Advertisement
ಅನುಕ್ರಮ

“ ಉಪವಾಸ” ಎನ್ನುವ ವ್ರತ

Share

ನಾಡಿನಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಹಬ್ಬದ ಪ್ರಯುಕ್ತ ನಾನಾ ಬಗೆಯ ಭಕ್ಷ್ಯಗಳ ಭೂರಿ ಭೋಜನ ಸವಿಯುವವರು ಒಂದೆಡೆಯಾದರೆ, ಕಟ್ಟುನಿಟ್ಟಿನ “ಉಪವಾಸ” ವ್ರತ ಕೈಗೊಳ್ಳುವವರೂ ಅನೇಕರು. ಅದರಲ್ಲೂ ನವರಾತ್ರಿ ಹಬ್ಬದ ಒಂಬತ್ತು ದಿನ ಉಪವಾಸ ಮಾಡುವುದರಿಂದ ದುರ್ಗಾ ಮಾತೆಯ ಅನುಗ್ರಹ ಲಭಿಸುವುದು ಎನ್ನುವ ನಂಬಿಕೆ ಇದೆ.

“ಉಪ” ಎಂದರೆ ಹತ್ತಿರ, “ವಾಸ” ಎಂದರೆ ವಾಸಿಸು. ಅರ್ಥಾಥ್‍ ದೇವರಿಗೆ ಸನಿಹವಾಗುವುದು. ಶುದ್ಧ ಮನಸ್ಸಿನಿಂದ ಉಪವಾಸ ವ್ರತ ಕೈಗೊಳ್ಳುವುದರಿಂದ ಮನಸ್ಸು, ದೇಹ, ಆತ್ಮ ಪರಿಶುದ್ಧವಾಗುತ್ತದೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಪವಾಸಕ್ಕೆ ಮಹತ್ತರವಾದ ಸ್ಥಾನಮಾನವಿದೆ.

ಇದು “ನವರಾತ್ರಿ”ಗೆ ಮಾತ್ರ ಸೀಮಿತವಾಗದೆ ಸುಬ್ರಹ್ಮಣ್ಯ ಷಷ್ಠಿ, ಕಿರುಷಷ್ಠಿ, ಏಕಾದಶಿ, ವಾರದ ಒಂದು ದಿನ ಹೀಗೆ ನಾನಾ ದಿನಗಳಂದು ವ್ರತ ಪಾಲಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಭೂರಿ ಭೋಜನಗಳು ಕಣ್ಣ ಮುಂದೆ ಇದ್ದರೂ ತಿನ್ನದೆ ಇರುವುದರಿಂದ ವ್ಯಕ್ತಿ ತನ್ನ ಆಸೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲನಾಗುತ್ತಾನೆ.

ವಿವಿಧ ಪ್ರಕಾರದ ಉಪವಾಸಗಳು:

* ವಾರದ ಒಂದು ದಿನ ತಮ್ಮತಮ್ಮ ಇಷ್ಟ ದೇವರಿಗಾಗಿ ಮಾಡುವ ಉಪವಾಸ. ಮಂಗಳವಾರ ಹನುಮಂತನಿಗಾಗಿ, ಶನಿವಾರ ಉಪವಾಸ ಮಾಡುವುದು ಶನಿ ದೇವರ ಅನುಗ್ರಹ ಪಡೆಯಲು ಎನ್ನುವ ನಂಬಿಕೆ ಇದೆ.
* ನವರಾತ್ರಿ, ಶಿವರಾತ್ರಿ, ಷಷ್ಠಿ, ಹಬ್ಬಹರಿದಿನಗಳಂತಹ ವಿಶೇಷ ದಿನಗಳಂದು ಮಾಡುವ ಉಪವಾಸ.
* ಧಾರ್ಮಿಕ ಹಾಗು ದೈಹಿಕ ದೃಷ್ಟಿಯಿಂದ ಮಾಡುವ ಉಪವಾಸ. ನಿಗದಿತ ದಿನದಂದು ಉಪ್ಪು, ಸಿಹಿ, ಖಾರ ಇಲ್ಲದ ಆಹಾರ ಸೇವನೆ ಮಾಡುವುದು. ಇದು ಬಿಪಿ ಹಾಗು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ.
* ಕೇವಲ ಫಲಾಹಾರಇಲ್ಲವೇ ದ್ರವಾಹಾರ ಸೇವನೆ ಮಾಡುವುದೂ ಕೂಡಾ ಉಪವಾಸದ ಒಂದು ವಿಧ.

