ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಹಾಗೂ ಎಸೆಯುವುದು ಕಡಿಮೆ ಮಾಡಲು ಪುಣೆಯ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಅಧಿಕಾರಿಗಳು ವಿನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಇದರ ಭಾಗವಾಗಿ ಪೂನಾದಲ್ಲಿ ಮೂರು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ವಡಾ ಪಾವ್ ಅನ್ನು ಉಚಿತವಾಗಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಗಮನಿಸಿ ಅನೇಕರು ಪ್ರತಿದಿನ ಪ್ಲಾಸ್ಟಿಕ್ ಬಾಟಲಿಗಳನ್ನು ತಂದು ಕೊಡುತ್ತಿದ್ದಾರೆ. ನಂತರ ಇಲ್ಲಿಂದ ವಡಾ ಪಾವ್ ಮತ್ತು ಚಹಾವನ್ನು ತೆಗೆದುಕೊಂಡು ಕುಡಿಯುತ್ತಾರೆ. ಈ ವಿಶೇಷ ಮಳಿಗೆಗಳಿಗೆ ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಶನ್ನಿಂದ ಹಣ ನೀಡಲಾಗುತ್ತದೆ.
ಸ್ವೀಕರಿಸಿದ ಪ್ಲಾಸ್ಟಿಕ್ ಮರುಬಳಕೆಗಾಗಿ ಕೆಲವು ಕಂಪನಿಗಳಿಗೆ ಹಿಂತಿರುಗಿಸಲಾಗುತ್ತದೆ. ಇದರಿಂದ ಜನರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆಯಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಆದೇಶದಲ್ಲಿ ಯಶವಂತ್ ರಾವ್ ಚವ್ಹಾಣ ಮಾರ್ಗ ಪಿಂಪ್ರಿ, ಕೇಶವ ನಗರ ಶಾಸ್ತ್ರಿನಗರ ಕಾಸರ್ ವಾಡಿ ಮತ್ತು ಸಂತ ಗಜಾನನ ಮಂದಿರ ಚಿಂಚ್ ವಾಡಾದಲ್ಲಿ ಶಾಖೆಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ಅನಿಲ್ ರಾಯ್ ತಿಳಿಸಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿರಾಡಿ ಘಾಟಿಯಲ್ಲಿ ಪ್ರತಿ ವಾರಾಂತ್ಯ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ಗೆ ವಿಶೇಷ ಸಂಚಾರ ನಿರ್ವಹಣಾ…
ಜುಲೈ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ…
ಕಾಪುವಿನಲ್ಲಿ ನಡೆದ 9ನೇ ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ 390 ಆಟಗಾರರು…
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಕಾಸರಗೋಡು ಜಿಲ್ಲೆಯಲ್ಲಿ ಜುಲೈ 1ರಂದು ಎಲ್ಲಾ ಶಿಕ್ಷಣ…
ಯಾದಗಿರಿ ಜಿಲ್ಲೆಯಲ್ಲಿ ಮಳೆ ಕೊರತೆಯ ಸಾಧ್ಯತೆಯಿರುವುದರಿಂದ ರೈತರು ಬೆಳೆ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವಂತೆ…
ಮಲೆನಾಡು ಮತ್ತು ಶಿರಾಡಿ ಘಾಟಿಯ ಮಳೆಗಾಲದ ಸೌಂದರ್ಯ ಪ್ರಕೃತಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಆದರೆ ಈ…