uttara Kannada) ಶಿರಸಿಯ(Sirsi) ಗೌರಿ ಪರಮೇಶ್ವರ್ ನಾಯ್ಕ್(Gowri Parameshwar Naik) ಅವರು ಕೂಡ ಒಬ್ಬರು. ಈಕೆ ಮಾಡಿದ ಸಾಧನೆ ಅಂತಿಂಥದ್ದಲ್ಲ. ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗೆ(Anganavadi Children) ಗೌರಿ ಅವರು ಬಾವಿ(Well) ತೋಡಿದ್ದಾರೆ. ಇದೀಗ ತಮ್ಮ ಪ್ರಯತ್ನದ ಫಲವಾಗಿ ಬಾವಿಯಲ್ಲಿ ಗಂಗೆ ಕಂಡು ಗೌರಿ ಖುಷಿಯಿಂದ ಭಾವುಕರಾಗಿದ್ದಾರೆ. ಮಾಮೂಲಿ ಭೂಮಿಯಾಗಿದ್ದ ಜಾಗದಲ್ಲಿ ನಿರಂತರ ಒಂದು ತಿಂಂಗಳ ಗೌರಿ ಪರಮೇಶ್ವರ್ ನಾಯ್ಕ್ ಅವರ ಶ್ರಮದ ಫಲವಾಗಿ ಕುಡಿಯುವ ನೀರಿನ (Water) ಬಾವಿ ಕಾಣುತ್ತಿದೆ.

Advertisement
Advertisement
Advertisement
Advertisement

ನಿರಂತರವಾಗಿ ಬಾವಿ ತೋಡಿದ ಗೌರಿ : ಶಿರಸಿ ಗಣೇಶನಗರದಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ ಈಗ ದಿನ ಕಳೆದು ದಿನಕ್ಕೆ ಬಿಡುತ್ತಿರುವ ನೀರು ಸಣ್ಣ ಮಕ್ಕಳ ಆರೋಗ್ಯಕ್ಕೆ ಆಗಿ ಬರೋದಿಲ್ಲ. ಹೀಗಾಗಿ ಈ ಅಂಗನವಾಡಿಯ ಶಿಕ್ಷಕಿ ತಮ್ಮ ಅಂಗನವಾಡಿಯಿಂದ 100 ಮೀಟರ್ ದೂರದಲ್ಲಿ ಇರುವ ಗೋವಿಂದ ನಾಯ್ಕ್ ಅವರ ಮನೆಯ ಬಾವಿಯಿಂದ ಕ್ಯಾನ್‍ಗಳಲ್ಲಿ ನೀರು ತೆಗೆದುಕೊಂಡು ಬರುತ್ತಿದ್ದರು. ಇದನ್ನು ಕಂಡ ಗೌರಮ್ಮನವರು ಬಾವಿ ತೋಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಜನವರಿ 30 ರಿಂದ ನಿರಂತರವಾಗಿ ಬಾವಿ ತೋಡಿದ್ದಾರೆ. ಯಾವುದೇ ಅಡ್ಡಿ ಬಂದರೂ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.

Advertisement
ಫೋಟೋ ಕೃಪೆ – ಶಿವಾನಂದ ಕಳವೆ

ನಿಸ್ವಾರ್ಥ ಸೇವೆ : 55 ವರ್ಷದ ಗೌರಿ ಅವರು ಛಲ ಬಿಡದೇ ಮಕ್ಕಳಿಗಾಗಿ 45 ಅಡಿ ಬಾವಿ ತೋಡಿ ನೀರು ತರಿಸಿದ್ದಾರೆ, ನೀರು ಬಂದಿದ್ದು ಕಂಡು ಭಾವುಕರಾಗಿದ್ದಾರೆ. ನಿಸ್ವಾರ್ಥ ಸೇವೆ ಮಾಡಿದ ಗೌರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗೌರಿ ಪರಮೇಶ್ವರ್ ನಾಯ್ಕ್ ಅವರು ಈ ಹಿಂದೆ ಕೂಡ ಎರಡು ಬಾವಿಯನ್ನು ಏಕಾಂಗಿಯಾಗಿ ತೆಗೆದಿದ್ದರು. 55 ಅಡಿ ಹಾಗೂ 60 ಅಡಿ ಆಳದ ಬಾವಿಯನ್ನು ಇವರು ತಮ್ಮ ತೋಟದ ಬಳಕೆಗೆ ಹಾಗೂ ಸಾರ್ವಜನಿಕರ ಬಳಕೆಗಾಗಿ ತೆಗೆದಿದ್ದರು.

Source : ಅಂತರ್ಜಾಲ ಹಾಗೂ ಶಿವಾನಂದ ಕಳವೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

4 days ago