ಪ್ರಯೋಜನಗಳು:

*ಉಪವಾಸ ಇರುವುದರಿಂದ ದೇಹದ ಪಚನಕಾರಿ ಅಂಗಗಳಿಗೆ ವಿಶ್ರಾಂತಿ ಸಿಗುತ್ತದೆ.
*ಮನಸ್ಸು ಹಾಗು ಹೃದಯವನ್ನು ಶುದ್ಧ ಮಾಡುತ್ತದೆ.
*ಉಪವಾಸವಿರುವುದರಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಯುಕ್ತ ವಸ್ತುಗಳನ್ನು ನಾಶಮಾಡುತ್ತದೆ.
*ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಡುತ್ತದೆ.
*ಮನುಷ್ಯನನ್ನು ಮಾನಸಿಕ ಹಾಗು ದೈಹಿಕವಾಗಿ ಬಲಿಷ್ಟಗೊಳಿಸುತ್ತದೆ.

ನೆಂಟರಿಷ್ಟರು, ಗೆಳೆಯರು, ನೆರೆಹೊರೆಯವರು ಉಪವಾಸ ವ್ರತ ಕೈಗೊಳ್ಳುತ್ತಾರೆಂದು ಯಾರೂ ಉಪವಾಸ ಮಾಡಬಾರದು. ಎಲ್ಲರೂ ಅವರವರ ದೇಹ ಸ್ಥಿತಿಗೆ ಅನುಗುಣವಾಗಿ ವ್ರತ ಪಾಲನೆ ಮಾಡಿದರೆ ಒಳ್ಳೆಯದು. 24ಗಂಟೆ ಉಪವಾಸ ಇರಲು ಸಾಧ್ಯವಿಲ್ಲದಿದ್ದರೆ 10ರಿಂದ 12 ಗಂಟೆಗಳ ಕಾಲವಿದ್ದು ನಂತರ ಮಿತವಾಗಿ ಹಣ್ಣು ಹಂಪಲು ಸೇವಿಸಬೇಕು. ಇದರಿಂದ ತಲೆಸುತ್ತುವಿಕೆ, ನಿಶ್ಯಕ್ತಿಯಂತಹ ಸಮಸ್ಯೆ ಬಾಧಿಸದು. ಜೊತೆಗೆ ಉಪವಾಸ ಬಿಡುವಾಗಲೂ ಅಷ್ಟೇ ಹಸಿವಾಗಿದೆ ಎಂದು ಅತಿಯಾಗಿ ತಿನ್ನದೇ ಮಿತ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಅಜೀರ್ಣವಾಗುವ ಸಾಧ್ಯತೆ ಇದೆ.

-ವಂದನಾರವಿ ಕೆ.ವೈ.ವೇಣೂರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!

ಭಾರತದ ಎಮ್ಮೆ ಮಾಂಸ ರಫ್ತು 2025-26ರಲ್ಲಿ 5.1 ಬಿಲಿಯನ್ ಡಾಲರ್ ತಲುಪಿದ್ದು, 2026-27ರಲ್ಲಿ…

6 hours ago

ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ

ಓಣಂ ಹಬ್ಬದ ಸಂದರ್ಭದ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕೃಷಿ ಇಲಾಖೆ ನಡೆಸಿದ…

13 hours ago

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನವೂ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು,…

15 hours ago

ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?

ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32.42ರಷ್ಟು ಹೆಚ್ಚಾದರೂ, ಉತ್ಪಾದನೆ…

16 hours ago

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

1 day ago